twitter
    For Quick Alerts
    ALLOW NOTIFICATIONS  
    For Daily Alerts

    ಐದು ಪೈಸೆಯ ನಾಣ್ಯಗಳಲ್ಲೇ ಹತ್ತು ಸಾವಿರ ಸಂಭಾವನೆ ನೀಡಿದ್ದ ನಿರ್ಮಾಪಕರು

    By ಫಿಲ್ಮ್ ಡೆಸ್ಕ್
    |

    ನಿರ್ಮಾಪಕರನ್ನು ಡಾ. ರಾಜ್ ಕುಮಾರ್ ಅನ್ನದಾತರು ಎಂದು ಕರೆದಿದ್ದರು. ಹಿಂದಿನ ತಲೆಮಾರಿನ ನಿರ್ಮಾಪಕರನ್ನು ಹಾಗೆಯೇ ಗೌರವಿಸುತ್ತಿದ್ದರು. ನಿರ್ಮಾಪಕರು ಕೂಡ ಕಲಾವಿದರು ಮತ್ತು ತಂತ್ರಜ್ಞರಿಗೆ ತೊಂದರೆಯಾಗದಂತೆ ಕಾಳಜಿವಹಿಸುತ್ತಿದ್ದರು. ಇದೇ ಪರಿಸ್ಥಿತಿ ಈಗಲೂ ಇದೆ ಎನ್ನಲಾಗುವುದಿಲ್ಲ. ಸಿನಿಮಾಗಳ ಬಗ್ಗೆ ಕನಸು ಮತ್ತು ಬದ್ಧತೆಯುಳ್ಳ ನಿರ್ಮಾಪಕರ ಸಂಖ್ಯೆ ಕಡಿಮೆಯಾಗಿದೆ. ಸಿನಿಮಾದಲ್ಲಿ ಲಾಭವಷ್ಟೇ ಅವರ ತಲೆಯಲ್ಲಿ ಇರುತ್ತದೆ ಎಂಬ ಆರೋಪಗಳಿವೆ.

    Recommended Video

    KGF ಎಡಿಟರ್ ನಮ್ಮ ಸಿನಿಮಾ ಎಡಿಟ್ ಮಾಡಿದ್ರು | Raghu Samarth | Filmibeat Kannada

    ಈ ಹಿಂದಿನ ನಿರ್ಮಾಪಕರಲ್ಲಿ ಲಾಭ ನಷ್ಟಗಳಿಗಿಂತಲೂ ಒಳ್ಳೆಯ ಸಿನಿಮಾ ಮಾಡಬೇಕು, ವ್ಯವಹಾರ ಚಟುವಟಿಕೆಗಳಲ್ಲಿ ಲೋಪವಾಗಬಾರದು ಮತ್ತು ತಮ್ಮಿಂದ ಯಾರಿಗೂ ಸಮಸ್ಯೆಯಾಗಬಾರದು ಎಂಬ ಕಾಳಜಿ ಇರುತ್ತಿತ್ತು. ಇದಕ್ಕೆ ನಟ ಸುಂದರ್ ಕೃಷ್ಣ ಅರಸ್ ಅವರ ಸಹೋದರ, ಹಿರಿಯ ಸಂಕಲನಕಾರ ಸುರೇಶ್ ಅರಸ್ ಉತ್ತಮ ಉದಾಹರಣೆಯೊಂದನ್ನು ನೀಡಿದ್ದಾರೆ. ಕೆ.ಎಸ್. ಪರಮೇಶ್ವರ್ ಅವರ 'ಕಲಾಮಾಧ್ಯಮ' ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಅವರು ಅಪರೂಪದ ಸಂಗತಿಯೊಂದನ್ನು ಹಂಚಿಕೊಂಡಿದ್ದಾರೆ. ಮುಂದೆ ಓದಿ.

    ಎರಡು ದಿನಗಳ ಚಿತ್ರೀಕರಣಕ್ಕಾಗಿ ರಜನಿಕಾಂತ್ ಪಡೆದುಕೊಂಡಿದ್ದ ಸಂಭಾವನೆ ಎಷ್ಟು ಗೊತ್ತೇ?ಎರಡು ದಿನಗಳ ಚಿತ್ರೀಕರಣಕ್ಕಾಗಿ ರಜನಿಕಾಂತ್ ಪಡೆದುಕೊಂಡಿದ್ದ ಸಂಭಾವನೆ ಎಷ್ಟು ಗೊತ್ತೇ?

