Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಿಕೃಷ್ಟ ಸ್ಥಿತಿಯಲ್ಲಿ ನಟ ಇರ್ಫಾನ್ ಖಾನ್ ಸಮಾಧಿ: ಪತ್ನಿ ಕೊಟ್ಟ ಕಾರಣವೇನು?
ಖ್ಯಾತ ನಟ ಇರ್ಫಾನ್ ಖಾನ್ ಅಭಿಮಾನಿಗಳನ್ನಗಲಿ ಕೆಲವು ತಿಂಗಳಷ್ಟೆ ಆಗಿವೆ. ಇರ್ಫಾನ್ ಅಗಲಿದಾಗ ಆತನನ್ನು ಹೊಗಳಿದ ಜನ, ಮಾಧ್ಯಮಗಳು, ಕುಟುಂಬ ದಿನಗಳು ಕಳೆಯುತ್ತಿದ್ದಂತೆ, ಇರ್ಫಾನ್ ಅನ್ನು ಮರೆತುಬಿಟ್ಟರೆ ಎಂಬ ಅನುಮಾನ ಎದ್ದಿದೆ.
ಹೌದು, ನಟ ಇರ್ಫಾನ್ ಖಾನ್ ಅವರ ಸಮಾಧಿ ಅತ್ಯಂತ ನಿಕೃಷ್ಟ ಸ್ಥಿತಿಯಲ್ಲಿದೆ. ಸ್ವಚ್ಛಗೊಳಿಸದೆ, ಸಮಾಧಿಯನ್ನು ಭದ್ರವೂ ಮಾಡದೆ ಬೇಕಾ-ಬಿಟ್ಟಿಯಾಗಿ ಬಿಡಲಾಗಿದೆ. ಇರ್ಫಾನ್ ಸಮಾಧಿ ಸುತ್ತ ಕಳೆ ಬೆಳೆದು ಕೆಟ್ಟದಾಗಿ ಕಾಣುತ್ತಿದೆ ಸಮಾಧಿ.
ಇರ್ಫಾನ್ ಸಮಾಧಿಯ ಕೆಟ್ಟ ಸ್ಥಿತಿಯ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಬಹುವಾಗಿ ವೈರಲ್ ಆಗುತ್ತಿದೆ. ತಮ್ಮ ಅಭಿಮಾನದ ನಟನ ಸಮಾಧಿಗೆ ಇಂಥಹಾ ಸ್ಥಿತಿ ಒದಗಿದ್ದಕ್ಕೆ ಅಭಿಮಾನಿಗಳು ಅವರ ಕುಟುಂಬದವರನ್ನು, ಪತ್ನಿ ಸುತಾಪಾರನ್ನು ಪ್ರಶ್ನೆ ಮಾಡಿದ್ದಾರೆ.
ಇರ್ಫಾನ್ ಪತ್ನಿಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ
ಇರ್ಫಾನ್ ಖಾನ್ ಸಮಾಧಿಗೆ ಭೇಟಿ ಕೊಟ್ಟಿದ್ದವರೊಬ್ಬರು, ಇರ್ಫಾನ್ ಪತ್ನಿ ಸುತಾಪಾಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಕೇಳಿದ್ದು, 'ಸಮಾಧಿಯ ಮೇಲೆ ರಾತ್ ಕೀ ರಾಣಿ' ಗಿಡ ನೆಟ್ಟುದಾಗಿ ಹೇಳಿದ್ದರಿ, ಅದು ಎಲ್ಲಿದೆ, ಸಮಾಧಿಯನ್ನು ಏಕೆ ಯಾರೂ ನೋಡಿಕೊಳ್ಳುತ್ತಿಲ್ಲ, ಏಕೆ ಇಷ್ಟು ಬೇಜವಾಬ್ದಾರಿ?' ಎಂದು ಪ್ರಶ್ನಿಸಿದ್ದಾರೆ.
'ಮಹಿಳೆಯರನ್ನು ಮಸೀದಿ ಒಳಗೆ ಬಿಡುವುದಿಲ್ಲ, ಹಾಗಾಗಿ ನಾನು ಹೋಗಿಲ್ಲ'
ಕಾರಣ ನೀಡಿರುವ ಸುತಾಪಾ, 'ಮಹಿಳೆಯರನ್ನು ಮಸೀದಿಯ ಒಳಗೆ ಬಿಡುವುದಿಲ್ಲ, ಹಾಗಾಗಿ ನಾನು ಇರ್ಫಾನ್ ಸಮಾಧಿಗೆ ಹೋಗಿಲ್ಲ. ಹಾಗೂ ನಾನು ರಾತ್ ಕೀ ರಾಣಿ ಗಿಡ ನೆಟ್ಟದ್ದು, ನಾನು ಇರ್ಫಾನ್ನ ನೆನಪಿಗಾಗಿ ನನ್ನದೇ ಜಮೀನಿನಲ್ಲಿ ನೆಟ್ಟಿದ್ದೇನೆ, ಅಲ್ಲಿ ನಾನು ಗಿಡ ನೆಟ್ಟಿದ್ದೇನೆ, ಅಲ್ಲಿ ಯಾರ ಅಂಜಿಕೆ ಇಲ್ಲದೆ ಗಂಟೆಗಳ ನಾನು ಕೂತಿರುತ್ತೇನೆ' ಎಂದಿದ್ದಾರೆ.
'ಮಳೆಯ ಕಾರಣ ಕಳೆ ಗಿಡಗಳು ಬೇಗ ಬೆಳೆಯುತ್ತಿವೆ'
ಇನ್ನು ಸಮಾಧಿ ಸುತ್ತ ಕಳೆ ಬೆಳೆದಿರುವ ಬಗ್ಗೆ ಮಾತನಾಡಿದ ಸಫಾ, 'ಸಮಾಧಿಯನ್ನು ನೋಡಿಕೊಳ್ಳತ್ತಲೇ ಇದ್ದೇವೆ. ಆದರೆ ಮಳೆ ಬರುತ್ತಿರುವ ಕಾರಣ ಆ ಕಳೆ ಗಿಡಗಳು ಬಹುಬೇಗನೆ ಬೆಳೆಯುತ್ತಿವೆ. ಅವುಗಳನ್ನು ಸ್ವಚ್ಛ ಮಾಡಿದರೂ ಮತ್ತೆ-ಮತ್ತೆ ಬರುತ್ತವೆ' ಎಂದಿದ್ದಾರೆ ಸುತಾಪಾ.
Recommended Video
ಯಾವುದೋ ಉದ್ದೇಶಕ್ಕೆ ಬೆಳೆದಿರಬಹುದು: ಸುತಾಫಾ
'ಎಲ್ಲವೂ ನಿಯಮಬದ್ಧವಾಗಿಯೇ ಇರಬೇಕೆಂದು ಏಕೆ ಬಯಸುತ್ತೀರಿ. ಆ ಕಳೆಯ ಗಿಡಗಳು ಯಾವುದೋ ಉದ್ದೇಶಕ್ಕಾಗಿ ಬೆಳೆದಿರಬಹುದು ಒಮ್ಮೆ ಚಿತ್ರವನ್ನು ಗಮನವಿಟ್ಟು ನೋಡಿ' ಎಂದಿದ್ದಾರೆ ಸುತಾಪಾ.