Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಇತ್ತ ಟಿ ಎಸ್ ನಾಗಾಭರಣ- ಅತ್ತ ಸಿಂಗೀತಂ ಎಲ್ಲಿಗೆ ಬಂದು ನಿಂತಿದೆ 'ಬೆಂಗಳೂರು ನಾಗರತ್ನಮ್ಮ' ಬಯೋಪಿಕ್?!
ಪ್ರಸ್ತುತ
ಭಾರತೀಯ
ಸಿನಿಮಾ
ರಂಗದಲ್ಲಿ
ಸತ್ಯ
ಘಟನೆಗಳ
ಆಧಾರಿತ
ಸಿನಿಮಾಗಳು
ಅಥವಾ
ಬಯೋಪಿಕ್
ಸಿನಿಮಾಗಳ
ಜಮಾನ
ಜೋರಾಗಿ
ನಡೆಯುತ್ತಿದೆ.
ಇತ್ತೀಚೆಗಷ್ಟೇ
ವಿವೇಕ್
ಅಗ್ನಿಹೋತ್ರಿ
ನಿರ್ದೇಶನದ
'ದಿ
ಕಾಶ್ಮೀರ
ಫೈಲ್ಸ್'
ಬಿಡುಗಡೆಯಾಗಿ
ಭರ್ಜರಿ
ಯಶಸ್ಸನ್ನು
ಕಾಣುತ್ತಿದೆ.
ಇದರ
ಹಿಂದಿನ
ವಾರವಷ್ಟೇ
ಸಂಜಯ್
ಲೀಲಾ
ಬನ್ಸಾಲಿ
ನಿರ್ದೇಶನದ
'ಗಂಗೂಬಾಯಿ
ಕಾಠಿಯಾವಾಡಿ'
ಬಿಡುಗಡೆಯಾಗಿದೆ.
ಕೇವಲ
ಬಾಲಿವುಡ್
ನಲ್ಲಿ
ಮಾತ್ರವಲ್ಲ
ದಕ್ಷಿಣ
ಸಿನಿಮಾದಲ್ಲಿ
ಕೂಡ
ಅನೇಕ
ಬಯೋಪಿಕ್
ಸಿನಿಮಾ
ನಡೆಯುತ್ತಿದೆ.
ತಮಿಳಿನಲ್ಲಿ
ನಟ
ಸೂರ್ಯ
ಅಭಿನಯದಲ್ಲಿ
ಕ್ಯಾಪ್ಟನ್
ಗೋಪಿನಾಥ್
ಜೀವನಾಧಾರಿತ
'ಸೂರರೈ
ಪೋಟ್ರು',
'ಜೈ
ಭೀಮ್'
ರಿಲೀಸ್
ಆಗಿದೆ.
ತೆಲುಗಿನಲ್ಲಿ ದಿವಂಗತ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಜೀವನಾಧಾರಿತ ಕಥೆ 'ಮೇಜರ್' ಬಿಡುಗಡೆಗೆ ಸಿದ್ಧವಾಗಿದೆ. ಹೀಗೆ ಬಹುತೇಕ ಎಲ್ಲಾ ಭಾರತೀಯ ಸಿನಿಮಾ ರಂಗಗಳಲ್ಲಿ ಕೂಡ ಸತ್ಯ ಘಟನೆ ಆಧಾರಿತ ಚಿತ್ರಗಳು ಇಲ್ಲವೇ ಬಯೋಪಿಕ್ ಗಳು ಜೋರಾಗಿ ನಡೆಯುತ್ತಿದೆ. ಇದಕ್ಕೆ ಈಗ ಹೊಸ ಸೇರ್ಪಡೆ 'ಬೆಂಗಳೂರು ನಾಗರತ್ನಮ್ಮ'ನ ಕಥೆ. ಹಾಗಂತ ಇದು ಹೊಸ ಸುದ್ದಿ ಕೂಡ ಅಲ್ಲ. ಏಕೆಂದರೆ ಈ ಚಿತ್ರದ ಬಗ್ಗೆ ಕಳೆದ ಎರಡು ವರ್ಷಗಳಿಂದ ನಾವು ಕೇಳುತ್ತಲೇ ಬಂದಿದ್ದೇವೆ. ಆದರೆ ಯಾಕೋ ಈ ಚಿತ್ರ ಮಾತ್ರ ಇತ್ತ ಕನ್ನಡದಲ್ಲಿ, ಅತ್ತ ತೆಲುಗಿನಲ್ಲಿ ಎರಡು ಕಡೆ ಇಬ್ಬರು ಪ್ರಮುಖ ನಿರ್ದೇಶಕರು ಬಯೋಪಿಕ್ ಮಾಡುವ ಘೋಷಣೆ ಮಾಡಿದ್ದರು. ಇದುವರೆಗೂ ಈ ಸಿನಿಮಾ ಕಾರ್ಯರೂಪಕ್ಕೆ ಬರುತ್ತಿಲ್ಲ. ಆದರೆ ಈಗ ದಿಢೀರ್ ಆಗಿ ತೆಲುಗಿನ ಬಯೋಪಿಕ್ ಮತ್ತೆ ಸುದ್ದಿಯಾಗುತ್ತಿದ್ದು, ಶೀಘ್ರದಲ್ಲೇ ಚಿತ್ರೀಕರಣ ಆರಂಭವಾಗುವ ಸೂಚನೆಗಳನ್ನು ಚಿತ್ರತಂಡ ನೀಡುತ್ತಿದೆ.
