twitter
    For Quick Alerts
    ALLOW NOTIFICATIONS  
    For Daily Alerts

    'ಮಹಾಭಾರತ' ಸಿನಿಮಾಗೆ ಸಿದ್ಧತೆ: ಆಮೀರ್ ಖಾನ್ ಜೊತೆ 'ಬಾಹುಬಲಿ' ವಿಜಯೇಂದ್ರ ಪ್ರಸಾದ್ ಮಾತುಕತೆ

    By ಫಿಲ್ಮ್ ಡೆಸ್ಕ್
    |

    ಮಹಾಭಾರತ, ಚಿತ್ರಪ್ರಿಯರು ಭಾರಿ ಕುತೂಹಲದಿಂದ ಕಾಯುತ್ತಿರುವ ಸಿನಿಮಾ. ನಿರ್ದೇಶಕ ರಾಜಮೌಳಿ ಮಹಾಭಾರತ ಸಿನಿಮಾ ಮಾಡುತ್ತಾರೆ ಎಂದು ವರ್ಷಗಳಿಂದ ಹೇಳಾಗುತ್ತಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತವಾಗಿ ಬಹಿರಂಗವಾಗಿಲ್ಲ. ಆದರೀಗ ಮಹಾಭಾರತ ಸಿನಿಮಾ ಬಗ್ಗೆ ಮತ್ತೊಂದು ಬ್ರೇಕಿಂಗ್ ಸುದ್ದಿ ಹೊರಬಿದ್ದಿದೆ.

    Recommended Video

    ಲಾಕ್ ಡೌನ್ ಹಿನ್ನೆಲೆಯಲ್ಲಿ ಸರಳವಾಗಿ ವಿವಾಹವಾದ ನಟಿ ಮಯೂರಿ |Mayuri Kyatari weds Arun | FILMIBEAT KANNADA

    ಬಾಲಿವುಡ್ ನಟ ಆಮೀರ್ ಖಾನ್ ಸಹ ಮಹಾಭಾರತ ಸಿನಿಮಾ ಮಾಡುತ್ತಾರೆ ಎನ್ನುವ ಮಾತು ಕೇಳಿಬರುತ್ತಿತ್ತು. ಆದರೀಗ ಆಮೀರ್ ಖಾನ್ ಕನಸಿನ ಪ್ರೊಜೆಕ್ಟ್ ಗೆ ಜೀವ ಬಂದಿದೆ. ಈಗಾಗಲೆ ಮಹಾಭಾರತ ಸಿನಿಮಾದ ಬಗ್ಗೆ ಮಾತುಕತೆ ಪ್ರಾರಂಭವಾಗಿದೆ. ಈ ಬಗ್ಗೆ ಬಾಹುಬಲಿ ರಚನೆಕಾರ ವಿಜಯೇಂದ್ರ ಪ್ರಸಾದ್ ಮಾಹಿತಿ ಬಹಿರಂಗಪಡಿಸಿದ್ದಾರೆ.

    ಫೋಟೋ ವೈರಲ್: ರಾಜಮೌಳಿ 'ರಾಮಾಯಣ'ದಲ್ಲಿ ಮಹೇಶ್ ಬಾಬು ರಾಮಫೋಟೋ ವೈರಲ್: ರಾಜಮೌಳಿ 'ರಾಮಾಯಣ'ದಲ್ಲಿ ಮಹೇಶ್ ಬಾಬು ರಾಮ

    ಹೌದು, ಮಹಾಭಾರತ ಸಿನಿಮಾದ ಬಗ್ಗೆ ವಿಜಯೇಂದ್ರ ಪ್ರಸಾದ್ ಬಾಲಿವುಡ್ ನಟ ಆಮೀರ್ ಖಾನ್ ಜೊತೆ ಮೊದಲ ಹಂತದ ಮಾತುಕತೆ ನಡೆಸಿದ್ದಾರಂತೆ. ದೊಡ್ಡ ಬಜೆಟ್ ನಲ್ಲಿ ತಯಾರಾಗುತ್ತಿರುವ ಮಹಾಭಾರತ ಸಿನಿಮಾಗೆ ಸದ್ಯ ಆಮೀರ್ ಖಾನ್ ಒಬ್ಬರು ಮಾತ್ರ ಫಿಕ್ಸ್ ಆಗಿದ್ದಾರೆ. ಬಾಹುಬಲಿ ಮತ್ತು ಭಜರಂಗಿ ಭಾಯ್ ಜಾನ್ ಸಿನಿಮಾದ ರಚನೆಕಾರ ವಿಜಯೇಂದ್ರ ಪ್ರಸಾದ್ ಸ್ಕ್ರಿಪ್ಟ್ ಕೆಲಸ ಮಾಡುತ್ತಿದ್ದಾರೆ.

    Vijayendra Prasad Talks With Aamir Khan About Mahabharata

    ಎಲ್ಲವು ಅಂದುಕೊಂಡಂತೆ ಆದರೆ ಸಿನಿಮಾ ಸಧ್ಯದಲ್ಲೇ ಸೆಟ್ಟೇರುವ ಸಾಧ್ಯತೆ ಇದೆ. ಚಿತ್ರದಲ್ಲಿ ದೊಡ್ಡ ತಾರಾಬಳಗವೆ ಇರಲಿದೆ. ಆದರೆ ಯಾರೆಲ್ಲ ಇರಲಿದ್ದಾರೆ ಎನ್ನುವುದು ಅಧಿಕೃತವಾಗಿಲ್ಲ. ಸದ್ಯ ಮಾತುಕತೆ ಪ್ರಾರಂಭವಾಗಿ, ಸ್ಕ್ರಿಪ್ಟ್ ಕೆಲಸವು ಆರಂಭವಾಗಿದೆಯಷ್ಟೆ. ಭಾರಿ ನಿರೀಕ್ಷೆ ಮತ್ತು ಕುತೂಹಲ ಮೂಡಿಸಿರುವ ಮಹಾಭಾರತ ಯಾವಾಗ ಸೆಟ್ಟೇರಲಿದೆ ಎನ್ನುವುದೇ ಅಭಿಮಾನಿಗಳ ಕಾತರ.

    English summary
    Baahubali writer Vijayendra prasad Talks with Aamir Khan about Mahabharata.
    Saturday, June 13, 2020, 10:08
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X