Don't Miss!
- News Lok Sabha election 2024: ಟಿಡಿಪಿ ಅಭ್ಯರ್ಥಿ 5,785 ಕೋಟಿ ಒಡೆಯ
- Technology Google: ಗೂಗಲ್ ಪಿಕ್ಸೆಲ್ 8a ಬೆಲೆ ಮಾಹಿತಿ ಲೀಕ್! ಈ ಫೋನ್ ಫೀಚರ್ಸ್ ಏನು?
- Automobiles ಯುವಕರಿಗೆ ಸಿಹಿಸುದ್ದಿ: ಕೈಗೆಟುಕುವ ಬೆಲೆ, ಮಾಸ್ ಲುಕ್ನಲ್ಲಿ ಬರುತ್ತಿದೆ ಹೊಸ ಬಜಾಜ್ ಪಲ್ಸರ್ 400 ಬೈಕ್
- Finance ಇನ್ಮುಂದೆ ನಿಮ್ಮ ಜಮೀನಿನಲ್ಲಿ ನೀವು ಮನೆ ಕಟ್ಟೋದಕ್ಕೂ ಸರ್ಕಾರದ ಅನುಮತಿ ಅಗತ್ಯ, ಏನಿದು ಹೋಸ ನಿಯಮ?
- Lifestyle ಉಪ್ಪು ನೀರಿನಿಂದ ಮುಖ ತೊಳೆದರೆ ಆಗುವ ಲಾಭವೇನು.? ಇದರ ಅನಾನುಕೂಲವೇನು ಗೊತ್ತಾ?
- Sports IPL 2024: ಆರ್ಸಿಬಿ ಕಪ್ ಗೆಲ್ಲದಿರಲು ಅತಿಯಾದ ಪಾರ್ಟಿ ಕಾರಣವೇ?; ರೈನಾ ಬಿಚ್ಚಿಟ್ಟ ಸತ್ಯ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹಿಂದಿ ಚಿತ್ರರಂಗದ ಹಿರಿಯ ಚಿತ್ರ ಸಾಹಿತಿ ಅಭಿಲಾಷ್ ನಿಧನ
ಹಿಂದಿ ಚಿತ್ರರಂಗದ ಹಿರಿಯ ಚಿತ್ರ ಸಾಹಿತಿ ಅಭಿಲಾಷ್ ಸೋಮವಾರ ವಿಧಿವಶರಾಗಿದ್ದಾರೆ. ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ 74 ವರ್ಷದ ಅಭಿಲಾಷ್ ಮುಂಬೈನ ಗೋರೆಗಾಂವ್ನಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ ಒಂದು ವರ್ಷದಿಂದ ಅಭಿಲಾಷ್ ಅವರು ಲಿವರ್ ಕ್ಯಾನ್ಸರ್ಗೆ ಚಿಕಿತ್ಸೆ ಪಡೆಯುತ್ತಿದ್ದರು ಎಂಬ ಮಾಹಿತಿ ಇದೆ.
ಎಸ್ಪಿಬಿ ನಿಧನಕ್ಕೆ ಮರುಗಿದ ಚಿತ್ರರಂಗ, ಖುಷ್ಬೂ, ನಯನತಾರ, ಕಮಲ್ ಹಾಸನ್ ಭಾವುಕ
ಪ್ರಾರ್ಥನೆ ಗೀತೆ ಎನ್ನುವಂತಿದ್ದ ''ಇತ್ನಿ ಶಕ್ತಿ ಹಮೇ ದೇನಾ ದಾತಾ, ಮನ್ ಕಿ ವಿಶ್ವಾಸ್ ಕಮ್ಝೋರ್ ಹೋ ನಾ....'' ಹಾಡನ್ನು ಬರೆದವರು ಇದೇ ಅಭಿಲಾಷ್. ಲಾಲ್ ಚೂಡಾ (1984), ಹಲ್ಚುಲ್ (1995) ಮತ್ತು ಜೀತೆ ಹೇನ್ ಶಾನ್ ಸೆ (1988) ಚಿತ್ರಗಳಿಂದ ಅಭಿಲಾಷ್ ಗುರುತಿಸಿಕೊಂಡಿದ್ದರು.
ಅಂದ್ಹಾಗೆ, ಅಭಿಲಾಷ್ ಅವರ ಮೂಲ ಹೆಸರು ಓಂ ಪ್ರಕಾಶ್. ಮೂಲತಃ ದೆಹಲಿಯವರು. ಸುಮಾರು 5 ದಶಕಗಳಿಂದ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದರು.
Recommended Video
'ಅಂಕುಶ್' ಚಿತ್ರದ ''ಇತ್ನಿ ಶಕ್ತಿ ಹಮೇ ದೇನಾ ದಾತಾ...ಸುಮಾರು 8 ಭಾಷೆಗಳಲ್ಲಿ ಭಾಷಾಂತರವಾಗಿದೆ. ಹಲವು ಶಾಲೆಗಳಲ್ಲಿ ಹಾಗೂ ಸಂಸ್ಥೆಗಳಲ್ಲಿ ಈ ಹಾಡನ್ನು ಪ್ರಾರ್ಥನಾ ಗೀತೆಯಾಗಿ ಬಳಸುತ್ತಿದ್ದಾರೆ.