Don't Miss!
- News Gadag: ಕಾಂಗ್ರೆಸ್ ಸರ್ಕಾರದಲ್ಲಿ ಕೊಲೆಗಡುಕರಿಗೆ ರಾಜ ಮರ್ಯಾದೆ: ಮಾಜಿ ಸಿಎಂ
- Automobiles ಎಲೆಕ್ಟ್ರಿಕ್ ಅವತಾರದಲ್ಲಿ ಬರಲಿದೆ ಹೋಂಡಾ ಆಕ್ಟಿವಾ: ಎಲೆಕ್ಟ್ರಿಕ್ ಸ್ಕೂಟರ್ಗಳ ರಾಜ ಆಗುತ್ತಾ?
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಾಲಿವುಡ್ ಗಾಯಕರ ವಿರುದ್ಧ ಬಂಡಾಯ!
ಕೊನೆಗೂ ಗಾಯಕ ಗಾಯಕಿಯರು ಬೀದಿಗೆ ಬಂದಿದ್ದಾರೆ. ಅದರರ್ಥಬೇರೇನೊ ಅಲ್ಲ. ಕನ್ನಡದ ಗಾಯಕರು ಬಾಲಿವುಡ್ ಗಾಯಕರ ವಿರುದ್ಧ ಹೋರಾಡಲು ರಣ ಕಹಳೆ ಊದಿದ್ದಾರೆ. ಬಾಲಿವುಡ್ನ ಅನೇಕ ಗಾಯಕರು ಕನ್ನಡದಹಾಡುಗಳಿಗೆ ಧ್ವನಿಯಾಗುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಂತೂ ಅವರದೇ ಕಾರುಬಾರು. ಸೋನು ನಿಗಮ್, ಉದಿತ್ ನಾರಾಯಣ್, ಕುನಾಲ್ ಗಾಂಜಾವಾಲಾ... ಪಟ್ಟಿ ಬೆಳೆಯುತ್ತದೆ.
ಇವರು ಕನ್ನಡದಲ್ಲಿ ಹಾಡಿದ ಎಲ್ಲವೂ ಹಿಟ್ ಆಗಿಲ್ಲ ಎನ್ನುವುದು ಎಷ್ಟು ನಿಜವೋ, ಕೆಲವು ಹಾಡುಗಳು ಜನರ ಮನಗೆದ್ದದ್ದೂ ನಿಜ. ಆದರೆ ಇದನ್ನೇ ಕೆಲವು ಆಡಿಯೋ ಕ್ಯಾಸೆಟ್ ಕಂಪನಿಗಳು ಸಂಪ್ರದಾಯ ಮಾಡಿಕೊಂಡವು. ಅವರು ಹಾಡಿದರೆ ಮಾತ್ರ ನಾವು ಆಡಿಯೋ ಹಕ್ಕುಗಳನ್ನು ಕೊಳ್ಳುತ್ತೇವೆ ಎಂದರು. ಕೆಲವು ದಿನಗಳ ಹಿಂದೆ ಆನಂದ್ ಆಡಿಯೋದ ಆನಂದ್ ಒಂದು ಹೆಜ್ಜೆ ಮುಂದೆ ಹೋಗಿ, ಅನಿಸುತಿದೆ ಯಾಕೊ ಇಂದು' ಹಾಡನ್ನು ರಾಜೇಶ್ ಕೃಷ್ಣ ಹಾಡಿದ್ದರೆ ಇಷ್ಟು ಹಿಟ್ ಆಗುತ್ತಿರಲಿಲ್ಲ ಎಂದು ಷರಾ ಬರೆದರು. ಇದಕ್ಕೆಲ್ಲ ಕಳಸ ಇಟ್ಟಂತೆ ಇಲ್ಲಿನವರಿಗೆ ಕೆಲವು ಸಾವಿರದಷ್ಟು ದುಡ್ಡು ಕೊಡುವ ನಿರ್ಮಾಪಕರು ಸೋನುಗೆ ಎರಡರಿಂದ ಮೂರು ಲಕ್ಷ ಕೊಡುತ್ತಿರುವುದು ಕನ್ನಡ ಗಾಯಕರ ಹೊಟ್ಟೆ ಉರಿಸಿದೆ.
