Don't Miss!
- Finance mukesh ambaniಗೆ 67 ವರ್ಷ, ಅವರು ಹೊಂದಿರುವ ದುಬಾರಿ ವಸ್ತುಗಳು ಏನೇನು ಗೊತ್ತಾ?
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಯಾರೆ ನೀನು ಚೆಲುವೆ' ಸಿನಿಮಾಕ್ಕೆ ಮೊದಲ ಆಯ್ಕೆ ರವಿಚಂದ್ರನ್ ಅಲ್ಲ, ಈ ನಟ
ಯಾರೆ ನೀನು ಚೆಲುವೆ ಕನ್ನಡ ಕ್ಲಾಸಿಕ್ಗಳಲ್ಲಿ ಒಂದು, ಇದೊಂದು ರೀಮೇಕ್ ಸಿನಿಮಾ ಆಗಿದ್ದರೂ ಸಹ ಕನ್ನಡಕ್ಕೆ ಅತ್ಯುತ್ತಮವಾಗಿ ತಂದರು ನಿರ್ದೇಶಕ ಡಿ.ರಾಜೇಂದ್ರ ಬಾಬು. ಸಿನಿಮಾಕ್ಕೆ ತನ್ನದೇ ಆದ ಸ್ವಂತಿಕೆ ಬರುವಂತೆ ಮಾಡಿದ್ದು ಹಂಸಲೇಖ ಹಾಡುಗಳು.
Recommended Video
ಸಿನಿಮಾದ ನಾಯಕ ರವಿಚಂದ್ರನ್ ಜೀವನದಲ್ಲಿ ಸಹ ಈ ಸಿನಿಮಾ ಒಂದು ಅದ್ಭುತ ತಿರುವು. ಸೋಲುಗಳನ್ನು ಕಂಡು ನಿರಾಸೆಯಲ್ಲಿದ್ದ ರವಿಚಂದ್ರನ್ಗೆ ಈ ಸಿನಿಮಾ ದೊಡ್ಡ ಗೆಲುವು ತಂದುಕೊಟ್ಟಿತು.
ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ 'ಜಟ್ಟ' ಗಿರಿರಾಜ್ ಸಿನಿಮಾ
ಮತ್ತೆ-ಮತ್ತೆ ನೋಡಿಸಿಕೊಳ್ಳುವ ಗುಣ ಹೊಂದಿರುವ ಈ ಸಿನಿಮಾದ ನಾಯಕ ಪಾತ್ರಕ್ಕೆ ರವಿಚಂದ್ರನ್ ಮೊದಲ ಆಯ್ಕೆ ಆಗಿರಲಿಲ್ಲ. ಬೇರೊಬ್ಬ ನಾಯಕನೊಂದಿಗೆ ಚಿತ್ರೀಕರಣ ಸಹ ಪ್ರಾರಂಭವಾಗಿಬಿಟ್ಟಿತ್ತು, ಆ ನಂತರ ರವಿಚಂದ್ರನ್ ಕೈಗೆ ಆಕಸ್ಮಿಕವಾಗಿ ಈ ಸಿನಿಮಾ ಹೋಯಿತು.
ರವಿಚಂದ್ರನ್ ಸಹೋದರ ನಟಿಸಬೇಕಿದ್ದ ಸಿನಿಮಾ
ಹೌದು, ಯಾರೆ ನೀನು ಚೆಲುವೆ ಸಿನಿಮಾದ ನಾಯಕನಾಗಿ ಅಭಿನಯಿಸುತ್ತಿದ್ದು, ರವಿಚಂದ್ರನ್ ಅಲ್ಲ ಬದಲಿಗೆ ಅವರ ಸಹೋದರ ಬಾಲಾಜಿ ಅಲಿಯಾಸ್ ಈಶ್ವರ್. ಬಾಲಾಜಿ ನಾಯಕರಾಗಿ ಸಿನಿಮಾದ ಚಿತ್ರೀಕರಣ ಸಹ ಪ್ರಾರಂಭವಾಗಿಬಿಟ್ಟಿತ್ತು, ಆದರೆ ಬಾಲಾಜಿ ಅದೃಷ್ಟ ಕೈಕೊಟ್ಟು ಸಿನಿಮಾ ನಿಂತುಹೋಯಿತು.
