Don't Miss!
- News ‘ಹೇಳಿ ಸಿದ್ದರಾಮಯ್ಯನವರೇ , ಹಿಂದುಳಿದ ವರ್ಗದ ಮೇಲೆ ನಿಮಗ್ಯಾಕೆ ಈ ಆಕ್ರೋಶ?’
- Sports IPL 2024: ಮತ್ತೊಂದು ರೋಚಕ ಪಂದ್ಯದಲ್ಲಿ SRH vs RCB ಕದನ; ಪಂದ್ಯದ ವಿವರ, ಸಂಭಾವ್ಯ ಆಡುವ 11ರ ಬಳಗ
- Finance ಆರ್ಬಿಐ ಡೆಪ್ಯುಟಿ ಗವರ್ನರ್ ರಬಿ ಶಂಕರ್ ಸೇವಾವಧಿ ವಿಸ್ತರಣೆ
- Automobiles Honda: ಹೊಸ ಮೈಲಿಗಲ್ಲು: ಈ ಭಾಗಗಳಲ್ಲಿ ಹೋಂಡಾ ದ್ವಿಚಕ್ರ ವಾಹನಗಳ ಅಬ್ಬರ
- Technology ರೆಡ್ಮಿ ಸಂಸ್ಥೆಯ ಈ ಅಗ್ಗದ ಫೋನಿನ ಆಫರ್ ಬೆಲೆ ತಿಳಿದ್ರೆ, ನೀವು ವಾವ್ ಅಂತೀರಾ!
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಕ್ಟೋಬರ್ 1 ರಿಂದ ಒಂದು ರಾಜ್ಯದಲ್ಲಿ ಮಾತ್ರ ಚಿತ್ರಮಂದಿರ ಪುನರಾರಂಭ
ದೇಶದಾದ್ಯಂತ ಚಿತ್ರಮಂದಿರಗಳು ಬಂದ್ ಆಗಿ ಏಳು ತಿಂಗಳ ಮೇಲಾದವು. ಕರ್ನಾಟಕದಲ್ಲಿ ಸಹ ಮಾರ್ಚ್ ತಿಂಗಳಿಂದಲೂ ಚಿತ್ರಮಂದಿರಗಳು ತೆರೆದಿಲ್ಲ. ಆದರೆ ಇನ್ನೂ ಸಹ ಚಿತ್ರಮಂದಿರ ತೆರೆಯುವ ಬಗ್ಗೆ ಕೇಂದ್ರ ಸರ್ಕಾರದಿಂದ ಯಾವುದೇ ಸೂಚನೆ ಸಿಕ್ಕಿಲ್ಲ.
ಕೇಂದ್ರವು ಚಿತ್ರಮಂದಿರಗಳನ್ನು ತೆರೆಯುವ ಬಗ್ಗೆ ಸೂಚನೆ ನೀಡದೇ ಇದ್ದರೂ ಸಹ ಒಂದು ರಾಜ್ಯ ಮಾತ್ರ ಅಕ್ಟೋಬರ್ ಒಂದರಿಂದ ಚಿತ್ರಮಂದಿರಗಳನ್ನು ತೆರೆಯುವಂತೆ ಆದೇಶ ಹೊರಡಿಸಿದೆ.
ಹೌದು, ಮಮತಾ ಬ್ಯಾನರ್ಜಿ ಸಿಎಂ ಆಗಿರುವ ಪಶ್ಚಿಮ ಬಂಗಾಳದಲ್ಲಿ ಅಕ್ಟೋಬರ್ 1 ರಿಂದ ಚಿತ್ರಮಂದಿರಗಳು ಪುನಃ ಕಾರ್ಯಾರಂಭ ಮಾಡಲಿವೆ. ಹೀಗೆಂದು ಸರ್ಕಾರವೇ ಆದೇಶ ಹೊರಡಿಸಿದೆ.
