Don't Miss!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Sports DC vs GT IPL 2024: ಡೆಲ್ಲಿ ಕೋಟೆಯಲ್ಲಿ ವಿಜಯದ ಪತಾಕೆ ಹಾರಿಸುತ್ತಾ ಗುಜರಾತ್?; ಟಾಸ್ ವರದಿ, ಆಡುವ ಬಳಗ
- News ಲೋಕಸಭಾ ಚುನಾವಣೆ 2024: ಮತದಾನಕ್ಕೆ ಸಕಲ ಮಂಡ್ಯ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ
- Lifestyle 5 ಸೆಕೆಂಡ್ನಲ್ಲಿ ಈ ಚಿತ್ರದಲ್ಲಿರುವ ಮೇಕೆ ಮಾಲೀಕನ ಹುಡುಕಿ..! ಎಲ್ಲಿದ್ದಾನೆ ಗೊತ್ತಾ?
- Technology Bengaluru: ಆ ಆಪ್ ಇನ್ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹುತಾತ್ಮ ಯೋಧರಿಗೆ ನೆರವಾದ 'ಉರಿ' ಚಿತ್ರತಂಡ: ಎಷ್ಟು ಹಣ ನೀಡಿದ್ರು?
Recommended Video
ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ 45ಕ್ಕೂ ಅಧಿಕ ಜನ ಭಾರತೀಯಿ ಯೋಧರು ಹುತಾತ್ಮರಾದರು. ಈ ಘಟನೆಯನ್ನ ಇಡೀ ವಿಶ್ವವೇ ಖಂಡಿಸಿದ್ದು, ಪ್ರತೀಕಾರಕ್ಕಾಗಿ ಒತ್ತಾಯ ಹೆಚ್ಚುತ್ತಿದೆ.
ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಯೋಧರ ಕುಟುಂಬಗಳಿಗೆ ದೇಶದ ಹಲವು ಪ್ರಮುಖರು, ಸಾರ್ವಜನಿಕರು ನೆರವಾಗಿದ್ದಾರೆ. ತಮ್ಮ ಕೈಲಾದ ಸಹಾಯವನ್ನ ಮೃತ ಯೋಧರ ಕುಟುಂಬಗಳಿಗೆ ಮಾಡ್ತಿದ್ದಾರೆ.
ಹುತಾತ್ಮ ಯೋಧರ ಕುಟುಂಬದ ನೆರವಿಗೆ ಬಂದ ಬಚ್ಚನ್
ಬಾಲಿವುಡ್ ಸೂಪರ್ ಹಿಟ್ ಸಿನಿಮಾ ಉರಿ ಚಿತ್ರತಂಡ ಮೃತ ಯೋಧರ ಕುಟುಂಬಗಳಿಗೆ 1 ಕೋಟಿ ಧನ ಸಹಾಯ ಮಾಡಿದ್ದು, ಆರ್ಮಿ ವೆಲ್ಫೆರ್ ಫಂಡ್ ಗೆ ಚೆಕ್ ನೀಡಿದೆ.
ಹುತಾತ್ಮ ಯೋಧ ಗುರು ಕುಟುಂಬಕ್ಕೆ ಧನ ಸಹಾಯ ಮಾಡಿದ 'ಬೆಲ್ ಬಾಟಂ' ತಂಡ
ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಕೂಡ ಹುತಾತ್ಮ ಯೋಧರ ಕುಟುಂಬಗಳಿಗೆ ನೆರವಾಗಿದ್ದು, ತಲಾ 5 ಲಕ್ಷ ಹಣ ನೀಡಲಿದ್ದಾರಂತೆ. ಕೇವಲ ಬಾಲಿವುಡ್ ಸ್ಟಾರ್ ಗಳು ಮಾತ್ರವಲ್ಲದೇ ಕನ್ನಡದ 'ಬೆಲ್ ಬಾಟಮ್' ಚಿತ್ರತಂಡ ಮತ್ತು 'ಕೆಮಿಸ್ಟ್ರಿ ಆಪ್ ಕರಿಯಪ್ಪಾ' ಚಿತ್ರಗಳು ಕರ್ನಾಟಕ ಮೂಲದ ಯೋಧ ಗುರು ಕುಟುಂಬಕ್ಕೆ ಸಹಾಯ ಮಾಡಿದ್ದಾರೆ.
'ಉರಿ' ಸಿನಿಮಾ ಚೆನ್ನಾಗಿದೆ ಅಂತಾವ್ರೆ, ಕಲೆಕ್ಷನ್ ಎಷ್ಟು ಗೊತ್ತಾ?
ಅಂದ್ಹಾಗೆ, ಉರಿ ಚಿತ್ರವೂ ಉಗ್ರದಾಳಿಯ ಬಗ್ಗೆ ಮತ್ತು ಉಗ್ರರನ್ನ ಹತ್ಯೆ ಮಾಡಲು ನಡೆದ ಸರ್ಜಿಕಲ್ ಸ್ಟ್ರೈಕ್ ಕುರಿತಾಗಿ ಮೂಡಿಬಂದಿರುವ ಸಿನಿಮಾ. 2016ರ ಸೆಪ್ಟೆಂಬರ್ 18ರಂದು ಉರಿ ಸೇನಾ ನೆಲೆಯ ಮೇಲೆ ಪಾಕಿಸ್ತಾನದ ನಾಲ್ವರು ಭಯೋತ್ಪಾದಕರು ದಾಳಿ ಮಾಡ್ತಾರೆ. ಈ ವೇಳೆ 19 ಸೈನಿಕರು ಹುತಾತ್ಮರಾಗುತ್ತಾರೆ. ಇದಕ್ಕೆ ಉತ್ತರ ನೀಡಲು ಭಾರತದ ಯೋಧರು ಸೆಪ್ಟೆಂಬರ್ 28-29ರಂದು ಸರ್ಜಿಕಲ್ ಸ್ಟ್ರೈಕ್ ನಡೆಸುತ್ತಾರೆ. ಇದಕ್ಕಾಗಿ ಭಾರತೀಯ ಸೇನೆಯ ಸಿದ್ಧತೆ ಹೇಗಿತ್ತು, ದಾಳಿ ವೇಳೆ ಎದುರಾದ ಕಷ್ಟಗಳೇನು ಎಂಬುದೇ ಉರಿ ಸಿನಿಮಾ.