'ರಾಧೆ ಶ್ಯಾಮ್' ಸೋಲಿನಿಂದ ಬೇಸತ್ತ ಪ್ರಭಾಸ್ ಫ್ಯಾನ್ಸ್ ಚಿತ್ತ ಈಗ 'ಕೆಜಿಎಫ್ 2'ನತ್ತ!
ಬೆಂಗಳೂರು ನಾಗರತ್ನಮ್ಮ ಯಾರು?
ಬೆಂಗಳೂರು ನಾಗರತ್ನಮ್ಮ ಈ ಹೆಸರು ಕೇಳಿದಾಗ ಅನೇಕರು 'ಯಾರು ಈ ಬೆಂಗಳೂರು ನಾಗರತ್ನಮ್ಮ?' ಅಂತ ಕೇಳುವುದು ಸಹಜ. ಅದೇ ಸಂಗೀತವನ್ನು ಅಭ್ಯಾಸ ಮಾಡುತ್ತಿರುವವರಿಗೆ ನೀವು ಬೆಂಗಳೂರು ನಾಗರತ್ನಮ್ಮ ಹೆಸರು ಕೇಳಿದ ತಕ್ಷಣ ಅವರಲ್ಲಿ ಭಕ್ತಿಭಾವ ಮೂಡುತ್ತದೆ. 3 ನವೆಂಬರ್ 1878 ರಲ್ಲಿ ಪುಟ್ಟು ಲಕ್ಷ್ಮಿ ಮತ್ತು ವಕೀಲ ಸುಬ್ಬರಾವ್ ದಂಪತಿಗಳಿಗೆ ನಂಜನಗೂಡಿನಲ್ಲಿ ಜನಿಸಿದರು. ಪುಟ್ಟು ಲಕ್ಷ್ಮಿಯವರ ಪೂರ್ವಜರು ಮೈಸೂರಿನ ಆಸ್ಥಾನದಲ್ಲಿ ಗಾಯಕರಾಗಿ ಮತ್ತು ಸಂಗೀತಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಸುಬ್ಬರಾಯರಿಂದ ಪರಿತ್ಯಕ್ತಳಾದ ಆಕೆ ಮೈಸೂರು ಮಹಾರಾಜರ ಆಸ್ಥಾನದಲ್ಲಿ ಸಂಸ್ಕೃತ ವಿದ್ವಾಂಸರಾಗಿದ್ದ ಶಾಸ್ತ್ರಿಯವರ ಬಳಿ ಆಶ್ರಯ ಪಡೆದಳು. ಅವರು ನಾಗರತ್ನಮ್ಮ ಅವರಿಗೆ ಸಂಸ್ಕೃತ ಮತ್ತು ಸಂಗೀತದಲ್ಲಿ ಶಿಕ್ಷಣ ನೀಡಿದರು ಮತ್ತು ಅವರು ಐದನೇ ವಯಸ್ಸಿನಲ್ಲಿ ದೇವದಾಸಿಯಾಗಿ ದೀಕ್ಷೆ ಪಡೆದರು. ಆದಾಗ್ಯೂ, ಶಾಸ್ತ್ರಿ ಅವರು ಅದೇ ಸಮಯದಲ್ಲಿ ಮೈಸೂರು ತೊರೆದರು. ಆನಂತರ ನಾಗರತ್ನಮ್ಮನವರು ವೃತ್ತಿಯಲ್ಲಿ ಪಿಟೀಲು ವಾದಕರಾದ ವೆಂಕಟಸ್ವಾಮಿ ಅಪ್ಪ ಅವರ ಅಡಿಯಲ್ಲಿ ರಕ್ಷಣೆ ಪಡೆದರು. ನಾಗರತ್ನಮ್ಮ ಕನ್ನಡ, ಇಂಗ್ಲಿಷ್ ಮತ್ತು ತೆಲುಗು, ಸಂಗೀತ ಮತ್ತು ನೃತ್ಯದಲ್ಲಿ ಪ್ರವೀಣರಾಗಿದ್ದರು. ತ್ಯಾಗರಾಜರು ಸ್ಥಾಪಿಸಿದ ಪ್ರಕ್ರಿಯೆಯಲ್ಲಿ 'ಶಿಷ್ಯ-ಪರಂಪರ' (ವಿದ್ಯಾರ್ಥಿ ಶಿಕ್ಷಕರ ಕಲಿಕೆಯ ಪ್ರಕ್ರಿಯೆಯ ಸಂಪ್ರದಾಯ) ದಲ್ಲಿ ಮುನುಸ್ವಾಮಪ್ಪ ಅವರಿಂದ ಕರ್ನಾಟಕ ಸಂಗೀತದಲ್ಲಿ ತರಬೇತಿ ಪಡೆದರು . ನಾಗರತ್ನಮ್ಮ 15 ನೇ ವಯಸ್ಸಿನಲ್ಲಿ ಪಿಟೀಲು ವಾದಕಿ ಮತ್ತು ನರ್ತಕಿಯಾಗಿ ಪ್ರೇಕ್ಷಕರ ಮುಂದೆ ಮೊದಲ ಬಾರಿ ವೇದಿಕೆಯಲ್ಲಿ ಕಾಣಿಸಿಕೊಂಡರು.
