Don't Miss!
- Finance ಸಾಂಬಾರು ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿ, ಇಂದು 276ಕ್ಕೂ ಹೆಚ್ಚು ಚಿನ್ನಾಭರಣ ಮಳಿಗೆಗಳ ಒಡೆಯ!
- Lifestyle ಹಸುವಿನ ಹಾಲಿನಿಂದ ಇಡೀ ವಿಶ್ವಕ್ಕೆ ಇನ್ಸುಲಿನ್..! ಹೊಸ ಅಧ್ಯಯನದಲ್ಲಿ ಬಹಿರಂಗ.!
- News ಜೆಡಿಎಸ್ ಭದ್ರಕೋಟೆ ಹಾಸನ ಲೋಕಸಭಾ ಕ್ಷೇತ್ರ ಪರಿಚಯ
- Sports ಆರ್ಸಿಬಿ ಸ್ಟಾರ್ ಶ್ರೇಯಾಂಕಾ ಪಾಟೀಲ್ ಬಗ್ಗೆ ನಿಮಗೆಷ್ಟು ಗೊತ್ತು?; ಶಿಕ್ಷಣ, ವಯಸ್ಸು, ಕೌಟುಂಬಿಕ ಹಿನ್ನೆಲೆ ಬಗ್ಗೆ ಮಾಹಿತಿ
- Automobiles 28 ಲಕ್ಷದ ಬೈಕನ್ನು ಲೀಲಾಜಾಲವಾಗಿ ಓಡಿಸಿದ ಲೇಡಿ ಸೂಪರ್ಸ್ಟಾರ್: ಇಂತಹ ಗರ್ಲ್ಫ್ರೆಂಡ್ ಬೇಕೆಂದ ನೆಟ್ಟಿಗರು!
- Technology Samsung: ಸ್ಯಾಮ್ಸಂಗ್ನ ಮುಂಬರುವ ಫೋಲ್ಡಬಲ್ ಫೋನ್ ನೀವು ಊಹಿಸಲಾಗದ ಅಗ್ಗದ ಬೆಲೆಗೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಬೇಡರ ಕಣ್ಣಪ್ಪ' ಚಿತ್ರಕ್ಕಾಗಿ ಆಡಿಷನ್ ಕೊಟ್ಟು 15 ದಿನ ಕಾದಿದ್ದರಂತೆ ಡಾ ರಾಜ್
ವರನಟ ರಾಜ್ ಕುಮಾರ್ ಅಭಿನಯಿಸಿದ ಚೊಚ್ಚಲ ಸಿನಿಮಾ 'ಬೇಡರ ಕಣ್ಣಪ್ಪ'. ಈ ಚಿತ್ರದಲ್ಲಿ ನಟಿಸುವುದಕ್ಕೂ ಮುಂಚೆ 'ಗುಬ್ಬಿ ವೀರಣ' ನಾಟಕ ಸಂಸ್ಥೆಯಲ್ಲಿ ಕೆಲಸ ಮಾಡ್ತಿದ್ದರು. ಎಚ್ ಎಲ್ ಎನ್ ಸಿಂಹ 'ಬೇಡರ ಕಣ್ಣಪ್ಪ' ಸಿನಿಮಾ ಮಾಡಬೇಕು ಎಂದು ಕಲಾವಿದನನ್ನು ಹುಡುಕುತ್ತಿದ್ದರು. ನಂತರ ಗುಬ್ಬಿ ವೀರಣ್ಣರ ನಾಟಕಗಳಲ್ಲಿ ಗಮನ ಸೆಳೆದಿದ್ದ ರಾಜ್ ಕುಮಾರ್ರನ್ನು ನೋಡಿ ಈ ಹುಡುಗ ಬೇಡರ ಕಣ್ಣಪ್ಪ ಚಿತ್ರಕ್ಕೆ ಸೂಕ್ತವಾಗಬಹುದು ಎಂದು ನಿರ್ಧರಿಸಿದರು.
ನಿರ್ದೇಶಕ ಸಿಂಹ, ನಿರ್ಮಾಪಕರು ಸೇರಿ ರಾಜ್ ಕುಮಾರ್ ಅವರನ್ನು ಆಡಿಷನ್ ಸಹ ಮಾಡಿದ್ದರು ಎಂಬ ವಿಚಾರವನ್ನು ಖುದ್ದು ಅಣ್ಣಾವ್ರು ಡಿಡಿ ಚಂದನ ವಾಹಿನಿಯಲ್ಲಿ ನೀಡಿದ್ದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಬೇಡರ ಕಣ್ಣಪ್ಪ ಚಿತ್ರಕ್ಕಾಗಿ ಆಡಿಷನ್ ಕೊಟ್ಟ 15 ದಿನಗಳವರೆಗೂ ಯಾವುದೇ ಉತ್ತರ ಸಿಗದೆ ಕಾದು ಕುಳಿತಿದ್ದರು ಎಂಬ ಆಸಕ್ತಿಕರ ವಿಚಾರವನ್ನು ಬಹಿರಂಗಪಡಿಸಿದ್ದರು. 'ಬೇಡರ ಕಣ್ಣಪ್ಪ' ಚಿತ್ರದ ಬಗ್ಗೆ ಅಣ್ಣಾವ್ರು ಹೇಳಿದ್ದೇನು? ಮುಂದೆ ಓದಿ...
