ವಿವಾದಕ್ಕೆ ಮೂಲವಾದ ವರ್ಮಾರ ತಾಜ್ ಭೇಟಿ

ವರ್ಮಾ ಅವರೊಂದಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇಶ್ ಮುಖ್ ಮತ್ತವರ ಪುತ್ರ, ನಟ ರಿತೇಶ್ ದಾಳಿಗೆ ಒಳಗಾದ ಹೋಟೆಲ್ ಗಳಿಗೆ ಭೇಟಿ ನೀಡಿರುವುದು ಈಗ ಹೊಸ ವಿವಾದಕ್ಕೆ ಕಾರಣವಾಗಿದೆ. ರಿತೇಶ್ ಅವರು ತಾಜ್ ಗೆ ಭೇಟಿ ನೀಡುವ ಅವಶ್ಯಕತೆಯಾದರೂ ಏನಿತ್ತು? ಎಂದು ಹಲವರು ಪ್ರಶ್ನಿಸಿದ್ದಾರೆ. 'ಇದರಲ್ಲಿ ತಪ್ಪ್ಪೇನಿದೆ? ತಾಜ್ ನಲ್ಲಿ ರಿತೇಶ್ ರೊಂದಿಗೆ ನಾನು ಹೆಜ್ಜೆ ಹಾಕಿದೆ ಅಷ್ಟೆ. ಈ ಕುರಿತು ಚಿತ್ರ ಮಾಡುವ ಯಾವುದೇ ಉದ್ದೇಶ ನನಗಿಲ್ಲ'ಎಂದು ವರ್ಮಾ ಸ್ಪಷ್ಟಪಡಿಸಿದ್ದಾರೆ.
ಈ ಎಲ್ಲ ಬೆಳವಣಿಗೆಗಳ ನಡುವೆ ಮುಂಬೈ ಸ್ಫೋಟಕ್ಕೆ ಸಂಬಂಧಿಸಿದಂತೆ ದೇಶ್ ಮುಖ್ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಮತ್ತು ಶಿವಸೇನಾ ಪಕ್ಷಗಳು ಆಗ್ರಹಿಸಿವೆ. ದುರಂತ ಸ್ಥಳಕ್ಕೆ ಭೇಟಿ ನೀಡಿದ ದೇಶ್ ಮುಖ್ ಅವರು ರಿತೇಶ್ ಹಾಗೂ ವರ್ಮಾ ಅವರನ್ನ್ನು ಜೊತೆಗೆ ಕರೆದುಕೊಂಡು ಹೋಗಿರುವುದು ಪಿಕ್ ನಿಕ್ ಗೆ ಹೋದಂತೆ ಇತ್ತು ಎಂದು ಮಾಧ್ಯಮಗಳು ವ್ಯಂಗ್ಯವಾಡಿವೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