Hijab verdict: ಹಿಜಾಬ್ ತೀರ್ಪಿನ ಬಗ್ಗೆ ತಾರಾ ಹೇಳಿದ್ದು ಹೀಗೆ...
ನಾಗರತ್ನಮ್ಮರಿಂದ ಮುಕುಂದ ಮಾಲಾ ಸ್ತೋತ್ರ
ನಾಗರತ್ನಮ್ಮ ತಮ್ಮ ಜೀವನದ ಆರಂಭದಲ್ಲಿ ಗಾಯಕಿಯಾದರು ಮತ್ತು ಅವರ ಕಾಲದ ಅತ್ಯುತ್ತಮ ಕರ್ನಾಟಕ ಗಾಯಕರಲ್ಲಿ ಒಬ್ಬರಾಗಿ ಹೊರಹೊಮ್ಮಿದರು. ಅವರು ಕನ್ನಡ, ಸಂಸ್ಕೃತ ಮತ್ತು ತೆಲುಗಿನಲ್ಲಿ ಸುಶ್ರಾವ್ಯವಾಗಿ ಹಾಡುತ್ತಿದ್ದರು. ಆಕೆಯ ವಿಶೇಷ ಸಂಗೀತದ ಶಕ್ತಿಯು ಹರಿಕಥೆಯನ್ನು ಒಳಗೊಂಡಿತ್ತು. ಆಕೆಯ ನೃತ್ಯ ಪ್ರತಿಭೆಯು ಮೈಸೂರು ಮಹಾರಾಜರಾದ ಜಯಚಾಮರಾಜೇಂದ್ರ ಒಡೆಯರ್ ಅವರ ಗಮನ ಸೆಳೆಯಿತು, ಅವರು ಆಕೆಯ ಪ್ರತಿಭೆಯಿಂದ ಪ್ರಭಾವಿತರಾಗಿ ಮೈಸೂರಿನಲ್ಲಿ ಆಸ್ಥಾನ ವಿದುಷಿ (ಆಸ್ಥಾನದ ನರ್ತಕಿ) ಮಾಡಿದರು. ಆದರೆ ಕೆಲಕಾಲದ ನಂತರ ಅನಿವಾರ್ಯ ಕಾರಣಗಳಿಂದ ನಾಗರತ್ನಮ್ಮನವರು ಬೆಂಗಳೂರಿಗೆ ತೆರಳಿದಳು. ಅವರು ಬೆಂಗಳೂರಿನಲ್ಲಿ ಸಂಗೀತದಲ್ಲಿ ಮಾತ್ರವಲ್ಲದೆ ನೃತ್ಯದಲ್ಲಿಯೂ ಜನಪ್ರಿಯತೆಯನ್ನು ಗಳಿಸಿದರು. ಟ್ರಾವಂಕೂರು, ಬಾಬ್ಬಿಲಿ ಮತ್ತು ವಿಜಯನಗರದಂತಹ ಅನೇಕ ಇತರ ರಾಯಲ್ ಮನೆತನಗಳು ಈಕೆಗೆ ಮಹಾಪೋಷಕರಾಗಿ ಸಂಗೀತ ಸೇವೆಗೆ ಸಹಾಯ ಮಾಡಿದರು.
