ವಿಜಯ ನಾರಸಿಂಹ
ವಿಜಯ ನಾರಸಿಂಹ ಜೀವನಚರಿತ್ರೆ
60,70 ಮತ್ತು 80 ರ ದಶಕದಲ್ಲಿ ಸಕ್ರಿಯವಾಗಿದ್ದ ಇವರು 2001 ರಲ್ಲಿ ಹೃದಯಾಘಾತದಿಂದ ಇಹಲೋಕ ತ್ಯಜಿಸಿದರು.
ಸಿನಿಪಯಣ
ಡಾ.ರಾಜಕುಮಾರ್ ಅಭಿನಯದ `ಓಹಿಲೇಶ್ವರ' ಚಿತ್ರದ `ಈ ದೇಹದಿಂದ ದೂರವಾದೆ ಏಕೆ ಆತ್ಮವೇ' ಗೀತೆಯಿಂದ ಇವರ ಸಿನಿಪಯಣ ಶುರುವಾಯಿತು. ನಂತರ ಪುಟ್ಟಣ್ಣ ಕಣಗಾಲ್ ಮತ್ತು ವಿಜಯ ಭಾಸ್ಕರ್ ಜೊತೆಗೂಡಿದ ಇವರು ಕನ್ನಡ ಚಿತ್ರರಂಗದ ಚಮತ್ಕಾರಿ ತ್ರಿವಳಗಳೆಂದೇ ಪ್ರಸಿದ್ಧರಾದರು. `ಗೆಜ್ಜೆ ಪೂಜೆ' ,`ಶರಪಂಜರ'`ಎಡಕಲ್ಲು ಗುಡ್ಡದ ಮೇಲೆ' ಮುಂತಾದ ಚಿತ್ರಗಳಿಗೆ ಸಾಹಿತ್ಯ ನೀಡಿದ್ದಾರೆ. ರಾಜಕುಮಾರ್ ಅಭಿನಯದ `ಒಡಹುಟ್ಟಿದವರು' ಇವರು ಸಾಹಿತ್ಯ ನೀಡಿದ ಕೊನೆಯ ಚಿತ್ರ.
ಚಿತ್ರಜಗತ್ತಿನಾಚೆಗೆ
ಚಿತ್ರಗೀತೆಗಳನಷ್ಷೇಯಲ್ಲದೇ ಕೆಲವು ಕಾದಂಬರಿಗಳನ್ನು ಬರೆದಿದ್ದಾರೆ. `ಬದುಕಿನ ಭೈರಾಗಿ',`ಶ್ರೀಮನ್ ಚಕ್ರಾಯಣ' ಮತ್ತು`ಸಂಜೆಗಂಪು' ಕಾದಂಬರಿಗಳನ್ನು ಬರೆದಿರುವ ಇವರು ಪುಟ್ಟಣ್ಣ ಕಣಗಾಲ್ ಅವರ ಆತ್ಮಕಥೆಯನ್ನು ಬರೆದಿದ್ದಾರೆ. ಇವರ `ಭಾದ್ರಪದ ಶುಕ್ಲದ ಚೌತಿ' ಧ್ವನಿಸುರಳಿ ಸುಮಾರು ಮೂವತ್ತು ವರ್ಷಗಳ ಹಿಂದೆ ದಾಖಲೆ ಪ್ರಮಾಣದಲ್ಲಿ ಮಾರಾಟವಾಗಿತ್ತು.
ಕೆಲವು ಪ್ರಸಿದ್ಧ ಚಿತ್ರಗೀತೆಗಳ ಸಾಲುಗಳು
ಈ ದೇಹದಿಂದ ದೂರವಾದೇ ಏಕೆ ಆತ್ಮವೇ- (ಓಹಿಲೇಶ್ವರ)
ಭಾರತ ಭೂಶಿರ ಮಂದಿರ ಸುಂದರಿ - (ಉಪಾಸನೆ)
ಪಂಚಮವೇದ ಪ್ರೇಮದ ನಾದ - (ಗೆಜ್ಜೆ ಪೂಜೆ)
ಸಂದೇಶ ಮೇಘಸಂದೇಶ- (ಶರಪಂಜರ)
ಪ್ರೀತಿಯೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ- (ದೂರದ ಬೆಟ್ಟ)
ವಿರಹ ನೂರು ತರಹ- (ಎಡಕಲ್ಲು ಗುಡ್ಡದ ಮೇಲೆ)
ಮಂದಾರ ಪುಷ್ಪವು ನೀನು - (ರಂಗನಾಯಕಿ)
ಹಿಂದೂಸ್ಥಾನವ ಎಂದೂ ಮರೆಯದ - (ಅಮೃತ ಘಳಿಗೆ)