ರಾಘವ ಉದಯ್
Born on
ರಾಘವ ಉದಯ್ ಜೀವನಚರಿತ್ರೆ
ರಾಘವ್ ಉದಯ ಕನ್ನಡ ಚಿತ್ರರಂಗದ ಖ್ಯಾತ ಖಳನಾಯಕನಾಗಿದ್ದರು. ಪೂರ್ಣ ಅರುಳುವ ಮುನ್ನವೇ ಬಾಡಿಹೋದ ಈ ಅದ್ಭುತ ಪ್ರತಿಭೆಯ ಸಾವು ಕನ್ನಡ ಚಿತ್ರರಂಗಕ್ಕಗಾದ ನಷ್ಟ. ಬಡ ಕುಟಂಬದಿಂದ ಉದಯ್ ಚಿತ್ರರಂಗಕ್ಕೂ ಬರುವ ಮುನ್ನ ಅಟೋ ಡ್ರೈವರ್ ಆಗಿದ್ದರು. ದುನಿಯಾ ಚಿತ್ರದಲ್ಲಿ ಕೆಲಸ ಮಾಡಿದ ನಂತರ ನಟ ದುನಿಯಾ ವಿಜಯವರ ಸ್ನೇಹಿತರಾದರು. ನಂತರ ದುನಿಯಾ ವಿಜಯ್, ಅನಿಲ್ ಮತ್ತು ರಾಘವ ಉದಯ್ ಒಳ್ಳೆಯ ಸ್ನೇಹಿತರಾಗಿದ್ದರು.ಮೊದಲು ಚಿಕ್ಕ ಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದ ಉದಯಗೆ ಕೀರ್ತೀ ತಂದ ಪಾತ್ರ `ಜಯಮ್ಮನ ಮಗ' ಚಿತ್ರದ ರಕ್ತಾಕ್ಷ ಪಾತ್ರ. ಈ ಪಾತ್ರದ ನಟನೆಗಾಗಿ 2013ರ `ಅತ್ತ್ಯುತ್ತಮ ಖಳನಾಯಕ' ಸೈಮಾ ಪ್ರಶಸ್ತಿ ಪಡೆದರು.
2016 ನವೆಂಬರ್ ನಲ್ಲಿ ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ `ಮಾಸ್ತಿಗುಡಿ' ಚಿತ್ರದ ಕ್ಲೈಮಾಕ್ಸ್ ಶೂಟಿಂಗ್ ಮಾಡುವಾಗ ಆದ ಅವಘಡ ಇವರ ಪ್ರಾಣಕ್ಕೆ ಎರವಾಯಿತು
ಸಂಬಂಧಿತ ಸುದ್ದಿ