Don't Miss!
- Sports IPL 2024: ಚಿನ್ನಸ್ವಾಮಿಯಲ್ಲಿ ಡಾಗ್ ಔಟ್ ವಲಯ ನಿರ್ಮಾಣ? ಇದರ ಲಾಭವೇನು?
- News ವಸೂಲಿ ಟೈಟಾನ್ಸ್, ಇಂಪ್ಯಾಕ್ಟ್ ಪ್ಲೇಯರ್ ಇ.ಡಿ; ಮೋದಿ, ಬಿಜೆಪಿಯನ್ನು ಅಣಕಿಸಿದ ಮಹಿಳಾ ಕ್ರಿಕೆಟರ್
- Lifestyle ಏಪ್ರಿಲ್ 1ರಿಂದ 800 ಔಷಧಗಳು ದುಬಾರಿ..! ಎಷ್ಟು ಬೆಲೆ ಹೆಚ್ಚಳ.?
- Automobiles ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ ಹೊಸ ಸ್ಕೋಡಾ ಸೂಪರ್ಬ್ ಕಾರು
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಎರಡನೇ ಮದುವೆಯಲ್ಲಿ ಎಚ್ಡಿಕೆ ರಾಧಿಕಾ ಪ್ರಸಂಗ
ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹಾಗೂ ಚಿತ್ರನಟಿ ರಾಧಿಕಾ ಕುರಿತ ಎರಡು ಕನ್ನಡ ಚಿತ್ರಗಳು ಇನ್ನೂ ಡಬ್ಬದಲ್ಲೇ ಕುಳಿತಿವೆ. ಈಗ ಇವರಿಬ್ಬರ ಪ್ರೇಮ ಪ್ರಸಂಗ ಕುರಿತ ಮತ್ತೊಂದು ಚಿತ್ರ ಗಾಂಧಿನಗರದಲ್ಲಿ ಸದ್ದು ಮಾಡಿದೆ. ಚಿತ್ರದ ಹೆಸರು 'ಎರಡನೇ ಮದುವೆ'.ಅನಂತನಾಗ್ ಮತ್ತು ಸುಹಾಸಿನಿ ಮುಖ್ಯಭೂಮಿಕೆಯಲ್ಲಿರುವ ಚಿತ್ರ.
ಈ ಚಿತ್ರದಲ್ಲಿ ಕೆಲವೊಂದು ಆಕ್ಷೇಪಾರ್ಹ ಸಂಭಾಷಣೆಗಳಿವೆಯಂತೆ. ಆದರೆ ಚಿತ್ರದ ನಿರ್ದೇಶಕ ದಿನೇಶ್ ಬಾಬು ಈ ಮಾತನ್ನು ಒಪ್ಪುವುದಿಲ್ಲ. ಇದೊಂದು ಸಂಪೂರ್ಣ ಹಾಸ್ಯಭರಿತ ಚಿತ್ರ. ಯಾರನ್ನೂ ನೋಯಿಸುವ ಸನ್ನಿವೇಶಗಳು ಚಿತ್ರದಲ್ಲಿಲ್ಲ ಎಂದಿದ್ದಾರೆ. ಚಿತ್ರದ ನಿರ್ಮಾಪಕ ಸುರೇಶ್ ಸಹ ಇದೇ ಮಾತನ್ನು ಹೇಳುತ್ತಾರೆ.
ಚಿತ್ರದಲ್ಲಿ ಅನಂತನಾಗ್ ಹೇಳುವ ಸಂಭಾಷಣೆ ಹೀಗಿದೆ ; ಸಿಎಂ ಮನೆಯನ್ನು ಶೋಧಿಸಿದಾಗ ನಾನು ಸಿಕ್ಕಿಬಿದ್ದೆ. ಸಿಎಂ ಗೆಳತಿ ರೋಸಿ ಮನೆಯಲ್ಲಿ ಕೋಟಿಗಟ್ಟಲೆ ಕಪ್ಪು ಹಣವಿದೆ ಎಂಬ ಮಾಹಿತಿ ಆಧರಿಸಿ ನಾನು ಅಲ್ಲಿಗೆ ಹೋಗಿದ್ದೆ. ನನ್ನನ್ನು ನೋಡಿದ್ದೆ ತಡ ರೋಸಿಯ ಸೀರೆ ಜಾರಿತು. ಆದಷ್ಟು ಮುಚ್ಚಲು ಪ್ರಯತ್ನಿಸಿದೆ. ಖಂಡಿತ ನಾನೇನು ನೋಡ್ತಿಲ್ಲಪ್ಪ ಎಂಬರ್ಥದ ಸಂಭಾಷೆ ಇದೆಯಂತೆ.
ಸುಹಾಸಿನಿ: ಸಿನಿಮಾಗಳಲ್ಲಿ ರೋಸಿ ಬಟ್ಟೆ ತೊಡುವುದೇ ಇಲ್ಲ. ಅಂದಹಾಗೆ ಸೀರೆ ಯಾಕೆ ಉಟ್ಟುಕೊಂಡಿದ್ದರೋ? ಅನಂತನಾಗ್: ನನಗೂ ಹಾಗೇ ಅನ್ನಿಸುತ್ತಿದೆ. ಹೌದು ರೋಸಿ ಸೀರೆ ಯಾಕೆ ಉಟ್ಟುಕೊಂಡಿದ್ದರು ಎಂಬ ಅನುಮಾನ ನನಗೂ ಕಾಡುತ್ತಿದೆ...ಹೀಗೆ ಸಾಗುತ್ತದೆ ಸಂಭಾಷಣೆ.
ಕೆಲ ವರ್ಷಗಳ ಹಿಂದೆ ರಾಧಿಕಾ ಅವರ ಮನೆಯಲ್ಲಿ ಅಪಾರ ಪ್ರಮಾಣದ ಕಪ್ಪು ಹಣ ಪತ್ತೆಯಾದ ಸುದ್ದಿ ಬಂದಿತ್ತು. ಆ ಹಣ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಸೇರಿದ್ದು ಎಂಬ ಮಾತುಗಳು ಕೇಳಿಬಂದಿದ್ದವು. ಈಗ ಚಿತ್ರದಲ್ಲಿ ಆ ಸನ್ನಿವೇಶವನ್ನು ನೆನಪಿಸುವ ಸಂಭಾಷಣೆ ಇರುವುದು ವಿವಾದಕ್ಕೆ ಕಾರಣವಾಗಿದೆ.
ಇದೊಂದು ಸಂಪೂರ್ಣ ಹಾಸ್ಯಭರಿತ ಚಿತ್ರ. ಕೆಲವು ಮಂದಿ ಅನಗತ್ಯವಾಗಿ ವಿವಾದ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಎರಡನೆ ಮದುವೆ ಸಂಪೂರ್ಣ ಮನರಂಜನಾತ್ಮಕ ಚಿತ್ರ. ಯಾರ ಮನಸ್ಸನ್ನು ನೋಯಿಸಲು ಈ ಚಿತ್ರವನ್ನು ತೆಗೆದಿಲ್ಲ ಎಂದಿದ್ದಾರೆ ಚಿತ್ರದ ನಿರ್ಮಾಪಕ ಸುರೇಶ್. ಎಚ್ಡಿಕೆ ಮತ್ತು ರಾಧಿಕಾ ಬಗ್ಗೆ ಅನಗತ್ಯ ಸಂಭಾಷಣೆ ಹೆಣೆದಿರುವ ಕಾರಣ ಚಿತ್ರ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆಯಿದೆ ಎನ್ನುತ್ತವೆ ಮೂಲಗಳು.