ಅದೀಗ ಹೋರಾಟಕ್ಕೆ ವೇದಿಕೆ ಒದಗಿಸಿದೆ. ಬಾಲಿವುಡ್ ಗಾಯಕರನ್ನು ಕರೆಸುವುದು ಬೇಡಎಂದು ಹೇಳುತ್ತಿಲ್ಲ. ನಮಗೆ ಅವಕಾಶ ಕೊಡಿ. ಅವರಿಗಿಂತ ಚೆನ್ನಾಗಿ ಹಾಡುತ್ತೇವೆ...' ಎಂದು ರಾಜೇಶ್ ಕೃಷ್ಣ ಮತ್ತು ಹೇಮಂತ್ ನೇತೃತ್ವದ ತಂಡ ಗುಡುಗಿದೆ. ಹಾಗೆಯೇ ಬಾಲಿವುಡ್ ಗಾಯಕರಿಂದ ಕನ್ನಡದ ಕೊಲೆ ನಡೆಯುತ್ತಿರುವುದು ಇವರು ನೀಡುವ ಇನ್ನೊಂದು ಕಾರಣ. ಅದಕ್ಕೆ ಬುಧವಾರ (ಜು.2)ಬೆಳಿಗ್ಗೆ ರವೀಂದ್ರ ಕಲಾಕ್ಷೇತ್ರದ ಎದುರು ಧರಣಿ ನಡೆಸಲಿದೆ. ಇವರಿಗೆ ಲಹರಿ ಸಂಸ್ಥೆಯ ವೇಲುಸಾಥ್ ನೀಡಲಿದ್ದಾರೆ.
ನಾನು ನೂರು ಜನ ಉತ್ತಮ ಗಾಯಕರನ್ನು ತಂದು ನಿಲ್ಲಿಸುತ್ತೇನೆ. ಅವರಿಂದ ಹಾಡಿಸಲಿ ಎಂದು ಆನಂದ್ಗೆ ಪರೋಕ್ಷವಾಗಿ ಸವಾಲು ಹಾಕಿದ್ದಾರೆ. ಇದು ಎಲ್ಲಿಗೆ ಹೋಗಿ ತಲುಪುತ್ತೋ ಗೊತ್ತಿಲ್ಲ. ಒಟ್ಟಿನಲ್ಲಿ ಒಂದು ಹೋರಾಟವಂತೂ ಆರಂಭವಾಗಿದೆ. ತಮಾಷೆ ಗೊತ್ತಾ ? ಸೋನುಗೆ ಲಕ್ಷ ಲಕ್ಷ ಸುರಿಯುವ ಹಿಂದೆಯೂ ಒಂದು ಕುಚೋದ್ಯ ಇದೆ. ಆತ ಬಾಲಿವುಡ್ನಲ್ಲಿ ಸಿಕ್ಕಾಪಟ್ಟೆ ಬಿಜಿಯಾಗಿದ್ದಾನೆ. ಪರ ಭಾಷೆಯಲ್ಲಿ ಹಾಡಲು ಸಮಯ ಸಿಗುತ್ತಿಲ್ಲ. ಅದಕ್ಕೆ ಸಂಭಾವನೆ ಏರಿಸುತ್ತಾನೆ. ಹೀಗಾದರೂ ಇವರ ಪೀಡೆ' ತಪ್ಪಲಿ ಎನ್ನುವ ಸದುದ್ದೇಶ ಆತನಿಗಿದೆ. ಆದರೆ ನಮ್ಮವರು ಮುಖಕ್ಕೆ ಗೋಣಿ ತಾಟು ಕಟ್ಟಿಕೊಂಡಿದ್ದಾರೆ. ಆತನಿಂದಲೇ ಹಾಡಿಸುತ್ತಿದ್ದಾರೆ. ಕೋಣನ ಮುಂದೆ ಕಿನ್ನರಿ ಬಾರಿಸಿದರೆ ಇನ್ನೇನಾಗುತ್ತದೆ ?
(ಸುದ್ದಿ : ವಿಜಯ ಕರ್ನಾಟಕ)
ಪರಭಾಷೆ ಗಾಯಕರ ವಿರುದ್ಧ ಲಹರಿ ಆಂದೋಲನ