ಅಕ್ಟೋಬರ್ 1 ರಿಂದ ಚಿತ್ರಮಂದಿರ ಓಪನ್: ಮಮತಾ ಬ್ಯಾನರ್ಜಿ
ಶನಿವಾರ ಮಾತನಾಡಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, 'ಅಕ್ಟೋಬರ್ 1 ರಿಂದ ರಾಜ್ಯದ ಚಿತ್ರಮಂದಿರಗಳು ಕಾರ್ಯಾರಂಭ ಮಾಡಬಹುದು' ಎಂದಿದ್ದಾರೆ. ಚಿತ್ರಮಂದಿರಗಳು ಕಾರ್ಯಾರಂಭ ಮಾಡುವ ಮುನ್ನಾ ಪೂರ್ಣ ಸ್ಯಾನಿಟೈಸ್ ಆಗಬೇಕಿವೆ. ಜೊತೆಗೆ ಕೆಲವು ನಿಯಮಗಳನ್ನು ಪಾಲಿಸಬೇಕಿವೆ.
ಮನೊರಂಜನಾತ್ಮಕ ಕಾರ್ಯಕ್ರಮ ಆಯೋಜನೆಗೆ ಒಪ್ಪಿಗೆ
ಚಿತ್ರಮಂದಿರಗಳು ಮಾತ್ರವೇ ಅಲ್ಲದೆ, ಸಂಗೀತ, ನೃತ್ಯ ಕಾರ್ಯಕ್ರಮಗಳು, ಇನ್ನಿತರೆ ಮನೊರಂಜನಾತ್ಮಕ ಕಾರ್ಯಕ್ರಮಗಳ ಆಯೋಜನೆ ಸಹ ಮಾಡಲು ಅಕ್ಟೋಬರ್ 1ರಿಂದ ಅವಕಾಶ ನೀಡಲಾಗಿದೆ. ಜಾತ್ರೆ, ರಥೋತ್ಸವಗಳಿಗೂ ಅನುಮತಿ ನೀಡಲಾಗಿದೆ.
ಸೀಟುಗಳ ನಡುವೆ ಅಂತರ ಇಟ್ಟು ಪ್ರೇಕ್ಷಕರು ಕೂರಬೇಕು
ಪ.ಬಂಗಾಳದಲ್ಲಿ ಚಿತ್ರಮಂದಿರಗಳು ತೆರೆದರೂ ಸಹ ಕೇವಲ 50 ಮಂದಿಗೆ ಅಷ್ಟೆ ಕೂರಲು ಅವಕಾಶ ನೀಡಲಾಗಿದೆ. ದೊಡ್ಡ ಚಿತ್ರಮಂದಿರವಾಗಿದ್ದಲ್ಲಿ ಸೀಟಿನ ನಡುವೆ ಅಂತರ ಬಿಟ್ಟು ಕೂರಲು ಪ್ರೇಕ್ಷಕನಿಗೆ ಕೂರಲು ಅವಕಾಶ ನೀಡಲಾಗಿದೆ.
Recommended Video
ರಾಜ್ಯದಲ್ಲಿ ಚಿತ್ರಮಂದಿರಗಳು ತೆರೆಯಬಹುದೇ?
ದೇಶದಾದ್ಯಂತ ಮಾರ್ಚ್ ತಿಂಗಳಿಂದ ಚಿತ್ರಮಂದಿರಗಳು ಬಂದ್ ಆಗಿವೆ. ರಾಜ್ಯದಲ್ಲೂ ಸಹ ಚಿತ್ರಮಂದಿರಗಳು ಬಂದ್ ಆಗಿವೆ. ಸಿನಿಮಾ ಪ್ರಮುಖರು ಸಿಎಂ ಅನ್ನು ಭೇಟಿ ಮಾಡಿ ಚಿತ್ರಮಂದಿರಗಳನ್ನು ತೆರೆಯಲು ಅವಕಾಶ ಕೇಳಿದ್ದಾರಾದರೂ ಆ ಬಗ್ಗೆ ಸಿಎಂ ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ.