Don't Miss!
- News Mysuru Zoo: ಬೇಸಿಗೆಯಲ್ಲೂ ಮೈಸೂರು ಮೃಗಾಲಯ ಕೂಲ್.. ಕೂಲ್! ಹೇಗೆ ಗೊತ್ತಾ?
- Technology vivo: ವಿವೋ Y200i ಸ್ಮಾರ್ಟ್ಫೋನ್ ಲಾಂಚ್! 12GB RAM.. 6000mAh ಬ್ಯಾಟರಿ
- Automobiles ಸಣ್ಣ ಕುಟುಂಬಗಳಿಗೆ ಬೆಸ್ಟ್ ಕಾರು... 5.36 ಲಕ್ಷ ರೂ. ಬೆಲೆ... 34 ಕಿ.ಮೀ ಮೈಲೇಜ್!
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗಲ್ ರಾಣಿಯ ಪ್ರಥಮ ಚುಂಬನ ಪ್ರಸಂಗ
'ಗಂಡ ಹೆಂಡತಿ' ಖ್ಯಾತಿಯ ಸಂಜನಾ ಅಲಿಯಾಸ್ ಅರ್ಚನಾ ಗಲ್ ರಾಣಿ ಮತ್ತೊಮ್ಮೆ ಸುದ್ದಿ ಮಾಡಿದ್ದಾರೆ. ಈ ಬಾರಿ ಅವರು ಕ್ರಿಕೆಟಿಗ ಶ್ರೀಶಾಂತ್ ಗೆ ಚುಂಬನ ನೀಡಿ ಸುದ್ದಿಯಾಗಿರುವುದು ವಿಶೇಷ. ಗಲ್ ರಾಣಿಗೆ ಇದು ಪ್ರಥಮ ಚುಂಬನ ಅಲ್ಲ ಅನ್ನಿಸುತ್ತದೆ. ಯಾಕೆಂದರೆ ಆಕೆಗೆ ದಂತ ಭಗ್ನವಾಗಿರುವ ಬಗ್ಗೆ ಎಲ್ಲೂ ಸುದ್ದಿಯಿಲ್ಲ.
ಗೋವಾ ತೀರದಲ್ಲಿ ಶ್ರೀಶಾಂತ್ ನನ್ನು ಅಪ್ಪಿ ಮುದ್ದಾಡಿ ಹೊಸ ವರ್ಷವನ್ನು ಗಲ್ ರಾಣಿ ಬರಮಾಡಿಕೊಂಡಿದ್ದರು. ಈ ಸಂದರ್ಭದಲ್ಲೇ ಶ್ರೀಶಾಂತ್ ನನ್ನು ಚುಂಬಿಸಿದ್ದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ ಈ ಎಲ್ಲಾ ಅಂತೆ ಕಂತೆಗಳನ್ನು ಸಂಜನಾ ನಯವಾಗಿ ತಿರಸ್ಕರಿಸಿದ್ದಾರೆ.
ಇದು ಕೇವಲ ವದಂತಿಯಷ್ಟೆ. ಕೆಲಸ ಇಲ್ಲದವರು ಮಾಡಿದ ಪುಕಾರು ಎಂದು ಸಂಜನಾ ಚುಂಬನ ಸುದ್ದಿಯನ್ನು ತಳ್ಳಿಹಾಕಿದ್ದಾರೆ. ಗೋವಾ ತೀರದಲ್ಲಿ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಶ್ರೀಶಾಂತ್ ಜತೆ ಸಂಜನಾ ಕಾಣಿಸಿಕೊಂಡಿದ್ದರು. ಆದರೆ ಚುಂಬನ, ಬಾಹುಬಂಧನ, ಆಲಿಂಗನ ಎಂತಹದ್ದು ಇಲ್ಲ ಎಂದು ಸಂಜನಾ ಹೇಳಿದ್ದಾರೆ.
''ಶ್ರೀಶಾಂತ್ ಮತ್ತು ಹೈದರಾಬಾದ್ ನ15 ಮಂದಿ ಗೆಳೆಯರೊಂದಿಗೆ ಪಾರ್ಟಿ ಮಾಡಿದ್ದು ನಿಜ. ಆದರೆ ಡಿಸೆಂಬರ್ 31ರ ರಾತ್ರಿ ನಾನು ಶ್ರೀಶಾಂತ್ ಜತೆ ಇರಲಿಲ್ಲ. ಕೆಲಸವಿಲ್ಲದವರು ಯಾರೋ ಈ ರೀತಿಯ ಸುದ್ದಿ ಹಬ್ಬಿಸಿದ್ದಾರೆ. ನಮ್ಮ ಸ್ನೇಹ ಸಂಬಂಧಕ್ಕೆ ಯಾರೋ ಹುಳಿ ಹಿಂಡುವ ಪ್ರಯತ್ನ ಮಾಡಿದ್ದಾರೆ ಅಷ್ಟೇ'' ಎಂದು ಸಂಜನಾ ಸಮಜಾಯಿಷಿ ನೀಡಿದ್ದಾರೆ.
ಈ ಹಿಂದೆ ಶ್ರೀಶಾಂತ್ ಹೆಸರಿನೊಂದಿಗೆ ಕನ್ನಡ ನಟಿ ಡೈಸಿ ಬೋಪಣ್ಣ ಹೆಸರು ಥಳುಕು ಹಾಕಿಕೊಂಡಿತ್ತು. ಇವರಿಬ್ಬರೂ ಕೇರಳದಲ್ಲಿ ಜಾಹೀರಾತು ಚಿತ್ರೀಕ್ರಣದಲ್ಲಿ ಭಾಗವಹಿಸಿದ್ದೇ ಈ ವದಂತಿಗೆ ಕಾರಣವಾಗಿತ್ತು. ಹಾಗೆಯೇ ಬಾಲಿವುಡ್ ಬೆಡಗಿ ಪ್ರಿಯಾಂಕ ಚೋಪ್ರಾ ಹೆಸರಿನೊಂದಿಗೂ ಶ್ರೀಶಾಂತ್ ಹೆಸರು ಅಂಟಿಕೊಂಡು ರಾದ್ಧಾಂತವಾಗಿತ್ತು.