Don't Miss!
- News ದೇವನಹಳ್ಳಿ, ಹೊಸಕೋಟೆ, ದೊಡ್ಡಬಳ್ಳಾಪುರ & ನೆಲಮಂಗಲ ಹೊಸ ಉಪನಗರ: ಡಾ. ಕೆ. ಸುಧಾಕರ್ ಭರವಸೆ!
- Finance ಜಗತ್ತಿನಾದ್ಯಂತ 6,000 ಉದ್ಯೋಗಿಗಳನ್ನು ವಜಾ ಮಾಡಿದ ಡೆಲ್
- Automobiles ಬುಕ್ ಮಾಡಿದ ರೈಲಿನ ಸೀಟಿನಲ್ಲಿ ಬೇರೆಯವರು ಕೂತಿದ್ರೆ ಏನ್ ಮಾಡಬೇಕು ಗೊತ್ತಾ? ಸಿಂಪಲ್ ಪರಿಹಾರ
- Sports IPL 2024 RR vs DC: ರಾಯಲ್ಸ್ ವಿರುದ್ಧ ಗೆಲುವಿನೊಂದಿಗೆ ಪುಟಿದೇಳುವುದೇ ಕ್ಯಾಪಿಟಲ್ಸ್?; ಸಂಭಾವ್ಯ ಆಡುವ 11ರ ಬಳಗ
- Lifestyle ವಿಶ್ವದ ದುಬಾರಿ ಹಣ್ಣುಗಳಿವು..! ನೀವು ಊಹಿಸದ ಬೆಲೆ ಈ ಹಣ್ಣುಗಳಿಗಿದೆ..!
- Technology OnePlus: ಒನ್ಪ್ಲಸ್ ನಾರ್ಡ್ CE 4 ಫೋನ್ನ ಭಾರತದ ಬೆಲೆ ಮಾಹಿತಿ ಲೀಕ್! ಲಾಂಚ್ಗೆ ನಾಲ್ಕೇ ದಿನ ಬಾಕಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಬಾಹುಬಲಿ' ಪ್ರಭಾಸ್ಗೆ ಕತ್ತಿಯಿಂದ ಇರಿದ ಬಾಲಿವುಡ್ ನಟ
ಎಸ್.ಎಸ್.ರಾಜಮೌಳಿ ನಿರ್ದೇಶನದ ಪ್ರಭಾಸ್, ರಾಣಾ ದಗ್ಗುಬಾಟಿ ಮತ್ತು ಅನುಷ್ಕ ಶೆಟ್ಟಿ ಅಭಿನಯದ 'ಬಾಹುಬಲಿ-2' ಚಿತ್ರ ಪ್ರಪಂಚದಾದ್ಯಂತ ಅದ್ಭುತ ಪ್ರತಿಕ್ರಿಯೆ ಪಡೆದಿದೆ. ಆದರೆ 'ಬಾಹುಬಲಿ- ದಿ ಬಿಗಿನ್ನಿಂಗ್' ಚಿತ್ರದಲ್ಲಿ ಕಟ್ಟಪ್ಪ ಬಾಹುಬಲಿಗೆ ಕತ್ತಿಯಿಂದ ಇರಿದ ದೃಶ್ಯವನ್ನು ಮಾತ್ರ ಇಂದಿಗೂ ಯಾರು ಮರೆತಿಲ್ಲ. ಕಾರಣ ಅಷ್ಟೊಂದು ರೋಮಾಂಚನ ಕಾರಿಯಾದ ದೃಶ್ಯವದು.
'ಬಾಹುಬಲಿ-2' ಚಿತ್ರದಲ್ಲಿ ಪ್ರಭಾಸ್ ಅಭಿನಯವನ್ನು ನೋಡಿ ಬಾಲಿವುಡ್ ನ ದಿಗ್ಗಜ ನಟರಾದ ರಿಷಿ ಕಪೂರ್, ನಿರ್ದೇಶಕ ಮತ್ತು ನಿರ್ಮಾಪಕ ಕರಣ್ ಜೋಹರ್, ರಾಮ್ ಗೋಪಾಲ್ ವರ್ಮಾ ಮತ್ತು ಇತರರು ಪ್ರಶಂಸೆ ನೀಡಿದ್ದಾರೆ. ಚಿತ್ರದಲ್ಲಿ ಕಟ್ಟಪ್ಪ ಬಾಹುಬಲಿಗೆ ಕತ್ತಿಯಿಂದ ಇರಿದ ಹಾಗೆ ನೈಜವಾಗಿ ಪ್ರಭಾಸ್ ಗೆ ಬಾಲಿವುಡ್ ನಟನೊಬ್ಬ ಕತ್ತಿಯಿಂದ ಇರಿದಿದ್ದಾರೆ. ಆ ನಟ ಯಾರು ತಿಳಿದು ಕೊಳ್ಳುವ ಕುತೂಹಲ ನಿಮಗಿದ್ಯಾ..?
