Don't Miss!
- Automobiles ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- News Bengaluru Traffic: ಬೆಂಗಳೂರಿನಲ್ಲಿ ಫುಟ್ರೆಸ್ಟ್ನಲ್ಲಿ ಮಗುವಿನೊಂದಿಗೆ ಸ್ಕೂಟರ್ ಸವಾರಿ; ದಂಪತಿಗಳ ವಿರುದ್ಧ ಆಕ್ರೋಶ
- Sports GT vs DC: ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಬೌಲಿಂಗ್ ಆಯ್ಕೆ
- Lifestyle ಸರ್ಕಸ್ನಿಂದ ತಪ್ಪಿಸಿಕೊಂಡು ಓಡಿದ ಆನೆ..! ಆಮೇಲೆ ಆಗಿದ್ದೇನು..?
- Finance ಇನ್ಮುಂದೆ EMI ಕಟ್ಟೋದು ತಡವಾದ್ರೆ ಚಿಂತಿಸೋಹಾಗಿಲ್ಲ, ಫೈನ್ ಕೂಡ ಕಟ್ಟುವಂತಿಲ್ಲ!
- Technology ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಕೋರಿಕೆ ಈಡೇರಿಸು 3 ಸಿನಿಮಾ ಕೊಡ್ತೀನಿ' ಎಂದಿದ್ರು: ಅಧಿತಿ ಬಿಚ್ಚಿಟ್ಟ ಸಂಗತಿ
'Me Too' ಅಭಿಯಾನ ಬಾಲಿವುಡ್ ಇಂಡಸ್ಟ್ರಿಯನ್ನ ಆತಂಕಕ್ಕೆ ಗುರಿ ಮಾಡಿದೆ. ದೊಡ್ಡ ದೊಡ್ಡ ನಟ, ನಿರ್ದೇಶಕ, ನಿರ್ಮಾಪಕ, ಗಾಯಕ ಹೀಗೆ ಘಟಾನುಘಟಿಗಳ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿಬರುತ್ತಿದೆ. ನಟ ನಾನಾ ಪಾಟೇಕರ್ ವಿರುದ್ಧ ತನುಶ್ರೀ ದತ್ತಾ ಸಿಡಿಸಿದ ಬಾಂಬ್ ಇಷ್ಟು ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರುತ್ತಿದೆ.
ತನುಶ್ರೀ ದತ್ತಾ ನಂತರ ಈಗ ಅನೇಕ ಯುವತಿಯರು, ನಟಿಯರು ತಮಗಾದ ಕೆಟ್ಟ ಅನುಭವವನ್ನ ಮೀ ಟು ಅಭಿಯಾನದಲ್ಲಿ ಹೇಳಿಕೊಳ್ಳುತ್ತಿದ್ದಾರೆ. ಚಿತ್ರರಂಗದಲ್ಲಿ ಈ ರೀತಿ ಕಿರುಕುಳ ಇದೆ ಎಂದು ಆರೋಪ ಮಾಡ್ತಿದ್ದಾರೆ.
ಇದೀಗ, ಬಿಟೌನ್ ಇಂಡಸ್ಟ್ರಿಯ ಸ್ಟಾರ್ ನಟಿ ಅಧಿತಿ ರಾವ್ ಹೈದರಿ ಕೂಡ ಮೀ ಟು ಅಭಿಯಾನದಲ್ಲಿ ತಮಗೆ ಎದುರಾಗಿದ್ದ ಅನುಭವನ್ನ ಬಹಿರಂಗಪಡಿಸಿದ್ದಾರೆ. ಆಗಿನ್ನು ಇಂಡಸ್ಟ್ರಿಗೆ ಬಂದ ಸಮಯದಲ್ಲಿ ಸಿನಿಮಾಗಾಗಿ ಕೋರಿಕೆ ಈಡೇರಿಸುವ ಎಂದಿದ್ದರು ಎಂಬ ಸ್ಫೋಟಕ ವಿಷ್ಯವನ್ನ ಬಿಚ್ಚಿಟ್ಟಿದ್ದಾರೆ. ಅಧಿತಿ ರಾವ್ ಹೈದರಿ ಏನಂದ್ರು.? ಮುಂದೆ ಓದಿ.....