    ಮನೆಗೇ ಸಂಭಾವನೆ ತಲುಪಿಸುತ್ತಿದ್ದರು

    ಮನೆಗೇ ಸಂಭಾವನೆ ತಲುಪಿಸುತ್ತಿದ್ದರು

    ಅವರು ಎಂತಹ ನಿರ್ಮಾಪಕರು ಎಂದರೆ ನಾವು ಅವರ ಬಳಿ ಸಂಬಳವನ್ನು ಕೇಳುವ ಪ್ರಸಂಗವೇ ಬರುತ್ತಿರಲಿಲ್ಲ. ಸಿನಿಮಾ ಬಿಡುಗಡೆಯಾದ ಬಳಿಕ ಅದು ಗೆಲ್ಲಲಿ, ಸೋಲಲಿ ಯಾವ ಕಲಾವಿದನಿಗೂ, ತಂತ್ರಜ್ಞರಿಗೂ ಹೇಳಿದ ಸಂಭಾವನೆ ತಪ್ಪಿಸುತ್ತಿರಲಿಲ್ಲ. ನಾನು ಮನೆಯಲ್ಲಿ ಇಲ್ಲದಿದ್ದರೂ ಕವರ್ ಕೊಟ್ಟು ಹೋಗಿರುತ್ತಿದ್ದರು. ಅದರಲ್ಲಿ ಒಂದು ರೂಪಾಯಿ ಕೂಡ ಕಡಿಮೆಯಾಗದಂತೆ ಸಂಭಾವನೆ ಇರುತ್ತಿತ್ತು. ನಿನಗೆ ಯಾವ ಡಿನಾಮಿನೇಷನ್‌ನಲ್ಲಿ ದುಡ್ಡು ಬೇಕು ಎಂದು ಕೇಳುತ್ತಿದ್ದವರು ಅವರು ಎಂದಿದ್ದಾರೆ.

    ಬಾವಾ ಮೂವೀಸ್‌ನವರು ಮೂರು ಜನ ಪಾರ್ಟ್ನರ್‌ಗಳು. ಒಬ್ಬರು ಪ್ರೊಡಕ್ಷನ್ ಕೆಲಸ ನೋಡಿಕೊಳ್ಳುತ್ತಿದ್ದರು. ಮೂರನೇ ಪಾರ್ಟ್ನರ್ ಪ್ರೊಡಕ್ಷನ್ ನೋಡಿಕೊಳ್ಳುವವರು. ಒಬ್ಬರು ಕ್ಯಾಮೆರಾ ಮತ್ತೊಬ್ಬರು ನಿರ್ದೇಶನ. ಒಬ್ಬರ ಕೆಲಸದಲ್ಲಿ ಇನ್ನೊಬ್ಬರು ಮೂಗು ತೂರಿಸುತ್ತಿರಲಿಲ್ಲ.

    ಲಾಕ್ ಡೌನ್ ನಡುವೆಯೂ ಗಗನಕ್ಕೇರಿತು ಅಲ್ಲು ಅರ್ಜುನ್ ಸಂಭಾವನೆಲಾಕ್ ಡೌನ್ ನಡುವೆಯೂ ಗಗನಕ್ಕೇರಿತು ಅಲ್ಲು ಅರ್ಜುನ್ ಸಂಭಾವನೆ

    ಚೆಕ್ ಬೌನ್ಸ್ ಆಗುತ್ತಾ ಕೇಳಿದ ನಟಿ

    ಚೆಕ್ ಬೌನ್ಸ್ ಆಗುತ್ತಾ ಕೇಳಿದ ನಟಿ

    ಒಂದು ಸಿನಿಮಾ ಪೋಸ್ಟ್ ಪ್ರೊಡಕ್ಷನ್ ನಡೆಯುವಾಗ ಡಬ್ಬಿಂಗ್‌ಗಾಗಿ ಪೋಷಕ ನಟಿಯೊಬ್ಬರು ಬಂದರು. ಅವರಿಗೆ ಹತ್ತು ಸಾವಿರ ರೂ ಸಂಭಾವನೆ ನೀಡುವುದು ಬಾಕಿ ಇತ್ತು. ಪ್ರೊಡಕ್ಷನ್ ಮ್ಯಾನೇಜರ್ ಚೆಕ್ ನೀಡಿದರು. ಆ ನಟಿ 'ಇದು ಬೌನ್ಸ್ ಆಗುತ್ತಾ' ಎಂದರು. ಅದನ್ನು ಕೇಳಿದ್ದೇ ಮೂರು ಜನಕ್ಕೂ ಕೋಪ ಬಂತು. ಅವರಿಗೆ ಯಾರೂ ಹಾಗೆ ಕೇಳಿರಲಿಲ್ಲ. ಯಾವ ಡಿನಾಮಿನೇಷನ್‌ದು ಬೇಕು ಹೇಳಿ? ಐದು ಪೈಸೆ, ಹತ್ತು ಪೈಸೆ, 25 ಪೈಸೆ, 50 ಪೈಸೆಯದು ಬೇಕಾ ತರಿಸಿಕೊಡ್ತೀನಿ ಎಂದು ಅಲ್ಲಿಯೇ ಸಿಡಿದು ನಿಂತರು.

