Don't Miss!
- News ಚಾಮರಾಜನಗರ: 12 ವರ್ಷಗೊಳಿಗೊಮ್ಮೆ ನಡೆಯುವ ಈ ಜಾತ್ರೆಯಲ್ಲಿ ಎಲ್ಲರನ್ನೂ ಬಯ್ಯೋದೇ ವಿಶೇಷ.!-ಬೈಗಳು ಹೇಗಿರುತ್ತವೆ ಗೊತ್ತಾ?
- Automobiles ಭಾರತದ ರಸ್ತೆಯಲ್ಲಿ ಘರ್ಜಿಸಲು ಬಂದ ಪವರ್ಫುಲ್ ಎಪ್ರಿಲಿಯಾ ಬೈಕ್ ವಿತರಣೆ ಮಾಹಿತಿ ಬಹಿರಂಗ
- Finance ಸಾಂಬಾರು ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿ, ಇಂದು 276ಕ್ಕೂ ಹೆಚ್ಚು ಚಿನ್ನಾಭರಣ ಮಳಿಗೆಗಳ ಒಡೆಯ!
- Lifestyle ಹಸುವಿನ ಹಾಲಿನಿಂದ ಇಡೀ ವಿಶ್ವಕ್ಕೆ ಇನ್ಸುಲಿನ್..! ಹೊಸ ಅಧ್ಯಯನದಲ್ಲಿ ಬಹಿರಂಗ.!
- Sports ಆರ್ಸಿಬಿ ಸ್ಟಾರ್ ಶ್ರೇಯಾಂಕಾ ಪಾಟೀಲ್ ಬಗ್ಗೆ ನಿಮಗೆಷ್ಟು ಗೊತ್ತು?; ಶಿಕ್ಷಣ, ವಯಸ್ಸು, ಕೌಟುಂಬಿಕ ಹಿನ್ನೆಲೆ ಬಗ್ಗೆ ಮಾಹಿತಿ
- Technology Samsung: ಸ್ಯಾಮ್ಸಂಗ್ನ ಮುಂಬರುವ ಫೋಲ್ಡಬಲ್ ಫೋನ್ ನೀವು ಊಹಿಸಲಾಗದ ಅಗ್ಗದ ಬೆಲೆಗೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶಿವಸೇನಾ ಸೇರುವ ವದಂತಿ ತಳ್ಳಿ ಹಾಕಿದ ಊರ್ಮಿಳಾ ಮತೋಡ್ಕರ್
ಕಾಂಗ್ರೆಸ್ನಿಂದ ಚುನಾವಣೆ ಸ್ಪರ್ಧಿಸಿ ಸೋಲುಂಡು, ನಂತರ ಕಾಂಗ್ರೆಸ್ಗೆ ರಾಜೀನಾಮೆ ನೀಡಿದ್ದ ನಟಿ ಊರ್ಮಿಳಾ ಮತೋಡ್ಕರ್, ಶಿವಸೇನಾ ಪಕ್ಷ ಸೇರ್ಪಡೆಗೊಳ್ಳುತ್ತಾರೆ ಎನ್ನಲಾಗಿತ್ತು, ಆ ಬಗ್ಗೆ ಸ್ವತಃ ಊರ್ಮಿಳಾ ಮತೋಡ್ಕರ್ ಸ್ಪಷ್ಟನೆ ನೀಡಿದ್ದಾರೆ.
ಗಾಳಿಸುದ್ದಿಗಳಿಗೆ ತೆರೆ ಎಳೆದಿರುವ ಊರ್ಮಿಳಾ ಮತೋಡ್ಕರ್, 'ಶಿವಸೇನಾ ಪಕ್ಷ ಸೇರುವುದಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.
ಶಿವಸೇನಾ ಪಕ್ಷವು ಊರ್ಮಿಳಾ ಮತೋಡ್ಕರ್ ಅವರನ್ನು ಎಂಎಲ್ಸಿ ಅನ್ನಾಗಿ ಮಾಡುತ್ತಿದೆ ಎಂಬ ಸುದ್ದಿ ದಟ್ಟವಾಗಿ ಹರಿದಾಡಿತ್ತು. ಮಹಾರಾಷ್ಟ್ರ ಸಿಎಂ ಆಪ್ತ, ಹರ್ಷಲ್ ಪ್ರಧಾನ್, 'ಸಿಎಂ ಉಪಸ್ಥಿತಿಯಲ್ಲಿ ಊರ್ಮಿಳಾ ಮತೋಡ್ಕರ್ ಶಿವಸೇನಾ ಪಕ್ಷ ಸೇರಲಿದ್ದಾರೆ' ಎಂದಿದ್ದರು.
ಆದರೆ ಎಲ್ಲವನ್ನೂ ಸುಳ್ಳುಸುದ್ದಿ ಎಂದು ಕರೆದಿರುವ ಊರ್ಮಿಳಾ ಮತೋಡ್ಕರ್, 'ನಾನು ಶಿವಸೇನಾ ಪಕ್ಷ ಸೇರುತ್ತಿಲ್ಲ' ಎಂದು ಹೇಳಿದ್ದಾರೆ. ಆಂಗ್ಲ ಪತ್ರಿಕೆಯೊಂದಕ್ಕೆ ಕೊಟ್ಟ ಸಂದರ್ಶನದಲ್ಲಿ ಅವರು ಹೀಗೆ ಹೇಳಿದ್ದಾರೆ.
ಮುಂಬೈ ಉತ್ತರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಟಿ ಊರ್ಮಿಳಾ ಮತೋಡ್ಕರ್ ಸ್ಪರ್ಧಿಸಿದ್ದರು. ಆದರೆ ಚುನಾವಣೆಯಲ್ಲಿ ಸೋಲನುಭವಿಸಿದರು ಊರ್ಮಿಳಾ. ನಂತರ ಪಕ್ಷದ ಆಂತರಿಕ ಕಾರಣದ ನೆಪವೊಡ್ಡಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದರು ಊರ್ಮಿಳಾ.
ಕೆಲವು ದಿನಗಳ ಹಿಂದೆ ಕಂಗನಾ ಜೊತೆ ಟ್ವಿಟ್ಟರ್ ವಾಗ್ವಾದದಲ್ಲಿ ಸಿಲುಕಿದ್ದರು ಊರ್ಮಿಳಾ, ನಟಿ ಊರ್ಮಿಳಾರನ್ನು 'ಸಾಫ್ಟ್ ಪಾರ್ನ್' ನಟಿ ಎಂದು ಕರೆದಿದ್ದರು ಕಂಗನಾ.