ಗೆದ್ದವರಿಗೆ ಮಾತ್ರ ಯಶಸ್ಸು
''ನಾನು ನನ್ನ ಬಗ್ಗೆ ಮಾತ್ರ ಮಾತನಾಡುತ್ತೇನೆ. ಹೊಸದಾಗಿ ಇಂಡಸ್ಟ್ರಿಗೆ ಬಂದವರು ಬೆಳೆಯುವುದು ತುಂಬಾ ಕಷ್ಟ. ಹಾಗಾಂತ ಅಸಾಧ್ಯ ಅಂತ ಅಲ್ಲ. ಅದಕ್ಕೆ ನಾನೇ ಒಂದು ಉದಾಹರಣೆ. ಇಲ್ಲಿ ಎದುರಾಗುವ ಪರಿಸ್ಥಿತಿಗಳನ್ನ ಹೇಗೆ ಡೀಲ್ ಮಾಡ್ತೀವಿ ಎನ್ನುವುದರ ಮೇಲೆ ನಮ್ಮ ಕರಿಯರ್ ನಿರ್ಧಾರವಾಗುತ್ತೆ''- ಅಧಿತಿ ರಾವ್ ಹೈದರಿ
ಶಾಕಿಂಗ್ ಸುದ್ದಿ: ಗಾಯಕ ಕೈಲಾಶ್ ಖೇರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ.!
ನನ್ನ ಬಯಕೆ ಈಡೇರಿಸು
''ಬಾಲಿವುಡ್ ಇಂಡಸ್ಟ್ರಿಯಲ್ಲಿ ಅವಕಾಶಕ್ಕಾಗಿ ಕಷ್ಟಪಡುತ್ತಿದ್ದ ಸಮಯದಲ್ಲಿ ನನಗೊಂದು ಕಟ್ಟ ಅನುಭವಾಗಿದೆ. ನನ್ನ ಆಸೆ ಈಡೇರಿಸಿದ್ರೆ ಮೂರು ಸಿನಿಮಾಗಳಲ್ಲಿ ಅವಕಾಶ ಕೊಡ್ತೀನಿ ಅಂದ್ರು. ತಕ್ಷಣ ಬೇಡವೆಂದು ವಾಪಸ್ ಬಂದೆ. ನಾನು ಇಂಡಸ್ಟ್ರಿಗೆ ಹೊಸಬಳೇ ಹೊರತು, ಆ ರೀತಿ ಕಾಂಪ್ರುಮೈಸ್ ಆಗುವಂತಹ ವಾತಾವರಣದಲ್ಲಿ ಬೆಳೆದಿಲ್ಲ. ಅಂತವರಿಗೆ ಬಗ್ಗದೆ ನನ್ನ ಆತ್ಮರಕ್ಷಣೆ ಮಾಡಿಕೊಂಡು ಮುಂದೆ ಸಾಗಿದೆ'' - ಅಧಿತಿ ರಾವ್ ಹೈದರಿ
ಖ್ಯಾತ ನಿರ್ದೇಶಕ ವಿಕಾಸ್ ಭಾಲ್ ಮುಖವಾಡ ಕಳಚಿದ ಕಂಗನಾ.!
ಎಲ್ಲಾ ಕಡೆಯೂ ಇಂತಹ ಜನ ಇರ್ತಾರೆ
''ಮಹಿಳೆಯವರಿಗೆ ಸಿನಿಮಾ ಇಂಡಸ್ಟ್ರಿ ಸೇಫ್ ಅಲ್ಲ ಎಂಬ ವಾದವನ್ನ ನಾನು ಒಪ್ಪುವುದಿಲ್ಲ. ಸಿನಿಮಾ ಇಂಡಸ್ಟ್ರಿ ಆಗಲಿ, ಬೇರೆ ಯಾವುದೇ ಇಂಡಸ್ಟ್ರಿಯಾಗಲಿ ಡಿಫ್ರೆಂಡ್ ಮೈಂಡ್ ಸೆಟ್ ಹೊಂದಿರುವ ಮನುಷ್ಯರು ಇದ್ದೇ ಇರ್ತಾರೆ. ಅದರಲ್ಲಿ ಒಳ್ಳೆಯವರು ಇರ್ತಾರೆ, ಕೆಟ್ಟವರು ಇರ್ತಾರೆ'' - ಅಧಿತಿ ರಾವ್ ಹೈದರಿ
ನಿರ್ಮಾಪಕಿಯಿಂದ ನಟ ಅಲೋಕ್ ನಾಥ್ ಮೇಲೆ ಅತ್ಯಾಚಾರ ಆರೋಪ!
ಸ್ಟಾರ್ ಮೇಕರ್ ಗಳ ಹೆಸರು ಬಯಲು
ನಾನಾ ಪಾಟೇಕರ್, ಕೈಲಾಶ್ ಖೇರ್, ನಟ ಅಲೋಕ್ ನಾಥ್, ನಿರ್ದೇಶಕ ವಿಕಾಸ್ ಭಾಲ್, ವಿವೇಕ್ ಅಗ್ನಿಹೋತ್ರಿ ಸೇರಿದಂತೆ ಅನೇಕರು ಹೆಸರು ಮೀ ಟು ಅಭಿಯಾನದಲ್ಲಿ ಪ್ರಸ್ತಾಪಿಸಲಾಗಿದೆ.