ಅಮೃತ ಮಹೋತ್ಸವದಲ್ಲಿ ಮಿಡಿದ ಅಪಸ್ವರಗಳು

ರಮೇಶ್ ಅರವಿಂದ್: ಕೆಟ್ಟ ನಿರ್ವಹಣೆಯ ಕಾರಣ ವೇದಿಕೆ ಗೊಂದಲದ ಗೂಡಾಗಿತ್ತು.ಸಾಲದ್ದಕ್ಕೆ ಕಮಲ ಹಾಸನ್ ಅವರ ಸಂಪೂರ್ಣ ಜವಾಬ್ದಾರಿ ನನ್ನ ಹೆಗಲ ಮೇಲಿತ್ತು. ಸೂಕ್ತ ಭದ್ರತೆ ಕಲ್ಪಿಸುವುದು ನಮ್ಮ ಜವಾಬ್ದಾರಿಯಾಗಿತ್ತು. ಕನ್ನಡ ನಟರ ಪರಿಸ್ಥಿತಿ ಇರುವೆ ಮುತ್ತಿದ್ದ ಸಕ್ಕರೆಯಂತಾಗಿತ್ತು.
ಜಯಂತ ಕಾಯ್ಕಿಣಿ: ಅಮೃತ ಮಹೋತ್ಸವ ಸ್ಥಳಕ್ಕೆ ಆಗಮಿಸಿದಾಗ ಅಲ್ಲಿನ ಜನ ಸಂದಣಿ ನೋಡಿ ಗಾಬರಿಯಾಯಿತು. ವೇದಿಕೆ ತಲುಪಲು ಹರ ಸಾಹಸ ಮಾಡಬೇಕಾಯಿತು. ಹೇಗೋ ಕಷ್ಟಪಟ್ಟು ವೇದಿಕೆ ತಲುಪಿದೆನಾದರೂ ಮತ್ತೆ ಹಿಂತಿರುಗಲು ಪರದಾಡುವಂತಾಯಿತು. ಪೊಲೀಸರನ್ನು ದೂಷಿಸುವುದರಲ್ಲಿ ಅರ್ಥವಿಲ್ಲ. ಜನ ಸಂದಣಿಯನ್ನು ನಿಯಂತ್ರಿಸುವುದು ನಿಜಕ್ಕೂ ಸವಾಲಾಗಿತ್ತು.
ಅವಿನಾಶ್: ಜನಜಂಗುಳಿಯಿಂದ ತುಂಬಿದ್ದಅದ್ದೂರಿ ಕಾರ್ಯಕ್ರಮ. ಭದ್ರತಾ ವ್ಯವಸ್ಥೆಗಳು ಸಂಪೂರ್ಣ ವಿಫಲವಾಗಿದ್ದವು. ಸಂಯಮ ವಹಿಸುವಂತೆ ಜನರನ್ನು ನಾನೂ ವಿನಂತಿಸಿಕೊಂಡೆ. ನಿಯಂತ್ರಿಸಲಾಗದಷ್ಟು ಜನಸಂದಣಿ. ಮೂಳೆ ಮುರಿದುಕೊಳ್ಳದಂತೆ ಮನೆಗೆ ಹಿಂತಿರುಗಿದ್ದೇ ಒಂದು ಪವಾಡ!
ಜೆನ್ನಿಫರ್ ಕೊತ್ವಾಲ್: ವೇದಿಕೆ ಸನಿಹದಲ್ಲೇ ಠಿಕಾಣಿ ಹೂಡಿದ್ದ ನಾವು ಕಾರ್ಯಕ್ರಮವನ್ನು ಎಂಜಾಯ್ ಮಾಡಿದೆವು. ಅದ್ದೂರಿ ಕಾರ್ಯಕ್ರಮದಲ್ಲಿ ಗಲಾಟೆ, ಪೊಲೀಸ್ ಲಾಠಿ ಪ್ರಹಾರ ನಡೆಯಬಾರದಿತ್ತು. ಅದೊಂದು ರೀತಿ ಕಾರ್ಯಕ್ರಮಕ್ಕೆ ಕಪ್ಪು ಚುಕ್ಕೆಯಾಯಿತು.
ಸಂಜನಾ: ನನಗಾದ ಭಯದಲ್ಲಿ ಸಮಯಸ್ಫೂರ್ತಿಯನ್ನೇ ಕಳೆದುಕೊಂಡಿದ್ದೆ.ಅಲ್ಲಿನ ಜನ ಜಂಗುಳಿ ನೋಡಿ ಅಂಜಿಕೆಯಾಗಿತ್ತು. ಕಾರ್ಯಕ್ರಮವನ್ನು ಬೆರಗುಗಣ್ಣುಗಳಿಂದ ನೋಡಿದೆನಾದರೂ ಕೊನೆಗೆ ಮಂಕಾಗಿದ್ದೆ.
ಶರ್ಮಿಳಾ ಮಾಂಡ್ರೆ: ಪಾಸುಗಳಿಲ್ಲದೇನೆ ವಿಐಪಿ ಸೀಟುಗಳೆಲ್ಲಾ ಮಧ್ಯಾಹ್ನ ಒಂದು ಗಂಟೆಯ ಹೊತ್ತಿಗೆಲ್ಲಾ ತುಂಬಿಹೋಗಿದ್ದವು. ಇದೊಂದು ಸಾರ್ವಜನಿಕ ಸಮಾರಂಭ. ಜನಸಂದಣಿ ಸಹಜ. ಅಲ್ಲಿ ಆದದ್ದೇನೆಂದರೆ ನಮ್ಮ ಊಹೆಗೆ ನಿಲುಕಲಿಲ್ಲ.
ರಶ್ಮಿ: ಭದ್ರತೆ ವಿಫಲವಾಗಿತ್ತು. ಡ್ರೆಸ್ಸಿಂಗ್ ಕೊಠಡಿ ತೆರೆದ ಬಯಲಾಗಿತ್ತು. ವೇದಿಕೆ ಮೇಲೆ ಪ್ರದರ್ಶನ ನೀಡಬೇಕಿದ್ದ ನಾವುಗಳು ಆಘಾತ ಅನುಭವಿಸುವಂತಾಯಿತು. ಅಲಂಕಾರ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಅಭಿಮಾನಿಗಳು ಡ್ರೆಸ್ಸಿಂಗ್ ಕೊಠಡಿಗೆಲ್ಲಾ ನುಗ್ಗಿದ್ದರು.
(ದಟ್ಸ್ ಕನ್ನಡ ಚಿತ್ರವಾರ್ತೆ)
ಕನ್ನಡ ಚಿತ್ರದಲ್ಲಿ ನಟಿಸುವ ಆಸೆ: ರಜನಿಕಾಂತ್
ಕನ್ನಡ,ತಮಿಳು ಸಂಬಂಧಕ್ಕೆ ಕಲ್ಲು ಹಾಕಬೇಡಿ:ಕಮಲ್
ಕನ್ನಡ ಚಿತ್ರರಂಗ ಇಂದು ಮತ್ತು ನಾಳೆ ಒಂದು ಚರ್ಚೆ
ರಂಗುರಂಗಿನ ಅಮೃತ ಮಹೋತ್ಸವ ಚಿತ್ರಪಟ


Click it and Unblock the Notifications











