Don't Miss!
- Lifestyle ವಿಕಲಚೇತನರಿಗೆ ಸ್ಕೂಟಿ ಗಿಫ್ಟ್..! ಮನೆ ಕಟ್ಟಿಕೊಡುವ ಭರವಸೆ ನೀಡಿದ ನಟ ಲಾರೆನ್ಸ್..!
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- News Mangalsutra Row: ಸಾಧನೆ ಹೇಳಿ ಮತ ಕೇಳಲು ಮುಖವಿಲ್ಲದ ಪ್ರಧಾನಿ: ಕಾಂಗ್ರೆಸ್
- Technology OnePlus: ಒನ್ಪ್ಲಸ್ 13 ಸ್ಮಾರ್ಟ್ಫೋನ್ ಡಿಸ್ಪ್ಲೇ, ವಿನ್ಯಾಸ ಲೀಕ್!..ಯಾವಾಗ ಲಾಂಚ್?
- Automobiles ಭೂಮಿಯ ಸ್ವರ್ಗ: 1.50 ಕೋಟಿಯ ಟೊಯೊಟಾ ವೆಲ್ಫೈರ್ಗೆ ಮನಸೋತ ಖ್ಯಾತ ನಟ.. ಈ ಕಾರಿನಲ್ಲಿ ಏನಿದೆ?
- Sports RCB: ಯುಜ್ವೇಂದ್ರ ಚಹಾಲ್ ಮರಳಿ ಬರುವಂತೆ ಬೇಡಿಕೊಳ್ಳಿ; ಆರ್ಸಿಬಿಗೆ ಸಲಹೆ ನೀಡಿದ ರಾಬಿನ್ ಉತ್ತಪ್ಪ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಮ ರಾಮ, ರಮ್ಯಾಗೆ ಕೋಪ ಬಂದಿದೆ!
ತೆಲುಗು ನಟ ರಾಮ್ ಚರಣ್ ಇತ್ತೀಚೆಗೆ 'ಚಿರುತ' ಚಿತ್ರದ ನಾಯಕಿ ನೇಹಾ ಶರ್ಮಾಳೊಂದಿಗೆ ಮದುವೆಯಾದರು ಎಂದು ಕೂಡ ಗಾಳಿಸುದ್ದಿ ಹಬ್ಬಿತ್ತು. ಮದುವೆ ನಡೆದಿರುವುದು ಕಪೋಲಕಲ್ಪಿತ ಎಂದು ರಾಮ್ ಅಪ್ಪ ಚಿರಂಜೀವಿಯಾದಿಯಾಗಿ ಎಲ್ಲರೂ ಅಲ್ಲಗಳೆದಿದ್ದಾರೆ. ಅದೇ ಸಮಯದಲ್ಲಿ ರಾಮ್ ಸ್ನೇಹಿತೆಯಾಗಿರುವ ರಮ್ಯಾ ಆತನೊಂದಿಗೆ ತನನಂ ತನನಂ ನಡೆಸುತ್ತಿದ್ದಾರೆ ಎಂದು ಕೆಲ ಟಿವಿ ಚಾನಲ್ ಗಳು ಪುಕಾರು ಎಬ್ಬಿಸಿದ್ದವು. ಅನಾವಶ್ಯಕವಾಗಿ ರಾಮ್ ಜೊತೆ ತಮ್ಮ ಹೆಸರನ್ನು ತಂದಿದ್ದು ರಮ್ಯಾಗೆ ಶ್ಯಾನೆ ಕೋಪ ತರಿಸಿದೆ.
ರಮ್ಯಾಳ ಕೋಪವೂ ಸಾತ್ವಿಕವಾದದ್ದೇ. ಕನ್ನಡದ ಜೊತೆ ತೆಲುಗು ಮತ್ತು ತಮಿಳು ಚಿತ್ರದಲ್ಲಿಯೂ ಸಾಕಷ್ಟು ಬಿಜಿಯಾಗಿರುವ ರಮ್ಯಾ, "ತೆಲುಗು ನಟ ರಾಮ್ ಮತ್ತು ನಾನು ಉತ್ತಮ ಗೆಳೆಯರೆನ್ನುವುದನ್ನು ಅಲ್ಲಗಳೆಯುವುದಿಲ್ಲ. ಅವರನ್ನು ಆಗಾಗ ಭೇಟಿಯಾಗುತ್ತಿರುತ್ತೇನೆ. ನಟನಾ ತರಗತಿಯನ್ನು ಇಬ್ಬರೂ ಒಟ್ಟಾಗಿ ಪಡೆಯುತ್ತಿದ್ದೇವೆ. ಇಷ್ಟ ಮಾತ್ರಕ್ಕೆ ನಮ್ಮಿಬ್ಬರಲ್ಲಿ ಇಲ್ಲದ ಸಂಬಂಧ ಹುಟ್ಟುಹಾಕುವುದು ಅರ್ಥಹೀನ. ನಾವಿಬ್ಬರೂ ಕೇವಲ ಸ್ನೇಹಿತರು ಮಾತ್ರ." ಎಂದು ಉತ್ತರ ನೀಡಿದ್ದಾರೆ.
ಸದ್ಯಕ್ಕೆ ರಮ್ಯಾ ಗೋಲ್ಡನ್ ಸ್ಟಾರ್ ಗಣೇಶ ಜೊತೆ ಕನ್ನಡ ಚಿತ್ರ ಬೊಂಬಾಟ್ನಲ್ಲಿ ಅಭಿನಯಿಸುತ್ತಿದ್ದಾರೆ.ಉಪೇಂದ್ರ ಜತೆಯಲ್ಲಿ ಭೀಮೂಸ್ ಬ್ಯಾಂಗ್ ಬ್ಯಾಂಗ್ ಹಾಗೂ ಸುದೀಪ್ ಜತೆ ಇನ್ನೊಂದು ಚಿತ್ರದಲ್ಲಿ ಕೂಡ ರಮ್ಯಾ ಕಾಣಿಸಲಿದ್ದಾರೆ.
(ದಟ್ಸ್ ಸಿನಿ ವಾರ್ತೆ)
ರಾಂಗಾದ
ರಮ್ಯಾಳ
ರಂಗಾರಂಗು
ಚಿತ್ರಗಳು
ಲಕ್ಕಿ
ಸ್ಟಾರ್
ಜತೆ
ನಿರ್ದೇಶಕ
ಸಿಂಗ್
ಬಾಬು
ಬ್ಯಾಂಗ್
ಗೋಲ್ಡನ್
ಸ್ಟಾರ್,
ಲಕ್ಕಿ
ಸ್ಟಾರ್
ಜೋಡಿ
ಬೊಂಬಾಟ್
ಮೆಗಾಸ್ಟಾರ್
ಚಿರಂಜೀವಿ
ಪುತ್ರನ
ಚೊಚ್ಚಲ
ಚಿತ್ರ
'ಚಿರುತ"!