ಆದಾಯ ತೆರಿಗೆ ಪಾವತಿಸಿದ ಮೊದಲ ಕಲಾವಿದೆ
ಮೂಲತಃ ಮೈಸೂರಿನವರಾದ, ಹೈಕೋರ್ಟ್ನಲ್ಲಿ ನ್ಯಾಯಾಧೀಶರಾಗಿದ್ದ ನರಹರಿ ರಾವ್ ಅವರು ನಾಗರತ್ನಮ್ಮ ಅವರ ಮಹಾ ಪೋಷಕರಲ್ಲಿ ಒಬ್ಬರಾಗಿದ್ದರು. ಸಂಗೀತಗಾರ ಮತ್ತು ನೃತ್ಯಗಾರ್ತಿಯಾಗಿ ತಮ್ಮ ವೃತ್ತಿಜೀವನವನ್ನು ಮುಂದುವರಿಸಲು ಮದ್ರಾಸ್ಗೆ (ಚೆನ್ನೈ ) ತೆರಳಲು ಸೂಚಿಸಿದರು. "ಕರ್ನಾಟಿಕ್ ಸಂಗೀತದ ಹೃದಯ" ಎಂದು ಪರಿಗಣಿಸಲ್ಪಟ್ಟಿದ್ದರಿಂದ ನಾಗರತ್ನಮ್ಮನವರು ಅಲ್ಲಿಗೆ ಸ್ಥಳಾಂತರಗೊಂಡರು. ಮದ್ರಾಸ್ ನಾಗರತ್ನಮ್ಮನವರ ಸಂಗೀತಕ್ಕೆ ಮತ್ತಷ್ಟು ಮೆರಗು ತುಂಬಿತು. ಅಲ್ಲಿಗೆ ಬೆಂಗಳೂರಿನಿಂದ ಹೋದ ಕಾರಣಕ್ಕೆ ಅವರು ತಮ್ಮನ್ನು ತಾವು 'ಬೆಂಗಳೂರು ನಾಗರತ್ನಮ್ಮ' ಎಂದು ಗುರುತಿಸಿಕೊಂಡು ಆ ಹೆಸರಿನ ಮೂಲಕವೇ ಜನಪ್ರಿಯರಾದರು. ಜಸ್ಟಿಸ್ ನರಹರಿ ರಾವ್ ಅವರಿಂದ ಪಡೆದ ಪ್ರೋತ್ಸಾಹವು ಅವರನ್ನು ಮದ್ರಾಸಿನಲ್ಲಿ "ಕನ್ಸರ್ಟ್ ಆರ್ಟಿಸ್ಟ್" ಎಂದು ಪ್ರಸಿದ್ಧಗೊಳಿಸಿತು. ತ್ಯಾಗರಾಜ ಆರಾಧನಾ ಪ್ರಚಾರಕರಾಗಿ, ಅವರು ಭಾರತದ ಮದ್ರಾಸ್ನಲ್ಲಿ "ಆದಾಯ ತೆರಿಗೆ ಪಾವತಿಸಿದ ಮೊದಲ ಮಹಿಳಾ ಕಲಾವಿದೆ"
ಪುನೀತ್ ಮೊದಲ ಬಯೋಗ್ರಫಿ 'ನೀನೇ ರಾಜಕುಮಾರ' ಕೃತಿ ಬಿಡುಗಡೆ ಮಾಡಿದ ಸುದೀಪ್!
ತ್ಯಾಗರಾಜರ ಸ್ಮಾರಕ ಮತ್ತು ಆರಾಧನಾ ಸಂಪಾದನೆ
ನಾಗರತ್ನಮ್ಮ ಅವರ ಪ್ರಕಾರ, ತ್ಯಾಗರಾಜರ ಗೌರವಾರ್ಥ ಸ್ಮಾರಕವನ್ನು ನಿರ್ಮಿಸಲು ಮತ್ತು ಕರ್ನಾಟಕ ಸಂಗೀತವನ್ನು ಶಾಶ್ವತಗೊಳಿಸಲು ವೇದಿಕೆಯನ್ನು ನಿರ್ಮಿಸಲು ಆಕೆಗೆ ಕನಸಿನಲ್ಲಿ ನಿರ್ದೇಶಿಸಲಾಯಿತು. ಇದನ್ನು ಅನುಸರಿಸಿ, ಅವರು ತಪಸ್ಸಿನ ಜೀವನ ವಿಧಾನಕ್ಕೆ ತಿರುಗಿದರು ಮತ್ತು ತನ್ನ ಎಲ್ಲಾ ಗಳಿಕೆಯನ್ನು ಈ ಉದ್ದೇಶಕ್ಕಾಗಿ ದಾನ ಮಾಡಿದರು. ಮದರಾಸಿನಲ್ಲಿದ್ದಾಗ, ನಾಗರತ್ನಮ್ಮ ಅವರ ಗುರುಗಳಾದ ಬಿಡಾರಂ ಕೃಷ್ಣಪ್ಪರಿಂದ ಸಂತ ತ್ಯಾಗರಾಜರ ಸಮಾಧಿಯ ಶಿಥಿಲ ಸ್ಥಿತಿಯ ಕುರಿತು ತಿಳಿದುಕೊಂಡರು.
