ಕೋಡಿ ರಾಮಕೃಷ್ಣ
ಕೋಡಿ ರಾಮಕೃಷ್ಣ ಜೀವನಚರಿತ್ರೆ
ಕೋಡಿ ರಾಮಕೃಷ್ಣ ಕನ್ನಡ ಮತ್ತು ತೆಲುಗು ಚಿತ್ರರಂಗದ ಪ್ರಸಿದ್ದ ನಿರ್ದೇಶಕ. ತೆಲುಗಿನ `ಅರುಂಧತಿ',ದೇವಿ ಪುತ್ರುಡು' ,ಕನ್ನಡದ `ನಾಗರಹಾವು' ಮುಂತಾದ ಸೂಪರ್ಹಿಟ್ ಚಿತ್ರಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಸಿನಿರಂಗದಲ್ಲಿ ನೂರು ಚಿತ್ರಗಳ ನಿರ್ದೇಶನ ಮಾಡಿದ್ದು ವಿಶೇಷ.
ಆಂಧ್ರದ ಪಶ್ಚಿಮ ಗೋದಾವರಿ ಪಾಕಕೊಲ್ಲು ಗ್ರಾಮದಲ್ಲಿ ಜುಲೈ 23 ರಂದು ಜನಿಸಿದರು. 1982 ರಲ್ಲಿ ತೆರೆಕಂಡ 'ಇಂಟುಲೋ ರಾಮಯ್ಯ ವಿದೀಲೋ ಕೃಷ್ಣಯ್ಯ' ಚಿತ್ರದ ಮೂಲಕ ನಿರ್ದೇಶಕರಾಗಿ ಸಿನಿಪಯಣ ಆರಂಭಿಸಿದರು.ಸುಮಾರು 30 ವರ್ಷಗಳ ಕಾಲ ಚಿತ್ರರಂಗದಲ್ಲಿ ತೊಡಗಿಸಿಕೊಂಡು, ನೂರಕ್ಕೂ ಅಧಿಕ ಚಿತ್ರಗಳನ್ನ ನಿರ್ದೇಶನ ಮಾಡಿದ್ದಾರೆ.
ಕೋಡಿರಾಮಕೃಷ್ಣ ಅವರು ನಿರ್ದೇಶಕರಾಗಿ ಮಾತ್ರವಲ್ಲದೇ, ಚಿತ್ರಕತೆ ಬರಹಗಾರರಾಗಿ ಮತ್ತು ನಟರಾಗಿಯೂ ಪ್ರಸಿದ್ಧರಾಗಿದ್ದಾರೆ.ಇವರು ಕೊನೆಯದಾಗಿ ನಿರ್ದೇಶಿಸಿದ್ದು 2016 ರಲ್ಲಿ ತೆರೆಕಂಡ ಕನ್ನಡದ `ನಾಗರಹಾವು' ಚಿತ್ರ.
ತಮ್ಮ ಕೊನೆಯ ದಿನಗಳಲ್ಲಿ ಶ್ವಾಸಕೋಶ ತೊಂದರೆಯಿಂದ ಬಳಲುತ್ತಿದ್ದ ರಾಮಕೃಷ್ಣರವರು 2019, ಫೆಬ್ರವರಿ 22 ರಂದು ಹೈದ್ರಾಬಾದ್ ನ ಎಐಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದರು.