ಶಶಿಕುಮಾರ್ (ಬಿಗ್ ಬಾಸ್)
ಶಶಿಕುಮಾರ್ (ಬಿಗ್ ಬಾಸ್) ಜೀವನಚರಿತ್ರೆ
ಆಧುನಿಕ ಮಾದರಿ ರೈತ ಶಶಿಕುಮಾರ್ ಚಿಕ್ಕಬಳ್ಳಾಪುರದ ಚಿಂತಾಮಣಿ ಮೂಲದವರು. ಬೆಂಗಳೂರಿನ ಜೆಕೆವಿಕೆ ಕೃಷಿ ವಿದ್ಯಾಲಯದಲ್ಲಿ ಮಾಸ್ಟರ್ ಡಿಗ್ರಿ ಪಡೆದಿರುವ ಇವರು ಕೃಷಿಯಲ್ಲಿ ನೂತನ ತಂತ್ರಜ್ಞಾನ ಬಳಸುವಲ್ಲಿ ಸಿದ್ಧಹಸ್ತರು.
ಜಾನಪದ ನೃತ್ಯ ಮತ್ತು ನಾಟಕಗಳಲ್ಲಿ ಅಭಿನಯಿಸುವ ಶಶಿ ಒಬ್ಬ ಒಳ್ಳೆಯ ಜಾನಪದ ಕಲಾವಿದರು. ಡೂಳ್ಳು ಕುಣಿತ,ಪೂಜೆ ಕುಣಿತ,ವೀರಗಾಸೆ,ಕಂಸಾಳೆ ಮುಂತಾದ ಜಾನಪದ ಕೆಲೆಗಳಲ್ಲಿ ಸಿದ್ಧಹಸ್ತರು. `ಭೂಮಿಕ' ಎಂಬ ತಂಡ ಕಟ್ಟಿಕೊಂಡು ರಾಜ್ಯ ಮತ್ತು ರಾಷ್ಟ್ರಾದಾದ್ಯಂತ ಹಲವು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಇವುಗಳಲ್ಲಿ ಮೂರು ನೃತ್ಯ ಮತ್ತು ಎರಡು ನಾಟಕ ಕಾರ್ಯಕ್ರಮಗಳಿಗೆ ಚಿನ್ನದ ಪದಕ ಪಡೆದಿದ್ದಾರೆ.ಪಾರ್ಟ್ ಟೈಮ್ನಲ್ಲಿ ಸೀರಿಯಲ್ಗಳಲ್ಲಿ ನಟಿಸುತ್ತಾರೆ.
ರೈತನಾಗಿ
ಚಿಂತಾಮಣಿ ಮೂಲದ ಶಶಿ ರಾಮನಗರದ ಬಳಿಯಿರುವ ನಾಲ್ಕು ಎಕರೆ ಭೂಮಿಯನ್ನು ಭೋಗ್ಯಕ್ಕೆ ಪಡೆದು ಅದರಲ್ಲಿ ಕೋಳಿ ಮತ್ತು ಕುರಿ ಸಾಕಾಣಿಕೆ ಮಾಡುತ್ತಿದ್ದಾರೆ. ಹಾಗೇಯೇ ಜೋಳ ಮತ್ತು ಟ್ಯೋಮೋಟೋ ಬೆಳೆಯುತ್ತಾರೆ. ಶಶಿಯ ತಾತ ಹತ್ತು ಎಕರೆ ಜಮೀನು ಹೊಂದಿ ಆಗಿನ ಕಾಲಕ್ಕೆ ಆ ಹೋಬಳಿಯಲ್ಲಿ ಅತಿ ಹೆಚ್ಚು ಬೆಳೆ ಬೆಳೆಯುವ ರೈತನಾಗಿ ಗುರುತಿಸಿಕೊಂಡಿದ್ದರು.
ತಾತ ತೀರಿಕೊಂಡ ಮೇಲೆ ಕೃಷಿಯಲ್ಲಿ ನಷ್ಟವಾಯಿತು. ಶಶಿ ತಂದೆ ಶ್ರೀರಾಮ ರಡ್ಡಿ ಹೋಟೆಲ್ ಒಂದನ್ನು ಆರಂಭಿಸಿ ಆರೇಳು ವರ್ಷಗಳ ನಂತರ ಟೆಕ್ಸಟೈಲ್ಸ್ ಅಂಗಡಿ ಆರಂಭಿಸಿದರು. ಈಗಲೂ ಶಶಿ ತಂದೆ ಚಿಂತಾಮಣಿಯಲ್ಲಿ ಟೆಕ್ಸಟೈಲ್ಸ್ ಅಂಗಡಿ ನಡೆಸುತ್ತಿದ್ದಾರೆ.
ಸಾಮಾಜಿಕ ಜೀವನ
ಬಿಗ್ಬಾಸ್ ಮನೆಯಲ್ಲಿ ಹೊಸವರ್ಷದ ದಿನ ತೆಗೆದುಕೊಂಡ ನಿರ್ಧಾರದಂತೆ ಶಶಿ ನಿಯಮಿತವಾಗಿ ಬಿಳಿ ರಕ್ತಕಣಗಳನ್ನು ದಾನ ಮಾಡುತ್ತಾರೆ. ತಾವು ಓದಿ ಬೆಳೆದ ಚಿಂತಾಮಣಿಯ ಬಟ್ಲಹಳ್ಲಿಯ ವಿವಿಎಸ್ ಶಾಲೆಯ 25 ಮಕ್ಕಳನ್ನು ದತ್ತು ಪಡೆದಿರುವ ಶಶಿ ಅವರ ವಿಧ್ಯಾಭ್ಯಾಸ, ಯೂನಿಫಾರ್ಮ್ ಸೇರಿದಂತೆ ಶಾಲಾ ಖರ್ಚು ವೆಚ್ಚದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.
ಬಿಗ್ಬಾಸ್ ಕನ್ನಡ ಸೀಸನ್ 6
ಕಿಚ್ಚ ಸುದೀಪ್ ನಿರೂಪಣೆಯ ಕನ್ನಡ ಬಿಗ್ ಬಾಸ್ ಸೀಸನ್ 6 ರಲ್ಲಿ 17 ಸ್ಪರ್ಧಿಗಳ ಜೊತೆಗೆ ಇವರು ಭಾಗವಹಿಸಿದ್ದಾರೆ.ಈ ಸ್ಫರ್ದೆಯಲ್ಲಿ ವಿನ್ನರ್ ಆದ ಇವರು 50 ಲಕ್ಷ ಬಹುಮಾನದೊಂದಿಗೆ ಟ್ರೋಫಿಗೆ ಮುತ್ತಿಟ್ಟರು.
ಬಿಗ್ಬಾಸ್ 6ನೇ ಸೀಸನ್ ಸ್ಪರ್ಧಿಗಳು