ತ್ಯಾಗರಾಜರಿಗೆ ದೇವಸ್ಥಾನ ಕಟ್ಟಿಸಿದರು
ಬಿಡಾರಂ ಕೃಷ್ಣಪ್ಪನವರ ಶಿಷ್ಯರಾದ ಕೃಷ್ಣ ಭಾಗವತರು ಮತ್ತು ಸುಂದರ ಭಾಗವತರು 1903 ರಲ್ಲಿ ಅಮೃತಶಿಲೆಯಿಂದ ಮಾಡಿದ ಸಣ್ಣ ಸೌಧವನ್ನು ನಿರ್ಮಿಸಿದ್ದರು. ನಂತರ ತ್ಯಾಗರಾಜರ ಗೌರವಾರ್ಥ ವಾರ್ಷಿಕ ಸಂಗೀತ ಉತ್ಸವಗಳನ್ನು ನಡೆಸುತ್ತಿದ್ದರು. ಕೆಲವೇ ವರ್ಷಗಳಲ್ಲಿ, ಸಂತರನ್ನು ಗೌರವಿಸಲು ಆಸಕ್ತಿ ಹೊಂದಿರುವ ಜನರ ನಡುವೆ ವೈಷಮ್ಯ ಸ್ಫೋಟಗೊಂಡಿತು ಮತ್ತು ಸಂತರ ಸಮಾಧಿಯಲ್ಲಿ ಎರಡು ಪ್ರತಿಸ್ಪರ್ಧಿ ಸಂಗೀತ ಕಚೇರಿಗಳನ್ನು ನಡೆಸುತ್ತಿದ್ದವು. ಚಿಕ್ಕ ಕಟ್ಟಡದ ನಿರ್ವಹಣೆಯು ಹಾನಿಗೊಳಗಾಗಿತ್ತು ಮತ್ತು ಅದು ಶೀಘ್ರವಾಗಿ ಶಿಥಿಲಗೊಂಡಿತು. ಇದು ನಾಗರತ್ನಮ್ಮ ಅವರು ಸಮಾಧಿಯನ್ನು ಪುನಃಸ್ಥಾಪಿಸಲು ಮತ್ತು ತ್ಯಾಗರಾಜರ ಗೌರವಾರ್ಥ ಸ್ಮಾರಕವಾಗಿ ಪರಿವರ್ತಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಪ್ರೇರೇಪಿಸಿತು. ಅವರು ತ್ಯಾಗರಾಜರ ಸಮಾಧಿ ನೆಲೆಗೊಂಡಿದ್ದ ಭೂಮಿಯನ್ನು ಸ್ವಾಧೀನಪಡಿಸಿಕೊಂಡರು ಮತ್ತು ತನ್ನ ಸ್ವಂತ ಆರ್ಥಿಕ ಸಂಪನ್ಮೂಲದಿಂದ ಅವರ ಗೌರವಾರ್ಥವಾಗಿ ದೇವಾಲಯವನ್ನು ಸಾಕಾರಗೊಳಿಸುವ ದೊಡ್ಡ ಸೌಧವನ್ನು ನಿರ್ಮಿಸಿದರು. ಅವರು ಶ್ರೀ ತ್ಯಾಗರಾಜರ ವಿಗ್ರಹವನ್ನು ಸ್ಥಾಪಿಸಲು ಮತ್ತು ಬ್ರಾಹ್ಮಣ ಪುರೋಹಿತರಿಂದ ಪ್ರತಿಷ್ಠಾಪಿಸಲು ಮತ್ತು ಪ್ರತಿದಿನ ಪ್ರಾರ್ಥನೆಗಳನ್ನು ಸಲ್ಲಿಸಲು ವ್ಯವಸ್ಥೆ ಮಾಡಿದರು. ಹೀಗೆ ನಿರ್ಮಿಸಲಾದ ತ್ಯಾಗರಾಜ ದೇವಾಲಯವನ್ನು 1921 ರಲ್ಲಿ ಪವಿತ್ರಗೊಳಿಸಲಾಯಿತು.
