Don't Miss!
- Finance ಎರಡು ದಿನ ಬೆಂಗಳೂರಿನಲ್ಲಿ ಮದ್ಯ ಮಾರಾಟ ನಿಷೇಧ, 144 ಸೆಕ್ಷನ್ ಜಾರಿ, ದಿನಾಂಕ ವಿವರ
- Technology ವಿವೋ T3x 5G ಫೋನಿನ ಫಸ್ಟ್ ಸೇಲ್ ಯಾವಾಗ?..ಆಫರ್ ಬೆಲೆ ಎಷ್ಟು?
- News ₹8 Lakh Gold: ಆಟೋದಲ್ಲೇ ಬಿಟ್ಟಿದ್ದ 8 ಲಕ್ಷ ರೂ. ಚಿನ್ನಾಭರಣವಿದ್ದ ಬ್ಯಾಗ್ ಮರಳಿ ಸಿಕ್ಕಿದ್ದೆ ರೋಚಕ
- Lifestyle ಮೊದಲ ಯತ್ನದಲ್ಲೇ ಯುಪಿಎಸ್ಸಿ ಪಾಸ್..! ಸ್ಫೂರ್ತಿಯಾಗಿದ್ದು ವಿರಾಟ್..!
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Automobiles ವಂದೇ ಭಾರತ್ ಸ್ಲೀಪರ್, ಸೂಪರ್ ಆಪ್.. ರೈಲ್ವೆಯಿಂದ ಬಿಗ್ ಪ್ಲ್ಯಾನ್: ನೀವು ತಿಳಿಯಬೇಕಾದ ವಿಚಾರಗಳಿವು!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಾಲಿವುಡ್ ನ ಐತಿಹಾಸಿಕ ಚಿತ್ರ ರಿಜೆಕ್ಟ್ ಮಾಡಿದ್ದ ಪ್ರಭಾಸ್.! ಆ ಚಿತ್ರ ಈಗ ಸೂಪರ್ ಹಿಟ್
ಎಷ್ಟೇ ದೊಡ್ಡ ಸ್ಟಾರ್ ನಟ ಆದ್ರು, ಕೆಲವು ನಿರ್ದೇಶಕರ ಜೊತೆ ಕೆಲಸ ಮಾಡ್ಬೇಕು ಎಂಬ ಆಸೆ ಇದ್ದೇ ಇರುತ್ತೆ. 'ಬಾಹುಬಲಿ' ಚಿತ್ರದ ಮೂಲಕ ಜಗತ್ಪ್ರಸಿದ್ದವಾದ ತೆಲುಗು ನಟ ಪ್ರಭಾಸ್ ಗೆ ಈಗ ಆಫರ್ ಮೇಲೆ ಆಫರ್ ಬರ್ತಿದೆ. ಕಾರಣ 'ಬಾಹುಬಲಿ' ತಂದುಕೊಟ್ಟ ನೇಮು ಫೇಮು.
'ಬಾಹುಬಲಿ' ಸಿನಿಮಾ ನೋಡಿದ ಅದೆಷ್ಟೋ ನಟರು ಎಸ್ ಎಸ್ ರಾಜಮೌಳಿ ಜೊತೆ ಕೆಲಸ ಮಾಡ್ಬೇಕು ಎಂದುಕೊಂಡಿದ್ದರು ಅಂದ್ರೆ ಅಚ್ಚರಿಯಿಲ್ಲ. ಅದೇ ರೀತಿ ಬಾಲಿವುಡ್ ಸ್ಟಾರ್ ಡೈರೆಕ್ಟರ್ ಸಂಜಯ್ ಲೀಲಾ ಬನ್ಸಾಲಿ ಕೂಡ ತಮ್ಮದೇ ಸ್ಟೈಲ್ ಆಫ್ ಮೇಕಿಂಗ್ ಮೂಲಕ ತುಂಬಾ ವಿಭಿನ್ನವಾಗಿ ಗುರುತಿಸಿಕೊಂಡಿರುವ ನಿರ್ದೇಶಕ. ಈ ಡೈರೆಕ್ಟರ್ ಜೊತೆಯಲ್ಲೂ ಕೆಲಸ ಮಾಡಬೇಕು ಎಂಬುದು ಬಹುತೇಕ ನಟರು ಕನಸು ಅಂದ್ರು ನಂಬಲೇಬೇಕು.
