ಹುಚ್ಚ ವೆಂಕಟ್
ಹುಚ್ಚ ವೆಂಕಟ್ ಜೀವನಚರಿತ್ರೆ
ಹುಚ್ಚ ವೆಂಕಟ್ ಎಂಬ ಹೆಸರಿನಿಂದಲೇ ಖ್ಯಾತಿ ಪಡೆದ ವೆಂಕಟರಮಣ್ ಲಕ್ಷ್ಮಣ್ ಕನ್ನಡ ಚಿತ್ರರಂಗದ ನಟ, ನಿರ್ದೇಶಕ, ನಿರ್ಮಾಪಕ ಮತ್ತು ಗಾಯಕರಾಗಿದ್ದಾರೆ. ಇವರು ಜನಿಸಿದ್ದು ಸೆಪ್ಟೆಂಬರ್ 19, ನಂದು ಬೆಂಗಳೂರಿನಲ್ಲಿ. ಇವರ ತಂದೆ ಎಮ್.ಲಕ್ಷ್ಮಣ್ ತಾಯಿ ಗೌರಮ್ಮ. ಇವರು ಡಿಪ್ಲಮೋ ಇನ್ ಸಿವಿಲ್ ಇಂಜಿನಿಯರ್ ಕೋರ್ಸ್ ನ್ನು ಅರ್ದಕ್ಕೆ ನಿಲ್ಲಿಸಿದ್ದಾರೆ. ಇವರು ಕನ್ನಡ ಬಿಗ್ ಬಾಸ್ ಶೋ ಮುಖಾಂತರ ಎಲ್ಲರಿಗೂ ಚಿರಪರಿಚಿತರಾದರು.
2005 ರಲ್ಲಿ ತೆರೆಕಂಡಿರುವ "ಮೆಂಟಲ್ ಮಂಜ" ಕನ್ನಡ ಚಿತ್ರದಲ್ಲಿ ಮೊದಲ ಬಾರಿಗೆ ಸಹಾಯಪಾತ್ರದಲ್ಲಿ ಕಾಣಿಸಿಕೊಂಡು ಸ್ಯಾಂಡಲ್ ವುಡ್ ನಲ್ಲಿ ಗುರುತಿಸಿಕೊಂಡರು. ನಂತರ ಇವರು ಕೆಲವು ಕನ್ನಡ ಸಿನಿಮಾಗಳಗೆ ತಮ್ಮದೆಯಾದ ಧ್ವನಿಯನ್ನು ನೀಡಿ ಸೈ ಎನಿಸಿಕೊಂಡಿದ್ದಾರೆ. ಇವರು ನಾಯಕ, ನಿರ್ದೇಶಕ, ನಿರ್ಮಾಪಕ, ಹಿನ್ನಲೆ ಗಾಯಕರಾಗಿ ಸ್ಯಾಂಡಲ್ ವುಡ್ ನಲ್ಲಿ ಮಿಂಚುತ್ತಿದ್ದಾರೆ.
ವಿಶಿಷ್ಟ ರೀತಿಯಲ್ಲಿ ವರ್ತಿಸುವ ಈ ಹುಚ್ಚ ವೆಂಕಟ್ ಬಿಗ್ ಬಾಸ್ ಸೀಜನ್ 3 ಶೋನಲ್ಲಿ ಗಲಾಟೆ ಮಾಡಿಕೊಂಡು ನಂತರ ಹುಚ್ಚ ವೆಂಕಟ್ ಫ್ಯಾನ್ಸ್ ಗಳು ಹುಟ್ಟಿಕೊಂಡರು. ಇವರು ಹಾಡಿರುವ ಕೆಲ ಫನ್ನಿ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ವೈರಲಾಗಿ ಮೆಚ್ಚುಗೆಗೆ ಪಾತ್ರವಾಗಿವೆ.