ಸಂಗೀತ ಕಚೇರಿಗಳ ವಿರುದ್ಧ ತಿರುಗಿಬಿದ್ದರು
ಆ ಸಮಯದಲ್ಲಿ, ಈ ಸ್ಥಳದಲ್ಲಿ ನಡೆಯುತ್ತಿದ್ದ ಸಂಗೀತೋತ್ಸವವು ಪುರುಷ ಪ್ರಧಾನವಾಗಿತ್ತು. ಆ ದಿನಗಳಲ್ಲಿ, ಸಭ್ಯ ಮಹಿಳೆ ಎಂದಿಗೂ ಹಾಡುವುದಿಲ್ಲ ಅಥವಾ ಕುಣಿಯುವುದಿಲ್ಲ, ಮತ್ತು ಈ ಕೌಶಲ್ಯಗಳು ಕಟ್ಟುನಿಟ್ಟಾಗಿ ಸೌಜನ್ಯ ಮತ್ತು ದೇವದಾಸಿಯರ ಎರಡು ಪ್ರಕಾರಗಳ ಸಂರಕ್ಷಣೆಯಾಗಿತ್ತು. ಆ ಸಮಯದಲ್ಲಿ ದಕ್ಷಿಣ ಭಾರತದಲ್ಲಿ ಕಂಡುಬರುವ ದೈವಿಕ ಕಲಾವಿದರು. ದೇಗುಲದ ವಾರ್ಷಿಕ ಕಾರ್ಯಕ್ರಮಗಳಲ್ಲಿ ಒಬ್ಬರು ಅಥವಾ ಹೆಚ್ಚಿನ ಕಲಾವಿದರು ಹಾಡುವ ಮತ್ತು ಭಾಗವಹಿಸುವ ಕಲ್ಪನೆಯು ಸಮಾಜಕ್ಕೆ ಅಸ್ಪೃಶ್ಯವಾಗಿದೆ. ಆದ್ದರಿಂದ ಪ್ರತಿಸ್ಪರ್ಧಿ ಕಲಾವಿದರು ನಾಗರತ್ನಮ್ಮ ಅವರನ್ನು ಉತ್ಸವದಲ್ಲಿ ಭಾಗವಹಿಸದಂತೆ ತಡೆದರು, ತ್ಯಾಗರಾಜರ ಸಮಾಧಿಯ ಪುನರುಜ್ಜೀವನಗೊಳಿಸಿದರು ಕೂಡ ನಾಗರತ್ನಮ್ಮನವರಿಗೆ ಅಲ್ಲಿ ಹಾಡುವುದಕ್ಕೆ ಅವಕಾಶವನ್ನು ಕೊಡಲಿಲ್ಲ. ಅವರನ್ನು ದೇವದಾಸಿ ಹಿನ್ನಲೆಯಲ್ಲಿ ಅವರೆಲ್ಲಾ ದೇವದಾಸಿ ಮಹಿಳೆಗೆ ಹಾಡುವುದಕ್ಕೆ ಅವಕಾಶ ನೀಡುವುದಿಲ್ಲ ಅಂತ ಅವರು ಪಟ್ಟು ಹಿಡಿದರು. ಇದನ್ನು ಸವಾಲಾಗಿ ಸ್ವೀಕರಿಸಿದ ಅವರು ಸಂತರ ದೇವಸ್ಥಾನದ ಹಿಂಭಾಗದಲ್ಲಿ ಸಮಾನಾಂತರ ಸಂಗೀತ ಉತ್ಸವವನ್ನು ಆಯೋಜಿಸಲು ಪ್ರಾರಂಭಿಸಿದಳು. ಅವರ ಗುಂಪಿಗೆ "ಪೆಂಗಲ್ ಕಚ್ಚಿ" (ಮಹಿಳೆಯರ ಗುಂಪು) ಎಂದು ಹೆಸರಿಸಲಾಯಿತು. ಹಾಗೇ ಅವರು ಆಯೋಜಿಸಿದ ಆರಾಧನೆಯು "ಪೆರಿಯಾ ಕಚ್ಚಿ" ಅಥವಾ "ಪ್ರಮುಖ ಗುಂಪು" ಎಂದು ಕರೆಯಲ್ಪಡುವ ಸಂಗೀತ ಉತ್ಸವದ ಪುರುಷ ಕೇಂದ್ರಿತ ಗುಂಪುಗಳು ಆಯೋಜಿಸಿದ ಏಕಕಾಲದಲ್ಲಿ ನಡೆಯಿತು. ಅಂತಿಮವಾಗಿ, 1941 ರಲ್ಲಿ, ಆಕೆಯ ಕ್ರಿಯಾಶೀಲತೆಯು ಫಲ ನೀಡಿತು, ಮತ್ತು ಉತ್ಸವದಲ್ಲಿ ತೊಡಗಿಸಿಕೊಂಡಿದ್ದ ಎದುರಾಳಿ ಗುಂಪುಗಳು ಒಂದೇ ಘಟಕವಾಗಿ ವಿಲೀನಗೊಂಡವು. ಉತ್ಸವದಲ್ಲಿ ಪುರುಷರು ಮತ್ತು ಮಹಿಳೆಯರು ಇಬ್ಬರೂ ಹಾಡಲು ಅವಕಾಶ ಮಾಡಿಕೊಟ್ಟರು.
