Don't Miss!
- Automobiles Honda: ಭಾರತದಲ್ಲಿ ಹೋಂಡಾ ಹೊಸ ಮೈಲಿಗಲ್ಲು: ಎಷ್ಟು ಮಂದಿಯ ಬಳಿ ಆಕ್ಟೀವಾ, ಶೈನ್ ಇದೆ ಹೇಳಿ?
- Lifestyle ವಿಶ್ವದಲ್ಲೇ ಅತೀ ಹೆಚ್ಚು ಬಾರಿ ಚುನಾವಣೆ ಸೋತ ವ್ಯಕ್ತಿ..! ಯಾರು ಈ ಸೋಲುವ ಸರದಾರ ಗೊತ್ತಾ?
- News India Unemployment: ದೇಶದಲ್ಲಿ ಯುವ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಳ: ಬೆಚ್ಚಿಬೀಳಿಸುವ ವರದಿ ಬಹಿರಂಗ!
- Finance ನಿಮಗೆ ಗೊತ್ತಲ್ಲದೇ ನಿಮ್ಮ ಹೆಸರಲ್ಲಿ ಖಾತೆ ತೆರೆದಿರ್ತಾರೆ, ಪಿಂಚಣಿ ಯೋಜನೆ ಬಗ್ಗೆ ಹುಷಾರಾಗಿರಿ
- Sports IPL 2024: ಐಪಿಎಲ್ನಲ್ಲಿ ವಿಶಿಷ್ಟ ದಾಖಲೆ ಬರೆದ ಜಯದೇವ್ ಉನಾದ್ಕಟ್; ಈ ಸಾಧನೆ ಮಾಡಿದ ಮೊದಲ ಭಾರತೀಯ
- Technology iPhones: ಬೇಕಿತ್ತಾ ಇದೆಲ್ಲ? ನಕಲಿ ಐಫೋನ್ ಮೂಲಕ ಆಪಲ್ಗೆ ಪಂಗನಾಮ ಹಾಕಿದವನಿಗೆ ಜೈಲೂಟ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಐಟಿ ಅಧಿಕಾರಿಗಳು ನನ್ನ ಮನೆಯಲ್ಲಿ ಮೂರು ವಸ್ತುಗಳಿಗಾಗಿ ಹುಡುಕಾಡಿದರು: ತಾಪ್ಸಿ
ನಟಿ ತಾಪ್ಸಿ ಪನ್ನು ಹಾಗೂ ಅನುರಾಗ್ ಕಶ್ಯಪ್ ಮನೆ ಹಾಗೂ ಕಚೇರಿಗಳ ಮೇಲೆ ಮಾರ್ಚ್ 3 ರಂದು ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದರು.
ಐಟಿ ರೇಡ್ ಆದ ಮೂರು ದಿನಗಳ ಬಳಿಕ ಇಂದು ತಾಪ್ಸಿ ಪನ್ನು ಟ್ವಿಟ್ಟರ್ನಲ್ಲಿ ಐಟಿ ರೇಡ್ ವಿಷಯವನ್ನು ಹಂಚಿಕೊಂಡಿದ್ದು, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನನ್ನ ಮನೆಯಲ್ಲಿ ಮೂರು ವಿಷಯಗಳಿಗಾಗಿ ಹುಡುಕಾಟ ನಡೆಸಿದರು ಎಂದು ಹೇಳಿದ್ದಾರೆ.
ಮೂರು ದಿನಗಳ ಕಾಲ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬಹಳ ಉಗ್ರವಾಗಿ ಮೂರು ವಸ್ತುಗಳಿಗಾಗಿ ಹುಡುಕಾಟ ನಡೆಸಿದರು ಎಂದಿರುವ ತಾಪ್ಸಿ ಆ ಮೂರು ವಸ್ತುಗಳು ಯಾವುದು ಎಂದು ಟ್ವಿಟ್ಟರ್ನಲ್ಲಿ ಹೇಳಿದ್ದಾರೆ.
ನಾನು ಪ್ಯಾರಿಸ್ನಲ್ಲಿ ಕೊಂಡುಕೊಂಡಿದ್ದೆ ಎನ್ನಲಾಗುತ್ತಿರುವ ಬಂಗ್ಲೆಯ ಬೀಗವನ್ನು ಅವರು ಹುಡುಕಾಡಿದರು. ಬೇಸಿಗೆ ರಜೆಗಳು ಹತ್ತಿರ ಬರುತ್ತಿದೆಯಲ್ಲ ಅದಕ್ಕಾಗಿ ಅವರು ಬಂಗ್ಲೆಯ ಬೀಗ ಹುಡುಕುತ್ತಿರಬಹುದು ಎಂದಿದ್ದಾರೆ ತಾಪ್ಸಿ ಪನ್ನು.
