Don't Miss!
- News Bengaluru Heat: ಏ.25 ರಂದು ನಗರದಲ್ಲಿ ಅತ್ಯಧಿಕ ತಾಪಮಾನ: 12 ವರ್ಷಗಳ ದಾಖಲೆ ಉಡೀಸ್
- Lifestyle ದೇಹದಲ್ಲಿ ಈ ಬದಲಾವಣೆ ಆದರೆ ನಿಮ್ಮಲ್ಲಿ ವಿಟಮಿನ್ ಬಿ12 ಕೊರತೆಯಾಗಿದೆ ಎಂದರ್ಥ
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಕೋರಿಕೆ ಈಡೇರಿಸು 3 ಸಿನಿಮಾ ಕೊಡ್ತೀನಿ' ಎಂದಿದ್ರು: ಅಧಿತಿ ಬಿಚ್ಚಿಟ್ಟ ಸಂಗತಿ
'Me Too' ಅಭಿಯಾನ ಬಾಲಿವುಡ್ ಇಂಡಸ್ಟ್ರಿಯನ್ನ ಆತಂಕಕ್ಕೆ ಗುರಿ ಮಾಡಿದೆ. ದೊಡ್ಡ ದೊಡ್ಡ ನಟ, ನಿರ್ದೇಶಕ, ನಿರ್ಮಾಪಕ, ಗಾಯಕ ಹೀಗೆ ಘಟಾನುಘಟಿಗಳ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿಬರುತ್ತಿದೆ. ನಟ ನಾನಾ ಪಾಟೇಕರ್ ವಿರುದ್ಧ ತನುಶ್ರೀ ದತ್ತಾ ಸಿಡಿಸಿದ ಬಾಂಬ್ ಇಷ್ಟು ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರುತ್ತಿದೆ.
ತನುಶ್ರೀ ದತ್ತಾ ನಂತರ ಈಗ ಅನೇಕ ಯುವತಿಯರು, ನಟಿಯರು ತಮಗಾದ ಕೆಟ್ಟ ಅನುಭವವನ್ನ ಮೀ ಟು ಅಭಿಯಾನದಲ್ಲಿ ಹೇಳಿಕೊಳ್ಳುತ್ತಿದ್ದಾರೆ. ಚಿತ್ರರಂಗದಲ್ಲಿ ಈ ರೀತಿ ಕಿರುಕುಳ ಇದೆ ಎಂದು ಆರೋಪ ಮಾಡ್ತಿದ್ದಾರೆ.
ಇದೀಗ, ಬಿಟೌನ್ ಇಂಡಸ್ಟ್ರಿಯ ಸ್ಟಾರ್ ನಟಿ ಅಧಿತಿ ರಾವ್ ಹೈದರಿ ಕೂಡ ಮೀ ಟು ಅಭಿಯಾನದಲ್ಲಿ ತಮಗೆ ಎದುರಾಗಿದ್ದ ಅನುಭವನ್ನ ಬಹಿರಂಗಪಡಿಸಿದ್ದಾರೆ. ಆಗಿನ್ನು ಇಂಡಸ್ಟ್ರಿಗೆ ಬಂದ ಸಮಯದಲ್ಲಿ ಸಿನಿಮಾಗಾಗಿ ಕೋರಿಕೆ ಈಡೇರಿಸುವ ಎಂದಿದ್ದರು ಎಂಬ ಸ್ಫೋಟಕ ವಿಷ್ಯವನ್ನ ಬಿಚ್ಚಿಟ್ಟಿದ್ದಾರೆ. ಅಧಿತಿ ರಾವ್ ಹೈದರಿ ಏನಂದ್ರು.? ಮುಂದೆ ಓದಿ.....
ಗೆದ್ದವರಿಗೆ ಮಾತ್ರ ಯಶಸ್ಸು
''ನಾನು ನನ್ನ ಬಗ್ಗೆ ಮಾತ್ರ ಮಾತನಾಡುತ್ತೇನೆ. ಹೊಸದಾಗಿ ಇಂಡಸ್ಟ್ರಿಗೆ ಬಂದವರು ಬೆಳೆಯುವುದು ತುಂಬಾ ಕಷ್ಟ. ಹಾಗಾಂತ ಅಸಾಧ್ಯ ಅಂತ ಅಲ್ಲ. ಅದಕ್ಕೆ ನಾನೇ ಒಂದು ಉದಾಹರಣೆ. ಇಲ್ಲಿ ಎದುರಾಗುವ ಪರಿಸ್ಥಿತಿಗಳನ್ನ ಹೇಗೆ ಡೀಲ್ ಮಾಡ್ತೀವಿ ಎನ್ನುವುದರ ಮೇಲೆ ನಮ್ಮ ಕರಿಯರ್ ನಿರ್ಧಾರವಾಗುತ್ತೆ''- ಅಧಿತಿ ರಾವ್ ಹೈದರಿ
ಶಾಕಿಂಗ್ ಸುದ್ದಿ: ಗಾಯಕ ಕೈಲಾಶ್ ಖೇರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ.!