ಮದ್ರಾಸ್ ಪ್ರೆಸಿಡೆನ್ಸಿಯ ದೇವದಾಸಿಯರ ಸಂಘ
ಈ ಸಂಗೀತ ಉತ್ಸವವು ದಕ್ಷಿಣ ಭಾರತದಲ್ಲಿನ ಅತ್ಯಂತ ಜನಪ್ರಿಯ ಸಂಗೀತ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಪುರುಷ ಸಂಗೀತಗಾರರ ಜೊತೆಗೆ "ತ್ಯಾಗರಾಜ ಆರಾಧನೆ" ಎಂದು ಜನಪ್ರಿಯವಾಗಿ ಕರೆಯಲ್ಪಡುವ ವಾರ್ಷಿಕ ಉತ್ಸವದಲ್ಲಿ ಮಹಿಳಾ ಸಂಗೀತಗಾರರ ಭಾಗವಹಿಸುವಿಕೆಯ ಈ ಸಂಪ್ರದಾಯವು ಅಲ್ಲಿಂದ ಮುಂದುವರಿಯಿತು. 1927 ರಲ್ಲಿ, ನಾಗರತ್ನಮ್ಮ ಮತ್ತು ಇತರ ದೇವದಾಸಿಯರು ಮದ್ರಾಸ್ ಪ್ರೆಸಿಡೆನ್ಸಿಯ ದೇವದಾಸಿಯರ ಸಂಘವನ್ನು ಸ್ಥಾಪಿಸಿದರು. ಅವರು ಅದರ ಮೊದಲ ಅಧ್ಯಕ್ಷರಾಗಿ ಆಯ್ಕೆಯಾದರು.ನಾಗರತ್ನಮ್ಮ 1952 ರಲ್ಲಿ ತಮ್ಮ 74 ನೇ ವಯಸ್ಸಿನಲ್ಲಿ ನಿಧನರಾದರು. ತ್ಯಾಗರಾಜರ ಸಮಾಧಿಯ ಪಕ್ಕದಲ್ಲಿ ಆಕೆಯ ಗೌರವಾರ್ಥವಾಗಿ ಒಂದು ಸ್ಮಾರಕವನ್ನು ನಿರ್ಮಿಸಲಾಯಿತು. ಇಂದಿಗೂ ಕೂಡ ತ್ಯಾಗರಾಜರ ಜೊತೆಗೆ ನಾಗರತ್ನಮ್ಮನವರಿಗೆ ಕೂಡ ವಿಶೇಷವಾದ ಪೂಜೆಗಳು ಅಲ್ಲಿ ನಡೆಯುತ್ತದೆ.
ಬೆಂಗಳೂರು ನಾಗರತ್ನಮ್ಮ ಸಿನಿಮಾ ಮಾಡ್ಬೇಕಿತ್ತು ನಾಗಾಭರಣ
19ನೇ ಶತಮಾನದಲ್ಲಿಇತಿಹಾಸ ಸೃಷ್ಟಿಸಿದ ಹಾಡುಗಾರ್ತಿ, ಸಾಂಸ್ಕೃತಿಕ ಹೋರಾಟಗಾರ್ತಿ, ವಿದುಷಿ ಬೆಂಗಳೂರು ನಾಗರತ್ನಮ್ಮ ಅವರ ಜೀವನಾಧಾರಿತ ಚಿತ್ರ ತೆರೆಗೆ ಬರಲಿದ್ದು, ಚಿತ್ರೀಕರಣಕ್ಕೆ ಅವಕಾಶ ಸಿಕ್ಕ ನಂತರ ಸೆಟ್ಟೇರಲಿದೆ ಅಂತ ಎರಡು ವರ್ಷಗಳ ಹಿಂದೆಯೇ ಖ್ಯಾತ ನಿರ್ದೇಶಕ ಟಿ ಎಸ್ ನಾಗಾಭರಣ ಅವರು ಹೇಳಿದ್ದರು. 1878ರಲ್ಲಿ ಜನಿಸಿದ 'ಬೆಂಗಳೂರು ನಾಗರತ್ನಮ್ಮ' ಅವರ ಜೀವನಾಧಾರಿತ ಸಿನಿಮಾ ಮಾಡಲಿರುವುದಾಗಿ ಹೇಳಿದ್ದ ನಿರ್ದೇಶಕ ಟಿ.ಎಸ್. ನಾಗಾಭರಣ, ಲಾಕ್ಡೌನ್ ಸಮಯದಲ್ಲಿ ಚಿತ್ರದ ಸ್ಕ್ರಿಪ್ಟ್ ಸಿದ್ಧಪಡಿಸಿ ಚಿತ್ರದ ಪೂರ್ವ ತಯಾರಿ ಮಾಡುತ್ತಿದ್ದಾರೆ. 'ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿದೊಡ್ಡ ಹೆಸರು ಮಾಡಿದ್ದ ನಾಗರತ್ನಮ್ಮ ಅವರ ಸಿನಿಮಾದಲ್ಲಿ ಹಾಡುಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದು, ಇದಕ್ಕಾಗಿ ಸಂಗೀತ ಸಂಯೋಜನೆ ಕೆಲಸಕ್ಕೆ ಅನೇಕ ತಿಂಗಳು ಬೇಕಾಗಬಹುದು' ಎಂದಿದ್ದರು ನಾಗಾಭರಣ. ಆದರೆ ಪ್ರಸ್ತುತ ಬಯೋಪಿಕ್ ಕಾರ್ಯಯೋಜನೆ ಎಲ್ಲಿಯವರೆಗೆ ಬಂದಿದೆ ಎಂಬುದು ಇನ್ನೂ ತಿಳಿದಿಲ್ಲ.
