Don't Miss!
- News Toilet Photo Viral: ಕಡಿಮೆ ಖರ್ಚಿನಲ್ಲಿ 'ಲೀಕೆಜ್ ಟ್ಯಾಂಕರ್'ನಿಂದ ಟಾಯ್ಲೆಟ್ ನಿರ್ಮಾಣ: ನೀವೂ ಟ್ರೈ ಮಾಡಿ
- Sports IPL 2024: ಹೈದರಾಬಾದ್-ಡೆಲ್ಲಿ ನಡುವೆ ಮೆಗಾ ಫೈಟ್; ಟಾಸ್, ಆಡುವ 11ರ ಬಳಗದ ವರದಿ
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಾವಿರ ರುಪಾಯಿ ನೋಟಿನ ಬಣ್ಣ ನಸುಗೆಂಪು ಏಕೆ?
ಸಂಜಯ್ ದತ್, ಕಂಗನಾ ರನೌತ್ ಮತ್ತು ಇರ್ಫಾನ್ ಖಾನ್ ಮುಖ್ಯಭೂಮಿಕೆಯಲ್ಲಿರುವ 'ನಾಕ್ ಔಟ್' ಚಿತ್ರಕ್ಕೆ ಸೆನ್ಸಾರ್ ಸಮಸ್ಯೆ ಎದುರಾಗಿದೆ. ಸಾಹಸ ಪ್ರಧಾನ ಈ ಚಿತ್ರದ ಟ್ರೈಲರ್ನ್ನು ಸೆನ್ಸಾರ್ ಮಂಡಳಿ ನಿಷೇಧಿಸಿದೆ. ಚಿತ್ರದಲ್ಲಿ ಸಾವಿರ ರೂಪಾಯಿ ನೋಟಿನ ಬಗ್ಗೆ ವಿವಾದಾತ್ಮಕ ಹೇಳಿಗೆ ನೀಡಿರುವುದೇ ಈ ನಿಷೇಧಕ್ಕೆ ಕಾರಣವಾಗಿದೆ.
ಚಿತ್ರದಲ್ಲಿನ ಸಂಭಾಷಣೆಯೊಂದು ಹೀಗಿದೆ. "ಸಾವಿರ ರುಪಾಯಿ ನೋಟಿನ ಬಣ್ಣ ನಸುಗೆಂಪು ಏಕೆ? ಎಂದು ಒಬ್ಬ ಪ್ರಶ್ನಿಸುತ್ತಾನೆ. ಇದಕ್ಕೆ ಇರ್ಫಾನ್ ಕೊಡುವ ಉತ್ತರ, ಶ್ರೀಸಾಮಾನ್ಯನ ಬೆವರು ಮತ್ತು ರಕ್ತದಿಂದ ಈ ನೋಟನ್ನು ತಯಾರಿಸಲಾಗಿದೆ" ಎನ್ನುತ್ತಾರೆ. ಈ ಹೇಳಿಕೆಗೆ ಸೆನ್ಸಾರ್ ಮಂಡಳಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಭಾರತೀಯ ನೋಟಿನ ಬಗ್ಗೆ ಹೀಗೆ ಹಗುರವಾಗಿ ಮಾತನಾಡುವುದು ತರವಲ್ಲ ಎಂಬುದು ಸೆನ್ಸಾರ್ ಅವರ ವಾದ. ಚಿತ್ರದಲ್ಲಿನ ವಿವಾದಾತ್ಮಕ ಸನ್ನಿವೇಶಕ್ಕೆ ಕತ್ತರಿ ಹಾಕಲು ಸೂಚಿಸಿದೆ. ಆದರೆ ಕ್ಯಾರೆ ಎನ್ನದ ಚಿತ್ರದ ನಿರ್ಮಾಪಕರು ಪರಿಷ್ಕೃತ ಸಮಿತಿಯ ಬಾಗಿಲು ತಟ್ಟಿದ್ದಾರೆ. "ಶ್ರೀಸಾಮನ್ಯನಿಗೆ ದ್ರೋಹ ಬಗೆಯುತ್ತಿರುವ ರಾಜಕಾರಣಿಗಳು ದೇಶದ ಸಂಪತ್ತನ್ನು ಲೂಟಿ ಹೊಡೆಯುತ್ತಿದ್ದಾರೆ. ಇದನ್ನೆ ನಾವು ಹೇಳಿದರೆ ಅದು ಹೇಗೆ ವಿವಾದಾತ್ಮಕವಾಗುತ್ತದೆ " ಎಂದು ಪ್ರಶ್ನಿಸಿದ್ದಾರೆ.
ಈಗಾಗಲೆ ಭಾರತೀಯ ಕರೆನ್ಸಿ ಬಗ್ಗೆ ಜಾನ್ ಅಬ್ರಹಾಂ ಅವರ 'ಆಶಾಯಿ' ಚಿತ್ರದಲ್ಲಿ ದುಡ್ಡು ಎಸೆಯುವ, ಒದೆಯುವ ಹಾಗೂ ತಲೆದಿಂಬಿನ ಕೆಳಗೆ ಇಟ್ಟುಕೊಳ್ಳುವ ಸಾಕಷ್ಟು ಸನ್ನಿವೇಶಗಳು ಬಂದಿದೆ. ಈ ಬಗ್ಗೆ ಯಾಕೆ ಸೆನ್ಸಾರ್ ಮಂಡಳಿ ಮೌನವಹಿಸಿತ್ತು. ಈ ಬಗ್ಗೆ ಯಾಕೆ ಸೆನ್ಸಾರ್ ಮಂಡಳಿ ಆಕ್ಷೇಪಿಸಲಿಲ್ಲ ಎಂದು ಚಿತ್ರದ ನಿರ್ಮಾಪಕ ಸೋಹೈಲ್ ಪ್ರಶ್ನಿಸಿದ್ದಾರೆ.