ದಿಗಂತ್
Born on 28 Dec 1983 (Age 40) ಬೆಂಗಳೂರು
ದಿಗಂತ್ ಜೀವನಚರಿತ್ರೆ
ಕನ್ನಡ ಚಿತ್ರರಂಗದಲ್ಲಿ ದೂದ್ ಪೇಡಾ ಎಂದೇ ಖ್ಯಾತಿಗಳಿಸಿರುವ ದಿಗಂತ್ ಜನಿಸಿದ್ದು 28 ಡಿಸೆಂಬರ್ 1983 ಸಾಗರದಲ್ಲಿ. ತಂದೆ ಕೃಷ್ಣಮೂರ್ತಿ ತಾಯಿ ಮಲ್ಲಿಕಾ ಕೃಷ್ಣಮೂರ್ತಿ.
ಇವರ ಬಾಲ್ಯ ವಿದ್ಯಾಬ್ಯಾಸವೆಲ್ಲ ಮುಗಿಸಿದ್ದು ಸಾಗರದಲ್ಲಿ. ನಂತರ ಇವರು ಬೆಂಗಳೂರಿನ ಶ್ರೀ ಭಗವನ್ ಮಹಾವೀರ್ ಜೈನ್ ಕಾಲೇಜ್ ನಲ್ಲಿ ವಾಣಿಜ್ಯಶಾಸ್ತ್ರದಲ್ಲಿ ಪದವಿಯನ್ನು ಪಡೆದು ನಂತರ ಮಾಡಲಿಂಗ್ ಕ್ಷೇತ್ರಕ್ಕೆ ಪರಿಚಿತರಾದರು. 2006 ರಲ್ಲಿ ಮಾಡಲಿಂಗ್ ಪದವಿಯನ್ನು ಪಡೆದುಕೊಂಡು ಚಿತ್ರರಂಗವನ್ನು ಪ್ರವೇಶಿಸಿದರು.
ಗಣೇಶ್ ರವರ ಮುಂಗಾರು ಮಳೆ ಚಿತ್ರದ ಪಾತ್ರ ಇವರಿಗೆ ಜನಪ್ರಿಯತೆ ತಂದುಕೊಟ್ಟಿತು. 2009 ರಲ್ಲಿ ಇವರಿಗೆ "ಮನಸಾರೆ" ಚಿತ್ರದ ಮೂಲಕ ನಾಯಕನಾಗಿ ಪರಿಚಿತರಾದರು. ಅನಂತರ ಇವರಿಗೆ ಕನ್ನಡ ಚಿತ್ರ ರಂಗದಲ್ಲಿ ಸುಮಾರು ಚಿತ್ರಗಳಿಗೆ ನಾಯಕನಾಗಿ ಅಭಿನಯಿಸುವ ಅವಕಾಶ ಸಿಕ್ಕವು. ಪಂಚರಂಗಿ, ಲೈಫು ಇಷ್ಟೇನೆ, ಪಾರಿಜಾತ, ಹೀಗೆ ಇನ್ನು ಹಲವು ಕನ್ನಡ ಚಿತ್ರರಂಗದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ವಿವಾಹ
ತಾವು ನಾಯಕನಾಗಿ ನಟಿಸಿದ ಮೊದಲ ಚಿತ್ರದ ನಾಯಕಿ ಐಂದ್ರಿತಾ ರೈ ರವರನ್ನು 2018 ಡಿಸೆಂಬರ್ 12 ರಂದು ವಿವಾಹವಾದರು.
ಅಪಘಾತಗಳು
2022 ಜೂನ್ ತಿಂಗಳಿನಲ್ಲಿ ಗೋವಾಕ್ಕೆ ಕುಟುಂಬದ ಜೊತೆಗೆ ಪ್ರವಾಸಕ್ಕೆ ಹೋದಾಗ, ಅಲ್ಲಿ ಸಮರ್ ಶಾಟ್ ಮಾಡುವಾಗ ತಮ್ಮ ಕುತ್ತಿಗೆಗೆ ಪೆಟ್ಟು ಬಿದ್ದು, ಅಲ್ಲಿಯೇ ಪ್ರಾಥಮಿಕ ಚಿಕಿತ್ಸೆ ಪಡೆದರು. ಅಲ್ಲಿಂದ ಮಣಿಪಾಲ್ ಆಸ್ಪತ್ರೆಗೆ ಏರ್ ಲಿಪ್ಟ್ ಮಾಡಿದರು.
ಇದಕ್ಕೂ ಮುಂಚೆ ವಿದೇಶದಲ್ಲಿ ಚಿತ್ರವೊಂದರ ಶೂಟಿಂಗ್ ಮಾಡುವಾಗ ದುರ್ಘಟನೆ ನೆಡೆದು, ಕಣ್ಣೊಂದಕ್ಕೆ ಹಾನಿ ಮಾಡಿಕೊಂಡಿದ್ದರು.
ಸಂಬಂಧಿತ ಸುದ್ದಿ