Don't Miss!
- Sports RCB: 'ಗೋ ಗ್ರೀನ್' ಭಾಗವಾಗಿ 3 ಕೆರೆಗಳ ಅಭಿವೃದ್ಧಿಪಡಿಸಿದ ಆರ್ಸಿಬಿ
- Finance ನಾಳೆ ಬೆಂಗಳೂರಿನಲ್ಲಿ ಚಿಕನ್, ಮಟನ್ ಮಾರಾಟಕ್ಕೆ ನಿಷೇಧ
- News 5 ವರ್ಷಗಳಲ್ಲಿ ಕರ್ನಾಟಕ ಸಂಸದರ ಸಾಧನೆ ಏನು? ಅಧ್ಯಯನ ಹೇಳೋದೇನು?
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸುಶಾಂತ್ ಸಿಂಗ್ ಅನ್ನು ಸಿನಿಮಾವೊಂದರಿಂದ ಹೊರಹಾಕಲಾಗಿತ್ತು: ಸಂಜಯ್ ರಾವತ್
ಮಹಾರಾಷ್ಟ್ರದ ರಾಜಕಾರಣಿ, ಶಿವಸೇನಾ ಪಕ್ಷದ ಪ್ರಮುಖ ಮುಖಂಡ ಸಂಜಯ್ ರಾವತ್, ಇತ್ತೀಚೆಗಷ್ಟೆ ಆತ್ಮಹತ್ಯೆ ಮಾಡಿಕೊಂಡು ಹತರಾದ ಸುಶಾಂತ್ ಸಿಂಗ್ ಬಗ್ಗೆ ಸಂಪಾದಕೀಯ ಬರೆದಿದ್ದಾರೆ.
ಸುಶಾಂತ್ ಸಿಂಗ್ ಅವರು ಬಾಲಿವುಡ್ನ ಗುಂಪುಗಾರಿಕೆಗೆ, ಸ್ವಜನಪಕ್ಷಪಾತಕ್ಕೆ ಬಲಿಪಶು ಆಗಿದ್ದರು ಎಂದು ಆರೋಪಿಸಲಾಗುತ್ತಿದೆ. ಈ ಬಗ್ಗೆ ದೊಡ್ಡ ಚರ್ಚೆಯೇ ಎದ್ದಿದೆ. ಈ ನಡುವೆ ಸುಶಾಂತ್ ಅವರನ್ನು ಮುಖ್ಯವಾದ ಸಿನಿಮಾ ಒಂದರಿಂದ ತೆಗೆದು ಹಾಕಲಾಗಿತ್ತು ಎಂದು ಶಿವಸೇನಾದ ಮುಖವಾಣಿ ಸಾಮ್ನಾದಲ್ಲಿ ಬರೆದಿದ್ದಾರೆ ರಾವತ್.
ಸುಶಾಂತ್ ಸಿಂಗ್ ನೆನಪಲ್ಲಿ ಮಹತ್ಕಾರ್ಯಕ್ಕೆ ಮುಂದಾದ ಕುಟುಂಬ
ದೇಶದ ಪ್ರಮುಖ ರಾಜಕೀಯ ನೇತ, ಮಾಜಿ ಮಂತ್ರಿ ಜಾರ್ಜ್ ಫರ್ನಾಂಡೀಸ್ ಅವರ ಜೀವನ ಆಧರಿತ ಸಿನಿಮಾದಲ್ಲಿ ಜಾರ್ಜ್ ಫರ್ನಾಂಡೀಸ್ ಪಾತ್ರವನ್ನು ಸುಶಾಂತ್ ಸಿಂಗ್ ಮಾಡಬೇಕಿತ್ತು. ಆದರೆ ಆ ಸಿನಿಮಾದಿಂದ ಅವರನ್ನು ಹೊರಗೆ ಹಾಕಲಾಯಿತಂತೆ.
ಜಾರ್ಜ್ ಫರ್ನಾಂಡೀಸ್ ಪಾತ್ರಕ್ಕಾಗಿ ಸುಶಾಂತ್ ಸಿಂಗ್ ಅವರನ್ನು ಕೇಳಲಾಗಿತ್ತಂತೆ, ಆದರೆ ಅವರ ಮಾನಸಿಕ ಸ್ಥಿತಿ ಗಮನಿಸಿ ಅವರನ್ನು ಸಿನಿಮಾದಿಂದ ಕೈಬಿಡಲಾಯಿತಂತೆ. ಹೀಗೆಂದು ಸಂಜಯ್ ರಾವತ್ ಸಾಮ್ನಾ ದಲ್ಲಿ ಬರೆದಿದ್ದಾರೆ.
ಕರಣ್ ಜೋಹರ್ ಶೋದಲ್ಲಿ ಸುಶಾಂತ್ ಬಗ್ಗೆ ಇಮ್ರಾನ್ ಹಶ್ಮಿ ಆಡಿದ್ದ ಮಾತುಗಳಿವು...
ಅಷ್ಟೆ ಅಲ್ಲದೆ, ಸುಶಾಂತ್ ಸಿಂಗ್ ಚಿತ್ರೀಕರಣದ ಸೆಟ್ಗಳಲ್ಲಿ ಭಿನ್ನವಾಗಿ ವರ್ತಿಸುತ್ತಿದ್ದರಂತೆ, ಅವರು ಮಾನಸಿಕ ಸಮತೋಲನ ಕಳೆದುಕೊಂಡಂತೆ ವರ್ತಿಸುತ್ತಿದ್ದರಂತೆ. ಇದರಿಂದ ಸೆಟ್ನಲ್ಲಿರುವವರಿಗೆ ಸಮಸ್ಯೆ ಆಗುತ್ತಿತ್ತಂತೆ.