ಸಿನಿಮಾಕ್ಕಾಗಿ ಸ್ಟಿಲ್ಸ್ ಸಹ ತೆಗೆಯಲಾಗಿತ್ತು
ತಮಿಳಿನ ಸೂಪರ್ ಹಿಟ್ 'ಕಾದಲ್ ಕೋಟ್ಟೈ' ಸಿನಿಮಾವನ್ನು ಕನ್ನಡದಲ್ಲಿ ನಿರ್ಮಾಪಕ ಕೆಸಿಎನ್ ಪ್ರಾರಂಭಿಸಿದ್ದರು. ನಿರ್ದೇಶನ ಮಾಡುತ್ತಿದ್ದಿದ್ದು ಮೋಹನ್ ಬಾಬು. ಆಗ ಹೊಸ ನಟ ಬಾಲಾಜಿ ಹಾಗೂ ಸಿಮ್ರನ್ ಎಂಬ ಹೊಸ ನಟಿಯನ್ನು ಹಾಕಿಕೊಂಡು ಸಿನಿಮಾದ ಚಿತ್ರೀಕರಣವನ್ನು ಒಂದು ವಾರ ನಡೆಸಲಾಗಿತ್ತು. ಸಿನಿಮಾದ ಸ್ಟಿಲ್ಸ್ ಸಹ ತೆಗೆಯಲಾಗಿತ್ತು. ನಂತರ ಅಚಾನಕ್ಕಾಗಿ ಸಿನಿಮಾ ನಿಂತುಹೋಯಿತು.
ಕ್ರೇಜಿ ಸ್ಟಾರ್ ರವಿಚಂದ್ರನ್ ಹೆಸರಲ್ಲಿ ನಕಲಿ ಟ್ವಿಟ್ಟರ್ ಅಕೌಂಟ್
ಪಾತ್ರವರ್ಗ, ನಿರ್ದೇಶಕರನ್ನು ಬದಲಾಯಿಸಿದ ರಾಕ್ಲೈನ್
ನಂತರ ಸಿನಿಮಾವನ್ನು ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಕೈಗೆತ್ತಿಕೊಂಡರು. ಆದರೆ ಪಾತ್ರವರ್ಗ ಸೇರಿ ಎಲ್ಲದರಲ್ಲೂ ಬದಲಾವಣೆ ಮಾಡಿದ ಅವರು, ಬಾಲಾಜಿ ಸ್ಥಾನಕ್ಕೆ ರವಿಚಂದ್ರನ್ ಅವರನ್ನು ತಂದರು. ನಿರ್ದೇಶಕರನ್ನು ಬದಲಾಯಿಸಿ ರಾಜೇಂದ್ರ ಬಾಬು ಅವರಿಗೆ ಹೊಣೆ ನೀಡಿದರು. ನಾಯಕಿಯನ್ನಾಗಿ ಹೊಸ ಮುಖ ಸಂಗೀತ ಅನ್ನು ಪರಿಚಯಿಸಿದರು.
ಬಹುತಾರಾಗಣ ಸಿನಿಮಾ ಆಗಿಬಿಟ್ಟಿತು
ಸಿನಿಮಾಕ್ಕೆ ವಿಷ್ಣುವರ್ಧನ್, ರಮೇಶ್ ಅರವಿಂದ್, ಪ್ರಕಾಶ್ ರೈ, ಜಗ್ಗೇಶ್ ಹೀಗೆ ಹಲವು ಖ್ಯಾತ ನಟರನ್ನು ಸೇರಿಸಿ ಸಿನಿಮವನ್ನು ಬಹುತಾರಾಗಣದ ಸಿನಿಮಾ ಮಾಡಿಬಿಟ್ಟರು ರಾಕ್ಲೈನ್. ಹಂಸಲೇಖ ಹೊಸೆದುಕೊಟ್ಟ ಹಾಡುಗಳಂತೂ ರೀಮೇಕ್ ಸಿನಿಮಾಕ್ಕೆ ಹೊಸ ಜೀವವನ್ನೇ ತುಂಬಿದವು.
ಪುನೀತ್ ರಾಜ್ಕುಮಾರ್ ಅಭಿಮಾನಿಗಳಿಂದ ರವಿಚಂದ್ರನ್ಗೊಂದು ಬೇಡಿಕೆ
ಸ್ಟಾರ್ ಆಗುತ್ತಿದ್ದರಾ ಬಾಲಾಜಿ?
ಸಿನಿಮಾ ಬಿಡುಗಡೆ ಆದ ಬಳಿಕ ಭಾರಿ ದೊಡ್ಡ ಹಿಟ್ ಆಯಿತು. ಶತದಿನ ಆಚರಿಸಿತು. ಆದರೆ ಇದರಿಂದ ನಷ್ಟವಾಗಿದ್ದು ಬಾಲಾಜಿ ಗೆ ನಂತರ ಎಷ್ಟೋ ವರ್ಷಗಳ ಕಾಲ ಅವರು ನಾಯಕ ನಟನಾಗಲು ಆಗಲಿಲ್ಲ. ಆದರೂ ಸಹ ಹಿಟ್ ಸಿಗಲಿಲ್ಲ. ಯಾರೆ ನೀನು ಚೆಲುವೆ ಸಿನಿಮಾದಲ್ಲಿ ಅವರೇ ನಟಿಸಿ ಹಿಟ್ ಆಗಿದ್ದಿದ್ದರೆ ಅವರೂ ಸ್ಟಾರ್ ಆಗುತ್ತಿದ್ದರೋ ಏನೊ?