ಇಂತಹ ಸಂಜಯ್ ಲೀಲಾ ಬನ್ಸಾಲಿ ಚಿತ್ರವನ್ನ 'ಬಾಹುಬಲಿ' ನಟ ಪ್ರಭಾಸ್ ತಿರಸ್ಕರಿಸಿದ್ದರು ಎಂಬ ಇಂಟ್ರೆಸ್ಟಿಂಗ್ ವಿಷ್ಯ ಈಗ ಚರ್ಚೆಯಾಗ್ತಿದೆ. ಬಹುದೊಡ್ಡ ಪ್ರಾಜೆಕ್ಟ್ ಸಿನಿಮಾ ಇದಾಗಿತ್ತು. ಆದ್ರೆ, ಇಂತಹ ಚಿತ್ರವನ್ನ ಯಾಕೆ ರಿಜೆಕ್ಟ್ ಮಾಡಿದ್ರು. ಈಗ ಆ ಸಿನಿಮಾ ಸೂಪರ್ ಹಿಟ್ ಆಗಿದೆ. ಯಾವುದು ಆ ಸಿನಿಮಾ.? ಮುಂದೆ ಓದಿ....
'ಪದ್ಮಾವತ್' ಚಿತ್ರಕ್ಕೆ ಆಫರ್ ಮಾಡಲಾಗಿತ್ತು
ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದಲ್ಲಿ ತಯಾರಾಗಿದ್ದ ಐತಿಹಾಸಿಕ ಸಿನಿಮಾ 'ಪದ್ಮಾವತ್' ಚಿತ್ರದಲ್ಲಿ ನಟಿಸುವಂತೆ ಪ್ರಭಾಸ್ ಗೆ ಆಫರ್ ಮಾಡಲಾಗಿತ್ತಂತೆ. ಆಗ 'ಬಾಹುಬಲಿ-2' ಚಿತ್ರದ ಮೇಕಿಂಗ್ ನಲ್ಲಿ ಬ್ಯುಸಿಯಿದ್ದರಂತೆ ಪ್ರಭಾಸ್. ಬಟ್, ತನ್ನ ಪಾತ್ರಕ್ಕೆ ಹೆಚ್ಚಿನ ಬೆಲೆ ಇಲ್ಲ ಎಂಬ ಕಾರಣಕ್ಕೆ ಪದ್ಮಾವತ್ ಚಿತ್ರವನ್ನ ರಿಜೆಕ್ಟ್ ಮಾಡಿದ್ದರಂತೆ ಎಂಬ ವಿಷ್ಯ ಬಹಿರಂಗವಾಗಿದೆ.
ಅನುಷ್ಕಾ ಹಾದಿಯಲ್ಲಿ ನಟಿ ದೀಪಿಕಾ: ಇಟಲಿಯಲ್ಲಿ ರಣ್ವೀರ್ ಜೊತೆ ವಿವಾಹ.?
'ಪದ್ಮಾವತಿ'ಯ ಪತಿಯಾಗಬೇಕಿತ್ತು ಪ್ರಭಾಸ್
ಈ ಮೊದಲೇ ಆಫರ್ ಮಾಡಿದಂತೆ ನಟ ಪ್ರಭಾಸ್ ರಾಣಿ ಪದ್ಮಾವತಿಯ ಪತಿ ಮಹಾರವಲ್ ರತನ್ ಸಿಂಗ್ ಪಾತ್ರ ನಿರ್ವಹಿಸಬೇಕಿತ್ತು. ಬಟ್, ಅಂತಿಮವಾಗಿ ಈ ಪಾತ್ರದಲ್ಲಿ ಬಿ-ಟೌನ್ ಸ್ಟಾರ್ ಶಾಹೀದ್ ಕಪೂರ್ ಕಾಣಿಸಿಕೊಂಡ್ರು.
ಪ್ರಭಾಸ್ ಸಂಭಾವನೆ ಕೇಳಿ ಸಿನಿಮಾ ಡ್ರಾಪ್ ಮಾಡ್ತಿದ್ದಾರಂತೆ ಕರಣ್ ಜೋಹರ್.!