ಮತ್ತೆ ಬೆಂಗಳೂರು ನಾಗರತ್ನಮ್ಮ ಬಯೋಪಿಕ್ ಸದ್ದು
ಇತ್ತ ಕನ್ನಡದಲ್ಲಿ ಟಿ ಎಸ್ ನಾಗಾಭರಣ ಅವರು ಬೆಂಗಳೂರು ನಾಗರತ್ನಮ್ಮನವರ ಜೀವನಾಧಾರಿತ ಚಿತ್ರದ ತಯಾರಿಯ ಬಗ್ಗೆ ಮಾತನಾಡುತ್ತಿದ್ದ ಸಂದರ್ಭದಲ್ಲೇ ನಿರ್ದೇಶಕ ಸಿಂಗೀತಂ ಶ್ರೀನಿವಾಸ್ ರಾವ್ ಅವರು ಕೂಡ ತೆಲುಗಿನಲ್ಲಿ 'ಬೆಂಗಳೂರು ನಾಗರತ್ನಮ್ಮ' ಬಯೋಪಿಕ್ ಮಾಡಲಿದ್ದಾರೆ ಎಂಬ ಸುದ್ದಿ ಹರಡಿತ್ತು. ಬಹುಭಾಷೆಗಳಲ್ಲಿ ಚಿತ್ರ ನಿರ್ದೇಶನ ಮಾಡಿರುವ ಸಿಂಗೀತಂ ಈ ಚಿತ್ರವನ್ನೂ ಹಲವು ಭಾಷೆಯಲ್ಲಿ ನಿರ್ದೇಶನ ಮಾಡಲು ಯೋಚಿಸಿದ್ದಾರೆ ಎನ್ನಲಾಗಿತ್ತು. ನಾಗರತ್ನಮ್ಮ ಪಾತ್ರದಲ್ಲಿ ಸಮಂತಾ ನಟಿಸಲಿರುವ ಸಾಧ್ಯತೆಗಳ ಬಗ್ಗೆಯೂ ಸುದ್ದಿ ಬಂದಿತ್ತು. ಸ್ಕ್ರಿಪ್ಟ್ ಕೇಳಿದ್ದ ಸಮಂತಾ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದರು ಅಂತ ಸುದ್ದಿಯಾಯಿತು. ಅದೇ ಸಮಯದಲ್ಲಿ ಅನುಷ್ಕಾ ಶೆಟ್ಟಿ ಅವರು ಬೆಂಗಳೂರು ನಾಗರತ್ನಮ್ಮನವರ ಪಾತ್ರ ಮಾಡುತ್ತಾರೆ ಅಂತ ಕೂಡ ಹೇಳಲಾಗುತ್ತಿತ್ತು. ಮಹಿಳಾ ಜೀವನ ಸಂಘರ್ಷ ದೇವದಾಸಿ ಪದ್ಧತಿ ಸೇರಿದಂತೆ ಅನೇಕ ವಿಚಾರಗಳ ಜೊತೆಗೆ ಕರ್ನಾಟಕ ಸಂಗೀತದ ಭಾವ ಪ್ರಾಧಾನ್ಯತೆ ಕೂಡ ಇದರಲ್ಲಿ ಅಡಗಿದೆ. ಸದ್ಯಕ್ಕೆ ಈ ಇಬ್ಬರು ನಟಿಯರಿಂದ ಕೂಡ ಯಾವುದೇ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ ಅಂತ ಹೇಳಲಾಗುತ್ತಿದೆ. ಚಿತ್ರದ ಸ್ಕ್ರಿಪ್ಟ್ ವರ್ಕ್ ಈಗಾಗಲೇ ಪೂರ್ಣಗೊಂಡಿದ್ದು ಖ್ಯಾತ ಸಂಭಾಷಣೆಗಾರ ಸಾಯಿ ಮಾಧವ್ ಬುರ್ರ ಈಗಾಗಲೇ ಚಿತ್ರಕ್ಕೆ ಸಂಭಾಷಣೆ ಕೂಡ ಸಿದ್ಧಪಡಿಸಿದ್ದಾರೆ ಅಂತ ಹೇಳಲಾಗುತ್ತಿದೆ. ಅನುಷ್ಕಾ ಶೆಟ್ಟಿ ಈ ಚಿತ್ರದಲ್ಲಿ ನಟಿಸುವುದು ಖಚಿತ ಅಂತ ಈಗ ಸುದ್ದಿ ಹರಡುತ್ತಿದೆ. ಆದರೆ ಈಗ 'ಬೆಂಗಳೂರು ನಾಗರತ್ನಮ್ಮ' ತೆಲುಗಿನ 'ಬೆಂಗಳೂರು ನಾಗರತ್ನಮ್ಮ' ಯಾವುದು ಮೊದಲು ಸೆಟ್ಟೇರುತ್ತೆ ಎಂಬ ಕುತೂಹಲವಿದೆ.