Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಖಿಗೋಪಾಲ ದೇಗುಲದಲ್ಲಿ ಶಿಲ್ಪಾಗೆ ದಕ್ಕಿದ ಮುತ್ತು!
ಬಾಲಿವುಡ್ ಬಳುಕುವ ಬಳ್ಳಿ ಶಿಲ್ಪಾ ಶೆಟ್ಟಿಗೂ ವಿವಾದಗಳಿಗೂ ಏನೋ ಒಂಥರಾ ನೆಂಟಸ್ತಿಕೆ. ಒಂದಾದ ನಂತರ ಒಂದು ಚುಂಬನ ವಿವಾದಗಳಲ್ಲಿ ಶಿಲ್ಪಾ ಸಿಲುಕುತ್ತಲೇ ಇರುತ್ತಾರೆ. ಈ ಹಿಂದೆ ಹಾಲಿವುಡ್ ನಟ ರಿಚರ್ಡ್ ಗೇರ್ ಸಾರ್ವಜನಿಕವಾಗಿ ಶಿಲ್ಪಾರನ್ನು ಚುಂಬಿಸಿ ವಿವಾದವೆಬ್ಬಿಸಿದ್ದ.
''ಚುಂಬನ ಕೊಟ್ಟದ್ದು ಅವನು, ಸ್ವೀಕರಿಸಿದ್ದು ನಾನು... ನಿಮ್ಮದೇನು ತಂಟೆ'' ಎಂಬ ಧಾಟಿಯಲ್ಲಿ ಶಿಲ್ಪಾ ಶೆಟ್ಟಿ ಪ್ರತಿಕ್ರಿಯಿಸಿದ್ದರು. ಇದೀಗ ಅರ್ಚಕರೊಬ್ಬರು ಶಿಲ್ಪಾರನ್ನು ಚುಂಬಿಸಿ ಚರ್ಚೆಗೆ ಗ್ರಾಸವಾಗಿದ್ದಾರೆ. ನಾಗರಪಂಚಮಿಯಂದು ದೇಗುಲಕ್ಕೆ ಭೇಟಿ ನೀಡಿದ್ದ ಶಿಲ್ಪಾರನ್ನು ದೇಗುಲದ ಅರ್ಚಕರು ಆತ್ಮೀಯವಾಗಿ ಅಪ್ಪಿ ಕೆನ್ನೆಗೆ ಮುತ್ತು ನೀಡಿದರು.
ಘಟನೆ ನಡೆದದ್ದು ಹೀಗೆ...ಚಿತ್ರೀಕರಣವೊಂದಕ್ಕೆ ಸಂಬಂಧಿಸಿದಂತೆ ಮುಂಬೈನ ಸಖಿಗೋಪಾಲ್ ಮಂದಿರಕ್ಕೆ ಶಿಲ್ಪಾ ಭೇಟಿ ಕೋಟ್ಟಿದ್ದರು. ಪೂಜೆ ಎಲ್ಲಾ ಮುಗಿದ ಬಳಿಕ ಅರ್ಚಕರನ್ನು ಆಶೀರ್ವದಿಸುವಂತೆ ಕೇಳಿದರು. ಅರ್ಚಕರು ಶಿಲ್ಪಾರನ್ನು ಆತ್ಮೀಯವಾಗಿ ಅಪ್ಪಿ, ಕೆನ್ನೆಗೆ ಮುತ್ತುಕೊಟ್ಟು ಆಶೀರ್ವದಿಸಿದರು. ಶಿಲ್ಪಾ ಮುಖದಲ್ಲಿ ಎಂಥದೋ ಧನ್ಯತಾ ಭಾವ ಮೂಡಿತ್ತು.
ಈ ಘಟನೆಯಿಂದ ಮಂದಿರದಲ್ಲಿದ್ದ ಇತರೆ ಭಕ್ತಾದಿಗಳ ಪಿತ್ತ ನೆತ್ತಿಗೇರಿತು. '' ಚಿತ್ರೀಕರಣದ ಸಿಬ್ಬಂದಿ ತಮ್ಮ ಎಲ್ಲಾ ಸರಕು ಸರಂಜಾಮುಗಳನ್ನು ಮಂದಿರದ ಆವರಣದಲ್ಲಿ ತಂದಿಟ್ಟಿದ್ದಾರೆ. ಪಾದರಕ್ಷೆ ಸಮೇತ ಅವರೆಲ್ಲಾ ಮಂದಿರಕ್ಕೆ ಪ್ರವೇಶಿಸಿದ್ದಾರೆ. ನಮ್ಮ ಪವಿತ್ರ ಭಾವನೆಗಳಿಗೆ ಧಕ್ಕೆಯಾಗುವಂತೆ ವರ್ತಿಸಿದ್ದಾರೆ'' ಎಂದು ಭಕ್ತಾದಿಗಳು ದೂರಿದರು. ನಂತರ ಅವರೆಲ್ಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದರೆ ಶಿಲ್ಪಾ ಈ ಎಲ್ಲಾ ಆರೋಪಗಳನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)