ನನ್ನ ಬಯಕೆ ಈಡೇರಿಸು
''ಬಾಲಿವುಡ್ ಇಂಡಸ್ಟ್ರಿಯಲ್ಲಿ ಅವಕಾಶಕ್ಕಾಗಿ ಕಷ್ಟಪಡುತ್ತಿದ್ದ ಸಮಯದಲ್ಲಿ ನನಗೊಂದು ಕಟ್ಟ ಅನುಭವಾಗಿದೆ. ನನ್ನ ಆಸೆ ಈಡೇರಿಸಿದ್ರೆ ಮೂರು ಸಿನಿಮಾಗಳಲ್ಲಿ ಅವಕಾಶ ಕೊಡ್ತೀನಿ ಅಂದ್ರು. ತಕ್ಷಣ ಬೇಡವೆಂದು ವಾಪಸ್ ಬಂದೆ. ನಾನು ಇಂಡಸ್ಟ್ರಿಗೆ ಹೊಸಬಳೇ ಹೊರತು, ಆ ರೀತಿ ಕಾಂಪ್ರುಮೈಸ್ ಆಗುವಂತಹ ವಾತಾವರಣದಲ್ಲಿ ಬೆಳೆದಿಲ್ಲ. ಅಂತವರಿಗೆ ಬಗ್ಗದೆ ನನ್ನ ಆತ್ಮರಕ್ಷಣೆ ಮಾಡಿಕೊಂಡು ಮುಂದೆ ಸಾಗಿದೆ'' - ಅಧಿತಿ ರಾವ್ ಹೈದರಿ
ಖ್ಯಾತ ನಿರ್ದೇಶಕ ವಿಕಾಸ್ ಭಾಲ್ ಮುಖವಾಡ ಕಳಚಿದ ಕಂಗನಾ.!
ಎಲ್ಲಾ ಕಡೆಯೂ ಇಂತಹ ಜನ ಇರ್ತಾರೆ
''ಮಹಿಳೆಯವರಿಗೆ ಸಿನಿಮಾ ಇಂಡಸ್ಟ್ರಿ ಸೇಫ್ ಅಲ್ಲ ಎಂಬ ವಾದವನ್ನ ನಾನು ಒಪ್ಪುವುದಿಲ್ಲ. ಸಿನಿಮಾ ಇಂಡಸ್ಟ್ರಿ ಆಗಲಿ, ಬೇರೆ ಯಾವುದೇ ಇಂಡಸ್ಟ್ರಿಯಾಗಲಿ ಡಿಫ್ರೆಂಡ್ ಮೈಂಡ್ ಸೆಟ್ ಹೊಂದಿರುವ ಮನುಷ್ಯರು ಇದ್ದೇ ಇರ್ತಾರೆ. ಅದರಲ್ಲಿ ಒಳ್ಳೆಯವರು ಇರ್ತಾರೆ, ಕೆಟ್ಟವರು ಇರ್ತಾರೆ'' - ಅಧಿತಿ ರಾವ್ ಹೈದರಿ
ನಿರ್ಮಾಪಕಿಯಿಂದ ನಟ ಅಲೋಕ್ ನಾಥ್ ಮೇಲೆ ಅತ್ಯಾಚಾರ ಆರೋಪ!
ಸ್ಟಾರ್ ಮೇಕರ್ ಗಳ ಹೆಸರು ಬಯಲು
ನಾನಾ ಪಾಟೇಕರ್, ಕೈಲಾಶ್ ಖೇರ್, ನಟ ಅಲೋಕ್ ನಾಥ್, ನಿರ್ದೇಶಕ ವಿಕಾಸ್ ಭಾಲ್, ವಿವೇಕ್ ಅಗ್ನಿಹೋತ್ರಿ ಸೇರಿದಂತೆ ಅನೇಕರು ಹೆಸರು ಮೀ ಟು ಅಭಿಯಾನದಲ್ಲಿ ಪ್ರಸ್ತಾಪಿಸಲಾಗಿದೆ.