Don't Miss!
- Finance ಭಾರತದ ಮೊದಲ ಬುಲೆಟ್ ರೈಲಿನ ಬ್ಯಾಲೆಸ್ಟ್ಲೆಸ್ ಟ್ರ್ಯಾಕ್ ಸಿಸ್ಟಮ್ ಹಳಿ ಚಿತ್ರ ಬಹಿರಂಗ
- Lifestyle ಮೈ ತೂಕ ಕಡಿಮೆಯಾಗಲು ಈ ಪುದೀನಾ ನೀರು ಸಹಕಾರಿಯೇ? ಇದರ ಇತರ ಪ್ರಯೋಜನಗಳೇನು?
- News Poornachandra Tejaswi: ವಿಸ್ಮಯಲೋಕವನ್ನೇ ತೆರೆದಿಡುವ ತೇಜಸ್ವಿಯವರ ಪುಸ್ತಕಗಳು
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಉಪೇಂದ್ರ' ಚಿತ್ರದ ಕಥೆ ಹುಟ್ಟಿದ ಹಿಂದಿನ ರೋಚಕ ಸಂಗತಿ
ಒಂದು ಸಿನಿಮಾದ ಹುಟ್ಟಿನ ಹಿಂದೆ ಒಂದು ಕಥೆ ಇದ್ದೇ ಇರುತ್ತದೆ. ಕೆಲವು ಬಾರಿ ಅದು ಆ ಸಿನಿಮಾದ ಕಥೆಗಿಂತ ಕುತೂಹಲಕಾರಿಯಾಗಿರುತ್ತದೆ.
ರಿಯಲ್ ಸ್ಟಾರ್ ಉಪೇಂದ್ರ ಕೆರಿಯರ್ ನಲ್ಲಿ ದೊಡ್ಡ ಯಶಸ್ಸು ನೀಡಿದ್ದ ಸಿನಿಮಾ 'ಉಪೇಂದ್ರ'. ತಮ್ಮದೆ ಹೆಸರಿನಲ್ಲಿ ಸಿನಿಮಾ ಮಾಡಿದ್ದ ಉಪ್ಪಿ, ಈ ಸಿನಿಮಾದ ಮೂಲಕ ಅವರ ಹೆಸರನ್ನು ಇನ್ನು ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋದರು.
'ಉಪೇಂದ್ರ' ಒಂದು ಪಕ್ಕಾ ಕಲ್ಟ್ ಸಿನಿಮಾ. ಆ ಸಿನಿಮಾದ ಕೆಲವು ವಿಷಯಗಳು ಈ ಜನರೇಶನ್ ಗೂ ಆಶ್ಚರ್ಯ ಉಂಟು ಮಾಡತ್ತದೆ. ಹೀಗಿರುವಾಗ, ಆ ಕಾಲದಲ್ಲಿಯೇ ಅಂತಹ ಸಿನಿಮಾ ರಿಯಲ್ ಸ್ಟಾರ್ ಹೇಗೆ ಮಾಡಿದ್ರು ಎನ್ನುವ ಕುತೂಹಲ ಅನೇಕರಿಗೆ ಇರುತ್ತದೆ.
ಅ, ಬ, ಪ, ಮ.... ಈ ಅಕ್ಷರಗಳಲ್ಲಿದೆ ಸ್ಟಾರ್ ನಿರ್ದೇಶಕರ ಶಕ್ತಿ
ಅಂದಹಾಗೆ, 'ಉಪೇಂದ್ರ' ಸಿನಿಮಾದ ಕಥೆ ಹುಟ್ಟಿದ ಘಟನೆ ತುಂಬ ಚೆನ್ನಾಗಿದೆ. ವಾದ ವಿವಾದದಲ್ಲಿ ಶುರುವಾದ ಒಂದು ವಿಷಯ, ಕಥೆಯಾಗಿ, ಮುಂದೆ ಸಿನಿಮಾವಾಗಿ ದೊಡ್ಡ ಸೂಪರ್ ಹಿಟ್ ಆಯ್ತು.
ಗೆಳೆಯರ ಜೊತೆ ಮದುವೆ ಮುಗಿಸಿಕೊಂಡು ಬರುತ್ತಿದ್ದ ಉಪ್ಪಿ
ಉಪೇಂದ್ರ ತಮ್ಮ ಗೆಳೆಯರ ಜೊತೆಗೆ ಒಂದು ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದರಂತೆ. ಕಾರ್ ನಲ್ಲಿ ಬೆಂಗಳೂರಿಗೆ ವಾಪಸ್ ಬರುವಾಗ, ಓಶೋ ಅವರ ಆಡಿಯೋ ಕಾರ್ ನಲ್ಲಿ ಪ್ಲೇ ಆಗುತ್ತಿತ್ತು. ಪ್ರೀತಿ, ಪ್ರೇಮ, ಮದುವೆ, ಸಂಬಂಧ ಈ ವಿಷಯಗಳ ಬಗ್ಗೆ ಓಶೋ ಮಾತನಾಡುತ್ತಿದ್ದರು. ಅದೇ 'ಉಪೇಂದ್ರ' ಕಥೆಯ ಹುಟ್ಟಿಗೆ ಮೊದಲ ಕಾರಣವಾಯ್ತು.