ನಾನು ಪಡೆದಿದ್ದೇನೆ ಎನ್ನಲಾಗುತ್ತಿರುವ ಐದು ಕೋಟಿ ಹಣದ ರಸೀದಿಗಾಗಿ ಅವರು ಬಹಳ ಹುಡುಕಾಟ ನಡೆಸಿದರು. ನನ್ನನ್ನು 'ಫ್ರೇಮ್' ಮಾಡಲು ಹಾಗೂ ಮುಂದೆ ನನ್ನನ್ನು ಹೆದರಿಸಲು ಅದು ಬಹಳ ಅವಶ್ಯಕವಾಗಿತ್ತು ಎಂದು ವ್ಯಂಗ್ಯ ಮಾಡಿದ್ದಾರೆ ತಾಪ್ಸಿ ಪನ್ನು.
ನಮ್ಮ ಗೌರವಾನ್ವಿತ ಹಣಕಾಸು ಸಚಿವೆ ಹೇಳಿರುವಂತೆ 2013 ರಲ್ಲಿ ನನ್ನ ಮೇಲೆ ಐಟಿ ರೇಡ್ ಆಗಿತ್ತು, ಆ ಐಟಿ ರೇಡ್ನ ನೆನಪಿಗಾಗಿ ಅವರು ಹುಡುಕಾಡಿರಬಹುದು ಎಂದು ಕಾಲೆಳೆದಿದ್ದಾರೆ ತಾಪ್ಸಿ ಪನ್ನು. ಟ್ವೀಟ್ನ ಕೊನೆಯಲ್ಲಿ 'ನಾನು ಅಗ್ಗದ ನಟಿ ಅಲ್ಲ' ಎಂದು ಸಹ ಹೇಳಿದ್ದಾರೆ ತಾಪ್ಸಿ. ನಟಿ ಕಂಗನಾ, ತಾಪ್ಸಿಯನ್ನು 'ಸಸ್ತಾ ನಟಿ' (ಅಗ್ಗದ ನಟಿ) ಎಂದು ಕರೆದಿದ್ದರು.
ಅನುರಾಗ್ ಕಶ್ಯಪ್ ಹಾಗೂ ತಾಪ್ಸಿ ಪನ್ನು ಮೇಲೆ 2013 ರಲ್ಲಿಯೇ ಆದಾಯ ತೆರಿಗೆ ಇಲಾಖೆ ದಾಳಿ ನಡೆದಿತ್ತು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದರು. ಆದರೆ ಅನುರಾಗ್ ಕಶ್ಯಪ್ ವಿರುದ್ಧ ಮಾತ್ರವೇ ಐಟಿ ರೇಡ್ ಆಗಿತ್ತು. ತಾಪ್ಸಿ ಪನ್ನು ಮೇಲೆ ಇದೇ ಮೊದಲ ಬಾರಿಗೆ ಐಟಿ ರೇಡ್ ಆಗಿದೆ.
Recommended Video
ತಾಪ್ಸಿ ಪನ್ನು ಹಾಗೂ ಅನುರಾಗ್ ಕಶ್ಯಪ್ ಇಬ್ಬರೂ ಸಹ ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಮಾತನಾಡುತ್ತಿದ್ದರು. ಅವರನ್ನು ಹೆದರಿಸಿ ಮೌನವಾಗಿಸಲು ಈ ಐಟಿ ರೇಡ್ ಆಗಿದೆ ಎನ್ನಲಾಗುತ್ತಿದೆ.
-
ದರ್ಶನ್ ಒಂದು ಮಾತು ಹೇಳಿದ್ದಕ್ಕೆ ಬದಲಾಯ್ತು ಅಭಿಮಾನಿ ಜೀವನ; 100 ಪ್ಲೇಟ್ ಸೇಲ್ ಆಗ್ತಿದ್ದ ಚಾಟ್ಸ್ 200ಕ್ಕೆ ಏರಿಕೆ
-
100 ಜನ ನೋಡುತ್ತಿರುವಾಗ ಕಾರಿನಲ್ಲಿ ಲಿಪ್ಲಾಕ್ ಸೀನ್; 'ಪ್ರೇಮಂ' ಬ್ಯೂಟಿ ಅನುಪಮಾ ಪರಮೇಶ್ವರನ್ ಹೇಳಿದ್ದೇನು?
-
"ನನಗೆ 38 ವರ್ಷ.. ಮಕ್ಕಳು ಮಾಡಿಕೊಳ್ಳುವ ಬಗ್ಗೆ ಹೇಳಲಾರೆ"; ಪ್ರೆಗ್ನೆನ್ಸಿ ಬಗ್ಗೆ ವರಲಕ್ಷ್ಮಿ ಶರತ್ ಕುಮಾರ್ ಹೇಳಿದ್ದೇನು?