    ಐದು ಪೈಸೆ ಚಿಲ್ಲರೆಯಲ್ಲಿ ಹತ್ತು ಸಾವಿರ

    ಐದು ಪೈಸೆ ಚಿಲ್ಲರೆಯಲ್ಲಿ ಹತ್ತು ಸಾವಿರ

    ಹತ್ತು ಸಾವಿರ ರೂಪಾಯಿ ಬ್ಯಾಲೆನ್ಸ್ ಇದ್ದಿದ್ದು. ನಂಬುತ್ತೀರೋ ಬಿಡುತ್ತೀರೋ. ಒಂದು ಗಂಟೆಯಲ್ಲಿ ಹತ್ತು ಸಾವಿರ ರೂಪಾಯಿ ತರಿಸಿದರು. ಪ್ರತಿಯೊಂದೂ ಐದು ಪೈಸೆಯ ನಾಣ್ಯ. ಆ ಪೋಷಕ ನಟಿ ಅಲ್ಲಾಡಿಹೋದರು. ಸಾರಿ ಸಾರಿ ಎಂದು ಕೇಳಿದರೂ ಅವರು ಕ್ಷಮಿಸಲೂ ತಯಾರಿರಲಿಲ್ಲ. ನಮ್ಮ ಕಂಪೆನಿ ಬಗ್ಗೆ ಹಾಗೆ ಹೇಗೆ ಹೇಳುತ್ತೀರಿ ಎಂದು ನಾಣ್ಯದಲ್ಲಿಯೇ ಸಂಭಾವನೆ ನೀಡಿದರು ಎಂದು ಅರಸ್ ಸ್ಮರಿಸಿಕೊಂಡಿದ್ದಾರೆ.

    ಅಂತಹವರನ್ನು ನೋಡಿದ್ದು ಅದೇ ಮೊದಲು

    ಅಂತಹವರನ್ನು ನೋಡಿದ್ದು ಅದೇ ಮೊದಲು

    ಅವರದು ಅಂತಹ ಒಳ್ಳೆಯ ಕಂಪೆನಿ. ನಾವು ಅವರಿಂದ ಬದ್ಧತೆ ಕಲಿಯಬೇಕು. ಒಂದು, ಎರಡು, ಹತ್ತು ರೂ ಇರಲಿ, ಎಷ್ಟು ಕಮಿಟ್ ಆಗರುತ್ತೇವೋ ಅಷ್ಟು ಕೊಡಬೇಕು. ಅವರಿಂದ ಕೆಲಸ ಮಾಡಿಸಿರುತ್ತೇವೆ, ಅದಕ್ಕೆ ತಕ್ಕಂತೆ ಕೊಡುತ್ತೇವೆ ಎಂದು ಒಪ್ಪಿಕೊಂಡಿರುವುದನ್ನು ಕೊಡಬೇಕು ಎನ್ನುವುದು ಅವರ ನಿಲುವು. ಇದನ್ನೆಲ್ಲ ನೋಡಿದಾಗ ಎಷ್ಟು ಖುಷಿಯಾಗುವುದು ಎಂದರೆ ಇಂತಹ ಒಳ್ಳೆಯ ಕಂಪೆನಿಯಲ್ಲಿ ಕೆಲಸ ಮಾಡಿದರೆ ಬದುಕೋದು ಸುಲಭ ಎಂದು ಎನಿಸುತ್ತಿತ್ತು. ಕನ್ನಡ ಚಿತ್ರರಂಗದಲ್ಲಿ ಅಂತಹ ನಿರ್ಮಾಪಕರನ್ನು ನಾನು ನೋಡಿದ್ದು ಅದೇ ಮೊದಲು. ತಂತ್ರಜ್ಞರನ್ನು ನಿರ್ಮಾಪಕರು ಚೆನ್ನಾಗಿ ನೋಡಿಕೊಂಡರೆ ಉದ್ಯಮ ಚೆನ್ನಾಗಿ ಇರುತ್ತದೆ ಎಂದು ಹೇಳಿದ್ದಾರೆ.

    ಬಿಗ್ ಬಾಸ್‌ ನಿರೂಪಣೆಗೆ ಸಲ್ಮಾನ್ ಬೇಡಿಕೆ ಇರಿಸಿರುವ ಸಂಭಾವನೆ ಇಷ್ಟೊಂದಾ?ಬಿಗ್ ಬಾಸ್‌ ನಿರೂಪಣೆಗೆ ಸಲ್ಮಾನ್ ಬೇಡಿಕೆ ಇರಿಸಿರುವ ಸಂಭಾವನೆ ಇಷ್ಟೊಂದಾ?

    English summary
    Film editor Suresh Urs remembered one incident that the producers gave Rs 10,000 remuneration to a supporting actress in 5 paise coins.
    Saturday, July 18, 2020, 9:32
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X