ಪ್ರೀತಿ ಬಗ್ಗೆ ಗೆಳೆಯರ ನಡುವೆ ಚರ್ಚೆ
ಆಡಿಯೋ ಕೇಳುತ್ತಿದ್ದ ಉಪೇಂದ್ರ ಪ್ರೀತಿ ಬಗ್ಗೆ ನಿಮಗೆ ಏನನಿಸುತ್ತದೆ ಎಂದು ಸ್ನೇಹಿತರಿಗೆ ಪ್ರಶ್ನೆ ಮಾಡಿದರು. ಎಲ್ಲರೂ ತಮ್ಮ ಅನುಭವ ಹಾಗೂ ಅಭಿಪ್ರಾಯಗಳನ್ನು ಹೊರ ಹಾಕಿದರು. ವಾದ, ವಿವಾದ, ಚರ್ಚೆ ಜೋರಾಗಿ ನಡೆಯಿತು. ಅದರ ವಿಷಯಗಳು ತುಂಬ ಇಂಟ್ರೆಸ್ಟಿಂಗ್ ಆಗುತ್ತಾ ಹೋಯ್ತು. ಇದೆಲ್ಲವನ್ನು ಉಪೇಂದ್ರ ಸೂಕ್ಷ್ಮವಾಗಿ ಗಮನಿಸುತ್ತಿದ್ದರು.
ಮೂರು ನಾಯಕಿಯರು
ಸ್ನೇಹಿತರ ಮಾತುಗಳನ್ನು ಇಟ್ಟುಕೊಂಡು, ಅವರು ಹೇಳಿದ ಕೆಲವು ಸನ್ನಿವೇಶಗಳ ಮೇಲೆ 'ಉಪೇಂದ್ರ' ಕಥೆ ಪ್ರಾರಂಭ ಆಯ್ತು. ಗೆಳೆಯರ ಚರ್ಚೆಯೇ ಕಥೆಗೆ ಅಂಶಗಳನ್ನು ನೀಡುತ್ತಾ ಹೋಯ್ತು. ನಂತರ ಬೇಸಿಗೆಗಾಲ, ಚಳಿಗಾಲ, ಮಳೆಗಾಲ ಹೀಗೆ ಮೂರು ಕಾಲಗಳನ್ನು ಪ್ರತಿನಿಧಿಸುವ ಹಾಗೆ ಮೂರು ನಾಯಕಿಯರ ಪಾತ್ರಗಳು ಸೃಷ್ಟಿಯಾಯ್ತು.
'ನಾನು' ಬದಲು 'ಉಪೇಂದ್ರ' ಬಂದ
ನಾನು ಎಂಬ ಒಂದು ಪಾತ್ರ ಹೇಗೆ ಯೋಚನೆ ಮಾಡುತ್ತದೆ ಎನ್ನುವ ಅಂಶ ಕಥೆಗೆ ಹೊಸ ರೂಪ ತಂದು ಕೊಟ್ಟಿತು. ಮೊದಲು ಸಿನಿಮಾ 'ನಾನು' ಎಂದೇ ಟೈಟಲ್ ಇಡಬೇಕು ಎಂಬ ಯೋಚನೆ ಉಪ್ಪಿಗೆ ಇತ್ತು. ಆದರೆ, ಆ ಬಳಿಕ 'ನಾನು ಎಂದರೆ ಯಾರು..?'.. ಉಪೇಂದ್ರ. ಹೀಗಾಗಿ ತಮ್ಮ ಹೆಸರನ್ನೇ ಸಿನಿಮಾದ ಟೈಟಲ್ ಮಾಡಿದರು. ಹೀಗೆ ಈ ಸಿನಿಮಾದ ಕಥೆ ಪ್ರಾರಂಭವಾಯಿತು.
Recommended Video
ನಿರ್ಮಾಪಕರಿಗೆ ಅರ್ಥವೇ ಆಗಲಿಲ್ಲ
ಉಪೇಂದ್ರ ಸಿನಿಮಾವನ್ನು ಎಚ್ ಸಿ ಶ್ರೀನಿವಾಸ್ ನಿರ್ಮಾಣ ಮಾಡಿದ್ದರು. ಸಿನಿಮಾದ ಚಿತ್ರೀಕರಣದ ವೇಳೆ ಅವರಿಗೆ ಸಿನಿಮಾ ಅರ್ಥವೇ ಆಗಿರಲಿಲ್ಲವಂತೆ. ಉಪೇಂದ್ರ ಏನು ಮಾಡುತ್ತಿದ್ದಾನೆ ಎಂದು ತಲೆ ಕಡಿಸಿಕೊಂಡಿದ್ದರಂತೆ. ಆದರೆ, ಸಿನಿಮಾ ಮುಗಿದು, ಬಿಡುಗಡೆಯಾಗಿ, ದೊಡ್ಡ ಹಿಟ್ ಆಗಿದ್ದು, ಅವರಿಗೆ ತುಂಬ ಖುಷಿ ನೀಡಿತ್ತಂತೆ.