ಇವರೇ ಆ ಬಾಲಿವುಡ್ ನಟ
ನೀವು ಅಂದುಕೊಂಡ ಹಾಗೆ ಪ್ರಭಾಸ್ ಗೆ ಕತ್ತಿಯಿಂದ ಇರಿದಿರುವುದು ನೈಜವಾಗಿ ರಕ್ತ ಬರುವ ಹಾಗೆ ಅಲ್ಲ. 'ಬಾಹುಬಲಿ- ದಿ ಬಿಗಿನ್ನಿಂಗ್' ಚಿತ್ರದಲ್ಲಿ ಕಟ್ಟಪ್ಪ ಬಾಹುಬಲಿಗೆ ಹಿಂದಿನಿಂದ ಕತ್ತಿಯಿಂದ ಇರಿದ ದೃಶ್ಯವನ್ನು ಮರೆಯಲು ಸಾಧ್ಯವಾಗದ ಬಾಲಿವುಡ್ ನಟ ವರುಣ್ ಧವನ್ ಆ ದೃಶ್ಯವನ್ನು ರೀಕ್ರಿಯೇಟ್ ಮಾಡಿದ್ದಾರೆ ಅಷ್ಟೆ.
ಪ್ರಭಾಸ್ ಗೆ ಕತ್ತಿಯಿಂದ ಇರಿದ ದೃಶ್ಯ
ನಿನ್ನೆಯಷ್ಟೆ ಬಾಲಿವುಡ್ ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ಕರಣ್ ಜೋಹರ್ ತಮ್ಮ ಮನೆಯಲ್ಲಿ ಆಯೋಜಿಸಿದ್ದ ಪಾರ್ಟಿಯಲ್ಲಿ ಪ್ರಭಾಸ್ ಮತ್ತು ವರುಣ್ ಧವನ್ ಪಾಲ್ಗೊಂಡಿದ್ದರು. ಈ ವೇಳೆ ಕಟ್ಟಪ್ಪ ಬಾಹುಬಲಿಗೆ ಕತ್ತಿಯಿಂದ ಇರಿದ ದೃಶ್ಯವನ್ನು ವರುಣ್ ಧವನ್ ರವರು ಪ್ರಭಾಸ್ ರನ್ನು ನಿಲ್ಲಿಸಿ ರೀಕ್ರಿಯೇಟ್ ಮಾಡಿದ್ದಾರೆ. ಪ್ರಭಾಸ್ ಸಹ ನಗುತ್ತಲೇ ಪೋಸ್ ಕೊಟ್ಟಿದ್ದಾರೆ. ಆ ಸೀನ್ ಅನ್ನು ನೀವು ಒಮ್ಮೆ ನೋಡಿ.
ಪ್ರಭಾಸ್ ರನ್ನು ಹೊಗಳಿದ ವರುಣ್
ಕತ್ತಿಯಿಂದ ಇರಿದ ದೃಶ್ಯವನ್ನು ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿರುವುದಲ್ಲದೇ, ವರುಣ್ ಧವನ್ ಪ್ರಭಾಸ್ ರನ್ನು ಪ್ರಶಂಸಿಸಿ, 'ತುಂಬಾ ಶಾಂತ ಸ್ವಭಾವದವರು ಮತ್ತು ಸರಳ ಜೀವಿ' ಎಂದು ಬರೆದಿದ್ದಾರೆ.
ಹಿಂದಿಯಲ್ಲಿ 'ಬಾಹುಬಲಿ-2'
'ಬಾಹುಬಲಿ-2' ಚಿತ್ರ ಹಿಂದಿ ಭಾಷೆ ಒಂದರಲ್ಲಿಯೇ 500 ಕೋಟಿಗೂ ಹೆಚ್ಚು ಬಾಕ್ಸ್ ಆಫೀಸ್ ಗಳಿಸಿದೆ.