Don't Miss!
- News 11 ಕೋಟಿ ಮಹಿಳೆಯರಿಗೆ ಅಡುಗೆ ಅನಿಲ: ಡಾ. ಕೆ. ಸುಧಾಕರ್
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
1000 ಎಕರೆ ಜಾಗದಲ್ಲಿ ನಿರ್ಮಾಣವಾಗಲಿದೆ ಅತಿ ದೊಡ್ಡ ಫಿಲಂ ಸಿಟಿ
ಉತ್ತರ ಪ್ರದೇಶದಲ್ಲಿ ಅತಿ ದೊಡ್ಡ ಫಿಲಂ ಸಿಟಿ ನಿರ್ಮಾಣಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಮ್ಮತಿ ನೀಡಿದ್ದು, ಗೌತಮ ಬುದ್ದ ನಗರದಲ್ಲಿ ಈ ಫಿಲಂ ಸಿಟಿ ತಲೆ ಎತ್ತಲಿದೆ.
ಯಮುನಾ ಪ್ರಾಧಿಕಾರ ಫಿಲಂ ಸಿಟಿ ನಿರ್ಮಿಸುವ ಜವಾಬ್ದಾರಿ ವಹಿಸಿಕೊಂಡಿದ್ದು, ಸಿಎಂ ಮುಂದೆ ಯೋಜನೆಯನ್ನು ವಿವರಿಸಿದ್ದಾರೆ. ಯೋಗಿ ಆದಿತ್ಯನಾಥ್ ಸಹ ಯಮುನಾ ಪ್ರಾಧಿಕಾರದ ಯೋಜನೆ ಕಂಡ ಸಂತಸ ವ್ಯಕ್ತಪಡಿಸಿದ್ದಾರೆ.
ಫಿಲಂ ಸಿಟಿ ನಿರ್ಮಾಣದ ಹೊಣೆಗಾರಿಕೆ ಹೊರಲು ಸಿದ್ಧ ಎಂದ ಶಿವಣ್ಣ
ಫಿಲಂ ಸಿಟಿ ನಿರ್ಮಾಣದ ಕುರಿತು ಮಂಗಳವಾರ ಬಾಲಿವುಡ್ ಇಂಡಸ್ಟ್ರಿಯ ಖ್ಯಾತನಾಮರ ಜೊತೆ ವಿಡಿಯೋ ಕಾನ್ಫೆರೆನ್ಸ್ ಮೂಲಕ ಚರ್ಚಿಸಿದ ಯೋಗಿ ಆದಿತ್ಯನಾಥ್ ''1000 ಎಕರೆ ಜಾಗದಲ್ಲಿ ಅತಿ ದೊಡ್ಡ ಫಿಲಂ ಸಿಟಿ ನಿರ್ಮಿಸುವುದಾಗಿ'' ತಿಳಿಸಿದರು.
ಉತ್ತರ ಪ್ರದೇಶವೂ ಸಾಂಸ್ಕೃತಿಕವಾಗಿ, ಐತಿಹಾಸಿಕವಾಗಿ ಹಾಗೂ ಪುರಾಣದಲ್ಲಿ ಮಹತ್ವದ ಸ್ಥಾನ ಪಡೆದಿದೆ. ಅಯೋಧ್ಯೆ, ಮಥುರಾ, ಕಾಶಿ ಹಾಗೂ ಮಹಾಭಾರತದಲ್ಲಿ ಬರುವ ಹಸ್ತಿನಾಪುರ ಸಹ ಇಲ್ಲಿಯೇ ಇದೆ. ಭಾರತದ ಏಳು ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ. ಇಂತಹ ರಾಜ್ಯದಲ್ಲಿ ಫಿಲಂ ಸಿಟಿ ನಿರ್ಮಾಣವೂ ವಿಶೇಷವಾಗಿರಲಿದೆ ಎಂದಿದ್ದಾರೆ.
Recommended Video
ಇಂದು ನಡೆದ ವಿಡಿಯೋ ಕಾನ್ಫೆರೆನ್ಸ್ ಸಭೆಯಲ್ಲಿ ಬಾಲಿವುಡ್ ನಟ ಪರೇಶ್ ರಾವಲ್, ಅನುಪಮ್ ಖೇರ್, ರವೀನಾ ಟಂಡನ್, ಗಾಯಕರಾದ ಅನುಪ್ ಜಲೋಟಾ, ಉದಿತ್ ನಾರಾಯಣ್ ಮತ್ತು ಕೈಲಾಶ್ ಖೇರ್, ಗೀತರಚನೆಕಾರ ಮನೋಜ್ ಮುಂಟಶೀರ್, ಚಲನಚಿತ್ರ ನಿರ್ಮಾಪಕರು ಸುಭಾಷ್ ಘೈ, ಡೇವಿಡ್ ಧವನ್, ಸತೀಶ್ ಕೌಶಿಕ್, ಪ್ರಿಯದರ್ಶನ್ ಪಾಲ್ಗೊಂಡಿದ್ದರು.