ದೀಪಿಕಾ ಜೋಡಿಯಾಗಲಿಲ್ಲ ಪ್ರಭಾಸ್
'ಪದ್ಮಾವತ್' ಚಿತ್ರದಲ್ಲಿ ನಟಿ ದೀಪಿಕಾ ಪಡುಕೋಣೆ ರಾಣಿ ಪದ್ಮಾವತಿ ಪಾತ್ರವನ್ನ ನಿಭಾಯಿಸಿದ್ದರು. ಪ್ರಭಾಸ್ ಈಕೆಯೆ ಪತಿಯಾಗಬೇಕಿತ್ತು. ಒಂದು ವೇಳೆ ಪ್ರಭಾಸ್ ಈ ಚಿತ್ರವನ್ನ ಒಪ್ಪಿಕೊಂಡಿದ್ದರೇ ದೀಪಿಕಾ ಜೋಡಿಯಾಗಿ ಪ್ರಭಾಸ್ ಅಭಿನಯಿಸುತ್ತಿದ್ದರು. ಆದ್ರೆ, ಈ ಅವಕಾಶ ಮಿಸ್ ಆಯ್ತು.
ಶಾರೂಖ್ ಗೆ ನಾಯಕಿಯಾಗುವ ಆಸಕ್ತಿ ಈ ನಟಿಗೆ ಇಲ್ಲ.!
ದೀಪಿಕಾಗೂ ಮೊದಲು ಐಶ್ ಮಾಡಬೇಕಿತ್ತು
ದೀಪಿಕಾ ಪಡುಕೋಣೆಗೆ ಮೊದಲು ನಟಿ ಐಶ್ವರ್ಯ ರೈ ರಾಣಿ ಪದ್ಮಾವತಿ ಪಾತ್ರ ಮಾಡಬೇಕಿತ್ತಂತೆ. ಇದು ಬನ್ಸಾಲಿ ಅವರ ಮೊದಲ ಆಯ್ಕೆಯೂ ಆಗಿತ್ತು. ಆದ್ರೆ, ಐಶ್ವರ್ಯ ಜೊತೆ ಯಾವ ನಟರನ್ನ ಕರೆತರುವುದು ಎಂಬ ಯೋಚನೆ ನಿರ್ದೇಶಕರಿಗೆ ಕಾಡಿತ್ತು. ಹೀಗಾಗಿ, ಐಶ್ ಕೂಡ ಪ್ರಾಜೆಕ್ಟ್ ನಿಂದ ಹಿಂದೆ ಸರಿಯಲು ನಿರ್ಧರಿಸಿದರು. ಆಗ ಐಶ್ ಬದಲು ದೀಪಿಕಾ ಜೊತೆ ಸಿನಿಮಾ ಮಾಡಿದ್ರಂತೆ ಬನ್ಸಾಲಿ.
ವರ್ಷದ ಬ್ಲಾಕ್ ಬಸ್ಟರ್ ಸಿನಿಮಾ
ವಿವಾದಗಳ ನಡುವೆಯೇ ಬಿಡುಗಡೆಯಾದ 'ಪದ್ಮಾವತ್' ಚಿತ್ರ ಬಾಲಿವುಡ್ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಸೌಂಡ್ ಮಾಡಿತ್ತು. ಚಿತ್ರಕ್ಕೂ ಒಳ್ಳೆಯ ರೆಸ್ಪಾನ್ಸ್ ಪ್ರತಿಕ್ರಿಯೆ ಸಿಕ್ಕಿತ್ತು. ದೀಪಿಕಾ ಪಡುಕೋಣೆ, ಅಲ್ಲಾವುದ್ದೀನ್ ಖಿಲ್ಜಿ ಪಾತ್ರದಲ್ಲಿ ರಣ್ವೀರ್ ಸಿಂಗ್ ಹಾಗೂ ಮಹಾರವಲ್ ರತನ್ ಸಿಂಗ್ ಆಗಿ ಶಾಹೀದ್ ಕಪೂರ್ ಅಭಿನಯಿಸಿದ್ರು.