Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಉಸಿರಾಟದ ತೊಂದರೆ ತಬೂ ಆಸ್ಪತ್ರೆಗೆ ದಾಖಲು
ಹಿಂದಿ ಚಿತ್ರರಂಗದ ಪ್ರತಿಭಾವಂತ ನಟಿ ತಬೂ ಅವರನ್ನು ಸೋಮವಾರ ಆಸ್ಪತ್ರೆಗೆ ಸೇರಿಸಲಾಗಿದೆ. ವಿಶಾಲ್ ಭಾರದ್ವಾಜ್ ಅವರ ಹೈದರ್ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ತಬೂ ಅವರು ಅಸ್ವಸ್ಥರಾಗಿದ್ದು, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕಾಶ್ಮೀರದಲ್ಲಿ
ಹೈದರ್
ಸಿನಿಮಾದ
ಚಿತ್ರೀಕರಣದ
ಸಂದರ್ಭದಲ್ಲಿ
ತಬೂ
ಅವರಿಗೆ
ಉಸಿರಾಡಲು
ಕಷ್ಟವಾಗಿದೆ.
ತಕ್ಷಣವೇ
ಷೇರ್
ಇ
ಕಾಶ್ಮೀರ್
ಇನ್ಸ್ಟಿಟ್ಯೂಟ್
ಆಫ್
ಮೆಡಿಕಲ್
ಸೈನ್ಸ್(SKIMS)
ಆಸ್ಪತ್ರೆಗೆ
ದಾಖಲಿಸಲಾಗಿದೆ
ಎಂದು
ಚಿತ್ರ
ತಂಡ
ಹೇಳಿದೆ.
ಶ್ರೀನಗರದ
ನಿಷಾದ್
ಪ್ರದೇಶದಲ್ಲಿ
ಶೂಟಿಂಗ್
ನಡೆಯುವಾಗ
ಈ
ಘಟನೆ
ನಡೆದಿದೆ.
ಚಳಿ
ಗಾಳಿಯಿಂದ
ತಪ್ಪಿಸಿಕೊಳ್ಳಲು
ಬೆಂಕಿ
ಶಾಕ
ತೆಗೆದುಕೊಳ್ಳುತ್ತಿದ್ದರು.
ಇಲ್ಲಿನ
ತಂಪು
ವಾತಾವರಣಕ್ಕೆ
ಅವರು
ಒಗ್ಗಿಕೊಂಡಿರಲಿಲ್ಲ
ಎಂದು
ತಿಳಿದು
ಬಂದಿದೆ.
ಶೂಟಿಂಗ್ ಸ್ಥಳದಿಂದ ಸುಮಾರು 13 ಕಿ.ಮೀ ದೂರದಲ್ಲಿದ್ದ ಆಸ್ಪತ್ರೆಗೆ ಆದಷ್ಟು ಬೇಗ ಕರೆದುಕೊಂಡು ಹೋಗಲಾಗಿದೆ. ಚಿತ್ರೀಕರಣದ ಸ್ಥಳದಲ್ಲಿ ಸೂಕ್ತ ಸುರಕ್ಷತೆ ವ್ಯವಸ್ಥೆ ಇರಲಿಲ್ಲ ಎನ್ನಲಾಗಿದೆ. ತಬೂ ಅವರ ಆರೋಗ್ಯ ಪರಿಸ್ಥಿತಿ ಈಗ ಸುಧಾರಿಸಿದೆ. ವಿಶ್ರಾಂತಿ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದಾರೆ.
ಸಂಜೆ ವೇಳೆಗೆ ತಬೂ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದ್ದು, ವಿಶ್ರಾಂತಿ ಪಡೆದುಕೊಳ್ಳದೆ ಮತ್ತೆ ಶೂಟಿಂಗ್ ಮುಂದುವರೆಸಿದರು ಎಂದು ತಿಳಿದು ಬಂದಿದೆ. ವಿಲಿಯಂ ಷೇಕ್ಸ್ ಪಿಯರ್ ಅವರ 'ಹ್ಯಾಮ್ಲೆಟ್' ದುರಂತ ಕಥೆಯನ್ನು ಆಧರಿಸಿ 'ಹೈದರ್' ಹೆಸರಿನಲ್ಲಿ ನಿರ್ದೇಶಕ ವಿಶಾಲ್ ಭಾರದ್ವಾಜ್ ಅವರು ಹಿಂದಿ ಬೆಳ್ಳಿತೆರೆಗೆ ತರುತ್ತಿದ್ದಾರೆ. ಹೈದರ್ ಚಿತ್ರದಲ್ಲಿ ಶಹೀದ್ ಕಪೂರ್, ಶ್ರದ್ಧಾ ಕಪೂರ್, ತಬು ಹಾಗೂ ಇರ್ಫಾನ್ ಕಪೂರ್ ತಾರಾಗಣದಲ್ಲಿದ್ದಾರೆ. ಚಿತ್ರ ನಿರ್ದೇಶಕ, ಸಾಹಿತಿ, ನಿರ್ಮಾಪಕ, ಸಂಗೀತಗಾರ ವಿಶಾಲ್ ಭಾರದ್ವಾಜ್ ಅವರ ಮಕ್ಬೂಲ್ ಚಿತ್ರ ಷೇಕ್ಸ್ ಪಿಯರ್ ಅವರ ಮ್ಯಾಕ್ ಬೆತ್ ಕಥೆ ಆಧರಿಸಿತ್ತು. ಓಂಕಾರ ಚಿತ್ರ ಒಥೆಲೋ ಆಧರಿಸಿದೆ.