twitter
    For Quick Alerts
    ALLOW NOTIFICATIONS  
    For Daily Alerts

    ಒತ್ತಿನೆಣಿಯಲ್ಲಿ ಚಾಪ್ಲಿನ್ ಪ್ರತಿಮೆ ನಿರ್ಮಾಣಕ್ಕೆ ಅಡ್ಡಿ

    By Staff
    |

    Director Hemanth hegde
    ಬೈಂದೂರು, ಮಾ. 15 : ಒತ್ತಿನೆಣಿ ಕಡಲ ತೀರದಲ್ಲಿ ಚಾರ್ಲಿ ಚಾಪ್ಲಿನ್ ಪ್ರತಿಮೆ ನಿರ್ಮಾಣಕ್ಕೆ ಬಿಜೆಪಿ ಸೇರಿ ಅನೇಕ ಹಿಂದೂ ಸಂಘಟನೆಗಳ ಕಾರ್ಯಕರ್ತರು ತಡೆ ಒಡ್ಡಿದ್ದು, ಕಾಮಗಾರಿ ಆರಂಭ ಹಂತದ ನಿರ್ಮಾಣವನ್ನು ಧ್ವಂಸಗೊಳಿಸಿರುವ ಘಟನೆ ನಡೆದಿದೆ. ಕನ್ನಡ ಚಲನಚಿತ್ರ ನಟ ಹೇಮಂತ್ ಹೆಗ್ಡೆ ಹೌಸ್ ಪುಲ್ ಚಿತ್ರಕ್ಕಾಗಿ 67 ಅಡಿ ಎತ್ತರದ ಚಾರ್ಲಿ ಚಾಪ್ಲಿನ್ ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿದ್ದರು.

    ಶ್ರೀಸೋಮೇಶ್ವರ ದೇವಸ್ಥಾನದ ಪ್ರವೇಶದ್ವಾರದ ಬಳಿಯೇ ದೇವಾಲಯಕ್ಕಿಂತ ಎತ್ತರದ ಚಾರ್ಲಿ ಚಾಪ್ಲಿನ್ ಪ್ರತಿಮೆ ಸ್ಥಾಪನೆ ಮಾಡುವುದರಿಂದ ದೇವಸ್ಥಾನ ಮತ್ತು ಧಾರ್ಮಿಕ ಭಾವನೆಗಳಿಗೆ ಅಪಚಾರವಾಗುತ್ತದೆ ಎಂದು ಸ್ಥಳೀಯ ಹಿಂದೂ ಸಂಘಟನೆ ನಾಯಕ ಬಟವಾಡಿ ಹೇಳಿದ್ದಾರೆ. ಸ್ಥಳಕ್ಕೆ ಮಾದ್ಯಮದವರನ್ನು ಕರೆದುಕೊಂಡು ಹೋಗಿದ್ದ ಸ್ಥಳೀಯ ಗ್ರಾಪಂ ಸದಸ್ಯರು ಹಾಗೂ ಹಿಂದೂ ಸಂಘಟನೆಯ ಕಾರ್ಯಕರ್ತರು ಹೌಸ್ ಪುಲ್ ಚಿತ್ರದ ಚಿತ್ರೀಕರಣಕ್ಕೆ ತಮ್ಮ ಸಂಘಟನೆ ಅಥವಾ ಸ್ಥಳೀಯರು ಆಕ್ಷೇಪ ಮಾಡಲ್ಲ. ಚಿತ್ರಕ್ಕಾಗಿ ಚಾರ್ಲಿ ಚಾಪ್ಲಿನ್ ಪ್ರತಿಮೆ ನಿರ್ಮಾಣಕ್ಕೂ ಯಾರ ಆಕ್ಷೇಪವೂ ಇಲ್ಲ. ಚಿತ್ರಕ್ಕೆ ಪ್ರಚಾರ ಗಿಟ್ಟಿಸಿಕೊಳ್ಳಬೇಕೆಂಬ ಉದ್ದೇಶದಿಂದ ಕಲಾವಿದರು ರಾಜಕೀಯ ಮಾಡುವುದು ಸರಿಯಲ್ಲ ಎಂದಿದ್ದಾರೆ.

    ಉಡುಪಿ ಸುದ್ದಿಗಾರರೊಂದಿಗೆ ಮಾತನಾಡಿದ ನಿರ್ದೇಶಕ ಹೇಮಂತ್ ಹೆಗ್ಡೆ, ಮಾರ್ಚ್ 5 ಕ್ಕೆ ಅಡಿಪಾಯ ನಿರ್ಮಾಣಕ್ಕಾಗಿ ಎಂಟು ಅಡಿ ಆಳಕ ಹೊಂಡ ತೋಡಲು ಮುಂದಾದ ಬಳಿಕ ಎರಡು ಬಾರಿ ಕಾಮಗಾರಿ ಸ್ಥಗಿತವಾಗಿತ್ತು. ಶುಕ್ರವಾರ ಮತ್ತೆ ಮುಂದಾದಾಗ ಕ್ರೈಸ್ತ್ ಮತಕ್ಕೆ ಸೇರಿದ ಚಾಪ್ಲಿನ್ ಪ್ರತಿಮೆ ನಿರ್ಮಿಸದಂತೆ ತಡೆಯಲಾಗಿದೆ ಎಂದು ಅವರು ಹೇಳಿದರು.

    (ದಟ್ಸ್ ಕನ್ನಡ ವಾರ್ತೆ)

    Sunday, March 15, 2009, 19:27
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X