ಅರುಣ್ ಸಾಗರ್ ಜೀವನಚರಿತ್ರೆ
ಅರುಣ್ ಸಾಗರ್ ನಟ, ನಿರ್ದೇಶಕ, ನಿರೂಪಕ ಹಾಗೂ ಹಾಸ್ಯ ಕಲಾವಿದ. ಇವರು 1965ರ ಅಕ್ಟೋಬರ್ 23ರಂದು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಜನಿಸಿದರು. "ಭೂಮಿ ಗೀತ" ಎಂಬ ಪರಿಸರ ಸಂಭಂದಿತ ಚಿತ್ರಕ್ಕೆ ಇವರಿಗೆ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ಜೊತೆಗೆ ಇವರಿಗೆ ಕರ್ನಾಟಕ ರಾಜ್ಯ ಪ್ರಶಸ್ತಿಯೂ ದೊರಕಿದೆ. ಅರುಣ್ ಸಾಗರ್ ಪುರಿ ಜಗನ್ನಾಥ, ಮೆಹೆರ್ ರಮೇಶ್, ವೀರಶಂಕರ್ ಮತ್ತು ಕೆ. ರಾಘವೇಂದ್ರ ರಾವ್ ಸೇರಿದಂತೆ ಅನೇಕ ಖ್ಯಾತ ನಿರ್ದೇಶಕರ ಜೊತೆಗೆ ಕೆಲಸ ನಿರ್ವಹಿಸಿದ್ದಾರೆ.
ನಟಿಸಿರುವ ಚಿತ್ರಗಳು
ಅರುಣ್ ಸಾಗರ್ ಮರ್ಮ, ಪರ್ವ, ಚಂದು, ಜಸ್ಟ್ ಮಾತ್ ಮಾತಲ್ಲಿ, ರಾಮ್ , ನಂ 73 ಶಾಂತಿ ನಿವಾಸ, ವೀರ ಮದಕರಿ, ವಿಷ್ಣುವರ್ಧನ, ಚಿಂಗಾರಿ, ಬಚ್ಚನ್, ಆಟೋ ರಾಜ, ಮೀನಾ, ಬೆಂಕಿ ಪಟ್ಟಣ, ರಿಂಗ್ ಮಾಸ್ಟರ್, ಜೋಕರ್ ಸೇರಿದಂತೆ 52 ಸಿನಿಮಾಗಳಲ್ಲಿ ನಟಿಸಿದ್ದಾರೆ.
ಅರುಣ್ ಸಾಗರ್ ಜೀ ಕನ್ನಡ, ಸುವರ್ಣ, ಕಸ್ತೂರಿ ಹೀಗೆ ಹಲವು ಟಿವಿ ಚಾಲನ್ ಗಳಲ್ಲಿ ನಿರೂಪಕನಾಗಿ ಕೆಲಸ ನಿರ್ವಹಿಸಿದ್ದಾರೆ. ಜೊತೆಗೆ ಕನ್ನಡ ಹಾಗೂ ತೆಲುಗು ಚಿತ್ರರಂಗದ ಪ್ರಮುಖ ನಾಯಕ ನಂತರ ಜೊತೆ ಗುರುತಿಸಿಕೊಂಡಿದ್ದಾರೆ.
ಬಿಗ್ ಬಾಸ್
ಅರುಣ್ ಸಾಗರ್ ಬಿಗ್ ಬಾಸ್ ಕನ್ನಡ ಸೀಸನ್ 1ರಲ್ಲಿ ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು. ಇದೀಗ ಎರಡನೇ ಬಾರಿಗೆ ಬಿಗ್ ಬಾಸ್ ಕನ್ನಡ ಸೀಸನ್ 9ಕ್ಕೆ ಪ್ರವೇಶ ಪಡೆದಿದ್ದಾರೆ.
ಸಂಬಂಧಿತ ಸುದ್ದಿ