Don't Miss!
- News Gold & Silver Price: ಮತ್ತೆ ಏರಿದ ಚಿನ್ನದ ದರ, ಇಂದಿನ ಬೆಳ್ಳಿ-ಬಂಗಾರದ ಬೆಲೆ ವಿವರ ತಿಳಿಯಿರಿ
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಇದೇನಾ ರಾಮರಾಜ್ಯ? ಉತ್ತರ ಕೊಡಿ ಮೋದಿಜೀ : ಪ್ರಧಾನಿಗೆ ತನುಶ್ರೀ ದತ್ತ ಪ್ರಶ್ನೆ
ಬಾಲಿವುಡ್ ನಟಿ ತನುಶ್ರೀ ದತ್ತಾ ಮತ್ತೆ ಸಿಡಿದೆದ್ದಿದ್ದಾರೆ. ನಾನಾಪಾಟೇಕರ್ ವಿರುದ್ಧ ಮೀ ಟೂ ಆರೋಪ ಮಾಡಿದ್ದ ತುನುಶ್ರೀ ದತ್ತಗೆ ಇದೊಂದು ದುರುದ್ದೇಶ ಪೂರಿತ ದೂರು, ಈ ಪ್ರಕರಣ ಸಂಬಂಧ ಯಾವುದೆ ಸಾಕ್ಷ್ಯಗಳು ಲಭ್ಯವಿಲ್ಲ ಎಂದು ಹೇಳಿ ಪೊಲೀಸರು ಕೇಸ್ ಕೈಬಿಟ್ಟಿದ್ದರ ವಿರುದ್ಧ ನಟಿ ತನುಶ್ರೀ ರೊಚ್ಚಿಗೆದ್ದಿದ್ದಾರೆ.
ಬ್ರಷ್ಟಾಚಾರ ರಹಿತ ಭಾರತದಲ್ಲಿ ಏನಾಗುತ್ತಿದೆ. ಉತ್ತರಿಸಿ ಪ್ರಧಾನಿ ನರೇಂದ್ರ ಮೋದಿ ಅವರೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ತುನುಶ್ರೀ ದತ್ತ, "ಆರೋಪಿಯನ್ನು ರಕ್ಷಿಸುವ ಸಲುವಾಗಿ ಪೊಲೀಸರು ನನ್ನ ಎಫ್ ಐ ಆರ್ ಅನ್ನು ತಿರುಚಿದ್ದಾರೆ. ಲೈಂಗಿಕ ದೌರ್ಜನ್ಯ ಆಗಿರುವ ಬಗ್ಗೆ ಫ್ ಐ ಆರ್ ನಲ್ಲಿ ಉಲ್ಲೇಖ ಮಾಡಿದ್ದೆ. ಅಲ್ಲದೆ ನಾನು 2008ರಲ್ಲಿ ಸಿನಿಮಾ ಮತ್ತು ಕಿರುತೆರೆ ಕಲಾವಿದರ ಸಂಘಕ್ಕೂ ದೂರು ನೀಡಿದ್ದೆ. ಆ ಸಂಘ ಕ್ಷಮೆ ಕೂಡ ಕೇಳಿತ್ತು. ಆದ್ರೀಗ ಪೊಲೀಸರು ಆರೋಪಿಯನ್ನು ರಕ್ಷಿಸುವ ಸಲುವಾಗಿ ಎಫ್ ಐ ಆರ್ ಅನ್ನೇ ತಿರುಚಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೀಟೂ ಪ್ರಕರಣದಲ್ಲಿ ನಾನಾ ಪಾಟೇಕರ್ ಗೆ ಬಿಗ್ ರಿಲೀಫ್
ಸಾಕ್ಷ್ಯಾದಾರ ಕೊರತೆಯ ಕಾರಣದಿಂದ ಪ್ರಕರಣ ಕೈ ಬಿಟ್ಟಿರುವ ವಿರುದ್ಧ ರೊಚ್ಚಿಗೆದ್ದ ತನುಶ್ರೀ ಪ್ರಧಾನಿ ಮೋದಿ ಮೊರೆ ಹೋಗಿದ್ದಾರೆ. "ಮೋದಿಜೀ ಏನಾಗುತ್ತಿದೆ ಈ ಬ್ರಷ್ಟಾಚಾರ ರಹಿತ ಭಾರತದಲ್ಲಿ? ದೇಶದ ಹೆಣ್ಣುಮಗಳೊಬ್ಬಳಿಗೆ ಸರಣಿ ಅಪರಾಧಿಯಿಂದ ದೌರ್ಜನ್ಯ ಆಗಿದೆ. ಸಾರ್ವಜನಿಕ ಸ್ಥಳದಲ್ಲಿ ಹಲ್ಲೆ ಯತ್ನ ಆಗಿದೆ. ಆದ್ರೆ ಪೊಲೀಸರು ಮಾತ್ರ ಸಾಕ್ಷ್ಯಾಧಾರದ ಕೊರತೆ ಇದೆ ಎಂದು ಹೇಳುತ್ತಿದ್ದಾರೆ. ಇದೇನಾ ರಾಮ ರಾಜ್ಯ? ಈ ದೇಶದಲ್ಲಿ ಯಾಕೆ ಪದೇ ಪದೇ ಅಸತ್ಯ ಮತ್ತು ಅಧರ್ಮವೇ ಗೆಲ್ಲುತ್ತದೆ? ಉತ್ತರ ಕೊಡಿ ಮೋದಿಜೀ" ಎಂದು ಪ್ರಧಾನ ಮಂತ್ರಿಯನ್ನೆ ಪ್ರಶ್ನಿಸಿದ್ದಾರೆ.
ನಟಿ ತನುಶ್ರೀ ದತ್ತಾ, ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ವಿರುದ್ದ ಲೈಂಗಿಕ ಕಿರುಕುಳ ದೂರು ದಾಖಲಿಸಿದ್ದರು. 'ಹಾರ್ನ್ ಓಕೆ ಪ್ಲೀಸ್' ನ ವಿಶೇಷ ಹಾಡಿನ ಶೂಟಿಂಗ್ ವೇಳೆ ಲೈಂಗಿಕ ಕಿರುಕುಳ ನೀಡಲಾಗಿತ್ತು ಎಂದು ತನುಶ್ರೀ ದತ್ತಾ, ನಾನಾ ವಿರುದ್ದ ಆರೋಪಿಸಿದ್ದರು. ಆದ್ರೀಗ ಸಾಕ್ಷ್ಯಾಧಾರದ ಕೊರತೆಯಿಂದ ಮುಂಬೈ ಪೊಲೀಸರು ಪ್ರಕರಣವನ್ನು ಕೈಬಿಟ್ಟಿದ್ದಾರೆ.