Don't Miss!
- News Namma Metro: ಈ ಮಾರ್ಗದ ಮೆಟ್ರೋ ನಿಲ್ದಾಣಗಳಲ್ಲೂ ಕ್ಯೂಆರ್ ಕೋಡ್ ಟಿಕೆಟ್ ವ್ಯವಸ್ಥೆ-ಎಲ್ಲೆಲ್ಲಿ? ಮಾಹಿತಿ ತಿಳಿಯಿರಿ
- Automobiles ಬಹುಕೋಟಿ ಬೆಲೆಯ ಕಾರುಗಳಿದ್ದರೂ ಸಾಮಾನ್ಯ ಮಾರುತಿ ಕಾರಿನಲ್ಲಿ ಓಡಾಡಿದ ರೋಹಿತ್ ಶರ್ಮಾ: ಕಾರಣವೇನು?
- Sports ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ ಪಾಕ್ ತಂಡದ ಮಾಜಿ ನಾಯಕಿ
- Lifestyle ಎಲೆಕೋಸಿಗೆ ಕೆಮಿಕಲ್ ಮಿಶ್ರಣ ಮಾಡ್ತಾರೆ ಹುಷಾರ್..! ವಿಡಿಯೋ ವೈರಲ್..!
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಆಪ್ತರಕ್ಷಕ' ರಜತ ಸಂಭ್ರಮಕ್ಕೆ ಬರೊಲ್ಲ ಎಂದರು ಭಾರತಿ
ಸಾಹಸಸಿಂಹ ವಿಷ್ಣುವರ್ಧನ್ ಅವರ 200ನೇ ಚಿತ್ರ 'ಆಪ್ತರಕ್ಷಕ' 25 ವಾರಗಳನ್ನು ಪೂರೈಸಿದೆ. ಈ ಚಿತ್ರದ ರಜತ ಮಹೋತ್ಸವ ಕಾರ್ಯಕ್ರಮ ವಿಷ್ಣುವರ್ಧನ್ ಅವರ ಹುಟ್ಟುಹಬ್ಬದಂದೇ(ಸೆ.18) ನಡೆಯುತ್ತಿದೆ. ಆದರೆ ಈ ಸಮಾರಂಭದಲ್ಲಿ ಭಾರತಿ ವಿಷ್ಣುವರ್ಧನ್ ಅವರು ಭಾಗವಹಿಸುತ್ತಿಲ್ಲ.
ವಿಷ್ಣು ಚಿತ್ರೋತ್ಸವ ಕುರಿತು ಅವರು ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ತಿಳಿಸಿದರು. ಚಿತ್ರದ ನಿರ್ಮಾಪಕ ಕೃಷ್ಣ ಪ್ರಜ್ವಲ್ ಅವರು 'ಆಪ್ತರಕ್ಷಕ' ರಜತ ಮಹೋತ್ಸವ ಕಾರ್ಯಕ್ರಮ ಕ್ಕೆ ತಮ್ಮನ್ನು ಆಹ್ವಾನಿಸಿದರು. ಆದರೆ ಅಂದು ತಮಗೆ ಬಿಡುವಿಲ್ಲದಕೆಲಸ ಕಾರ್ಯಗಳಿವೆ. ಮತ್ತೊಂದು ದಿನ ಸಮಾರಂಭವನ್ನು ಆಯೋಜಿಸಿ ಎಂದು ಹೇಳಿದೆ.
ಆದರೆ ಅವರು ಕೇಳಲಿಲ್ಲ. ಸೆಪ್ಟೆಂಬರ್ 18ರಂದೇ ಆಯೋಜಿಸುತ್ತಿರುವುದಾಗಿ ತಿಳಿಸಿದರು. ಕಾರ್ಯಕ್ರಮಕ್ಕೆ ಪರಭಾಷಾ ನಟರನ್ನು ಆಹ್ವಾನಿಸಿದ್ದೇನೆ. ಅವರಿಗೆಲ್ಲಾ ಮತ್ತೆ ಸಮಯ ಸಿಗುವುದಿಲ್ಲ ಎಂದರು. ಕಾರ್ಯಕ್ರಮಕ್ಕೆ ನಮಗಿಂತಲೂ ಬೇರೆಯವರೆ ಮುಖ್ಯವಾಗಿರಬೇಕಾದರೆ ನಾವು ಹೋಗುವುದರಲ್ಲಿ ಯಾವ ಅರ್ಥವಿದೆ ಎಂದು ಬೇಸರಿಕೊಂಡರು.
ನಮ್ಮ ಮಾತಿಗೆ ಬೆಲೆ ಇಲ್ಲ ಎಂದ ಮೇಲೆ ಅಲ್ಲಿಗೆ ಹೋಗಲು ನಮಗೆ ಯಾವ ಹಕ್ಕು ಇಲ್ಲ. ನಮ್ಮ ಯಜಮಾನರು ಇದೇ ಮಾತನ್ನು ಹೇಳುತ್ತಿದ್ದರು. ಅವರ ಪಾಡಿಗೆ ಅವರು 'ಆಪ್ತ್ತರಕ್ಷಕ' ಕಾರ್ಯಕ್ರಮ ನಡೆಸಲಿ. ನಮ್ಮ ಅಭ್ಯಂತರವೇನು ಇಲ್ಲ. ಆದರೆ ಅಂದು ನಮಗೆ ತುಂಬ ಕೆಲಸ ಕಾರ್ಯಗಳಿವೆ ಹಾಗಾಗಿ 'ಆಪ್ತರಕ್ಷಕ' ರಜತ ಮಹೋತ್ಸವ ಕಾರ್ಯಕ್ರಮಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.