Don't Miss!
- Finance ಸಂಸ್ಥೆಯ ಎಲ್ಲ 30,000 ಉದ್ಯೋಗಿಗಳಿಗೆ ವರ್ಕ್ ಫಮ್ ಹೋಂ ನೀಡಿದ ಟೆಕ್ ಕಂಪೆನಿ
- Technology Earbuds: 2000 ರೂ. ಒಳಗೆ ಲಭ್ಯ ಇರುವ ಅತ್ಯುತ್ತಮ ಇಯರ್ಬಡ್ಸ್! ಸಖತ್ ಫೀಚರ್ಸ್...
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಎರಡನೇ ಮದುವೆಯಲ್ಲಿ ಎಚ್ಡಿಕೆ ರಾಧಿಕಾ ಪ್ರಸಂಗ
ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹಾಗೂ ಚಿತ್ರನಟಿ ರಾಧಿಕಾ ಕುರಿತ ಎರಡು ಕನ್ನಡ ಚಿತ್ರಗಳು ಇನ್ನೂ ಡಬ್ಬದಲ್ಲೇ ಕುಳಿತಿವೆ. ಈಗ ಇವರಿಬ್ಬರ ಪ್ರೇಮ ಪ್ರಸಂಗ ಕುರಿತ ಮತ್ತೊಂದು ಚಿತ್ರ ಗಾಂಧಿನಗರದಲ್ಲಿ ಸದ್ದು ಮಾಡಿದೆ. ಚಿತ್ರದ ಹೆಸರು 'ಎರಡನೇ ಮದುವೆ'.ಅನಂತನಾಗ್ ಮತ್ತು ಸುಹಾಸಿನಿ ಮುಖ್ಯಭೂಮಿಕೆಯಲ್ಲಿರುವ ಚಿತ್ರ.
ಈ ಚಿತ್ರದಲ್ಲಿ ಕೆಲವೊಂದು ಆಕ್ಷೇಪಾರ್ಹ ಸಂಭಾಷಣೆಗಳಿವೆಯಂತೆ. ಆದರೆ ಚಿತ್ರದ ನಿರ್ದೇಶಕ ದಿನೇಶ್ ಬಾಬು ಈ ಮಾತನ್ನು ಒಪ್ಪುವುದಿಲ್ಲ. ಇದೊಂದು ಸಂಪೂರ್ಣ ಹಾಸ್ಯಭರಿತ ಚಿತ್ರ. ಯಾರನ್ನೂ ನೋಯಿಸುವ ಸನ್ನಿವೇಶಗಳು ಚಿತ್ರದಲ್ಲಿಲ್ಲ ಎಂದಿದ್ದಾರೆ. ಚಿತ್ರದ ನಿರ್ಮಾಪಕ ಸುರೇಶ್ ಸಹ ಇದೇ ಮಾತನ್ನು ಹೇಳುತ್ತಾರೆ.
ಚಿತ್ರದಲ್ಲಿ ಅನಂತನಾಗ್ ಹೇಳುವ ಸಂಭಾಷಣೆ ಹೀಗಿದೆ ; ಸಿಎಂ ಮನೆಯನ್ನು ಶೋಧಿಸಿದಾಗ ನಾನು ಸಿಕ್ಕಿಬಿದ್ದೆ. ಸಿಎಂ ಗೆಳತಿ ರೋಸಿ ಮನೆಯಲ್ಲಿ ಕೋಟಿಗಟ್ಟಲೆ ಕಪ್ಪು ಹಣವಿದೆ ಎಂಬ ಮಾಹಿತಿ ಆಧರಿಸಿ ನಾನು ಅಲ್ಲಿಗೆ ಹೋಗಿದ್ದೆ. ನನ್ನನ್ನು ನೋಡಿದ್ದೆ ತಡ ರೋಸಿಯ ಸೀರೆ ಜಾರಿತು. ಆದಷ್ಟು ಮುಚ್ಚಲು ಪ್ರಯತ್ನಿಸಿದೆ. ಖಂಡಿತ ನಾನೇನು ನೋಡ್ತಿಲ್ಲಪ್ಪ ಎಂಬರ್ಥದ ಸಂಭಾಷೆ ಇದೆಯಂತೆ.
ಸುಹಾಸಿನಿ: ಸಿನಿಮಾಗಳಲ್ಲಿ ರೋಸಿ ಬಟ್ಟೆ ತೊಡುವುದೇ ಇಲ್ಲ. ಅಂದಹಾಗೆ ಸೀರೆ ಯಾಕೆ ಉಟ್ಟುಕೊಂಡಿದ್ದರೋ? ಅನಂತನಾಗ್: ನನಗೂ ಹಾಗೇ ಅನ್ನಿಸುತ್ತಿದೆ. ಹೌದು ರೋಸಿ ಸೀರೆ ಯಾಕೆ ಉಟ್ಟುಕೊಂಡಿದ್ದರು ಎಂಬ ಅನುಮಾನ ನನಗೂ ಕಾಡುತ್ತಿದೆ...ಹೀಗೆ ಸಾಗುತ್ತದೆ ಸಂಭಾಷಣೆ.
ಕೆಲ ವರ್ಷಗಳ ಹಿಂದೆ ರಾಧಿಕಾ ಅವರ ಮನೆಯಲ್ಲಿ ಅಪಾರ ಪ್ರಮಾಣದ ಕಪ್ಪು ಹಣ ಪತ್ತೆಯಾದ ಸುದ್ದಿ ಬಂದಿತ್ತು. ಆ ಹಣ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಸೇರಿದ್ದು ಎಂಬ ಮಾತುಗಳು ಕೇಳಿಬಂದಿದ್ದವು. ಈಗ ಚಿತ್ರದಲ್ಲಿ ಆ ಸನ್ನಿವೇಶವನ್ನು ನೆನಪಿಸುವ ಸಂಭಾಷಣೆ ಇರುವುದು ವಿವಾದಕ್ಕೆ ಕಾರಣವಾಗಿದೆ.
ಇದೊಂದು ಸಂಪೂರ್ಣ ಹಾಸ್ಯಭರಿತ ಚಿತ್ರ. ಕೆಲವು ಮಂದಿ ಅನಗತ್ಯವಾಗಿ ವಿವಾದ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಎರಡನೆ ಮದುವೆ ಸಂಪೂರ್ಣ ಮನರಂಜನಾತ್ಮಕ ಚಿತ್ರ. ಯಾರ ಮನಸ್ಸನ್ನು ನೋಯಿಸಲು ಈ ಚಿತ್ರವನ್ನು ತೆಗೆದಿಲ್ಲ ಎಂದಿದ್ದಾರೆ ಚಿತ್ರದ ನಿರ್ಮಾಪಕ ಸುರೇಶ್. ಎಚ್ಡಿಕೆ ಮತ್ತು ರಾಧಿಕಾ ಬಗ್ಗೆ ಅನಗತ್ಯ ಸಂಭಾಷಣೆ ಹೆಣೆದಿರುವ ಕಾರಣ ಚಿತ್ರ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆಯಿದೆ ಎನ್ನುತ್ತವೆ ಮೂಲಗಳು.