ಆಡಿಷನ್ ಮಾಡಿಸಿದ್ದರು
ಬೇಡರ ಕಣ್ಣಪ್ಪ ಚಿತ್ರಕ್ಕಾಗಿ ಹುಡುಕುತ್ತಿದ್ದ ಸಂದರ್ಭದಲ್ಲಿ ನನ್ನನ್ನು ಕರೆಸಿದರು. ಆಡಿಷನ್ ಮಾಡೋಣ ಅಂತ ಹೇಳಿ ಮುಖಕ್ಕೆ ಬಣ್ಣ ಹಾಕಿಸಿ ಪರೀಕ್ಷಿಸಿದರು. ಕ್ಯಾಮೆರಾ ಮುಂದೆ ನವರಸಗಳನ್ನು ನಟಿಸು ತೋರಿಸು ಎಂದು ಹೇಳಿದರು. ನಾಟಕಗಳಲ್ಲಿ ಸ್ವತಂತ್ರವಾಗಿ ವೇದಿಕೆಯಲ್ಲಿ ನಟಿಸಬಹುದು. ಆದರೆ, ಸಿನಿಮಾದಲ್ಲಿ ನಿರ್ದಿಷ್ಟವಾದ ಜಾಗದಲ್ಲಿ ನಿಂತು ಸೀಮಿತವಾಗಿ ನಟಿಸಬೇಕಿತ್ತು. ನಾನು ನಟಿಸಿ ತೋರಿಸಿದೆ. 8 ದಿನ ಬಿಟ್ಟು ಹೇಳ್ತೀನಿ, ನೀವು ಹೋಗಿ ಎಂದು ಕಳುಹಿಸಿದರು ಎಂಬ ವಿಷಯವನ್ನು ಅಣ್ಣಾವ್ರು ಸಂದರ್ಶನದಲ್ಲಿ ತಿಳಿಸಿದರು.
ಕನ್ನಡ ಚಿತ್ರರಂಗಕ್ಕೆ ಇಂದು ಬಹಳ ವಿಶೇಷ ದಿನ: ಯಾಕೆ ಗೊತ್ತೇ?
15 ದಿನ ಆದರೂ ಪ್ರತಿಕ್ರಿಯೆ ಬರಲಿಲ್ಲ
ಆಡಿಷನ್ ಕೊಟ್ಟು ಬಂದ ಮೇಲೆ 8 ದಿನ ಆದರೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಆಮೇಲೆ 15 ಆದ್ಮೇಲೆ ಒಂದು ಪತ್ರ ಬಂತು. ನಿಮ್ಮ ಆಡಿಷನ್ ವಿಡಿಯೋ ನೋಡಿದ್ಮೇಲೆ ನಮ್ಮ ನಿರ್ದೇಶಕರು, ನಿರ್ಮಾಪಕರು ಇಷ್ಟ ಪಟ್ಟಿದ್ದು, ನೀವು ಬೇಡರ ಕಣ್ಣಪ್ಪ ಚಿತ್ರಕ್ಕೆ ಆಯ್ಕೆಯಾಗಿದ್ದಾರೆ ಅಂತ ಬರೆಯಲಾಗಿತ್ತು ಎಂದು ಅಣ್ಣಾವ್ರು ತಿಳಿಸಿದರು.
1954ರಲ್ಲಿ ತೆರೆಕಂಡ ಚಿತ್ರ
ನಾಟಕಗಳಲ್ಲಿ ನಟಿಸುತ್ತಿದ್ದ ರಾಜ್ ಕುಮಾರ್ ಅಧಿಕೃತವಾಗಿ ಸಿನಿಮಾಗಳಲ್ಲಿ ಪಯಣ ಅರಂಭಿಸಿದರು. ಅದಕ್ಕೂ ಮುಂಚೆ 1942ರಲ್ಲಿ ಭಕ್ತ ಪ್ರಹ್ಲಾದ ಚಿತ್ರದಲ್ಲಿ ಸಣ್ಣದೊಂದು ಪಾತ್ರ ನಿರ್ವಹಿಸಿದ್ದರು ಎಂದು ವರದಿಯಾಗಿದೆ. ಆದರೆ, ನಾಯಕನಟನಾಗಿ ಬೇಡರ ಕಣ್ಣಪ್ಪ ಚೊಚ್ಚಲ ಸಿನಿಮಾ. 1954ರ ಮೇ 7 ರಂದು ಈ ಚಿತ್ರ ರಿಲೀಸ್ ಆಗಿತ್ತು.
3 ವರ್ಷ ನಟಿಸಿಲ್ಲ, ಅಣ್ಣಾವ್ರ ಮನೆ ಮುಂದೆ ನಡೆದಿತ್ತು ಅಭಿಮಾನದ ಪ್ರತಿಭಟನೆ
Recommended Video
ರಾಷ್ಟ್ರ ಪ್ರಶಸ್ತಿ ಲಭಿಸಿದೆ
ಬೇಡರ ಕಣ್ಣಪ್ಪ ಚಿತ್ರಕ್ಕೆ 1954ರಲ್ಲಿ ರಾಷ್ಟ್ರ ಪ್ರಶಸ್ತಿ ಲಭಿಸಿದೆ. 2ನೇ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಪಡೆದುಕೊಂಡಿದೆ. ನಂತರ ಈ ಚಿತ್ರ ಬೇರೆ ಭಾಷೆಗಳಲ್ಲಿಯೂ ಡಬ್ ಆಗಿದೆ. ರಾಜ್ ಜೊತೆ ಪಂಡಿರಿಬಾಯಿ, ನರಸಿಂಹರಾಜು, ರಾಜಾ ಸುಲೋಚನಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.