ಶಂಕರಾಚಾರ್ಯ... ಕೂಡದು ಕೂಡದು!

ಬ್ರಾಹ್ಮಣ ಮಹಾಸಭಾ ಸುಮ್ಮನಿರದೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರಿತ್ತಿದೆ. ಶಂಕರಾಚಾರ್ಯ ಅನ್ನುವ ಹೆಸರನ್ನು ಬದಲಿಸಿ ಎಂಬ ಸೂಚನೆ ಬಂದಿದ್ದೇ, ಮೂರ್ತಿ ಶಂಕರ ಪುಣ್ಯಕೋಟಿ ಅಂತ ಬದಲಿಸಿದ್ದಾರೆ. ಇದು ಅನಿವಾರ್ಯ ಬದಲಾವಣೆಯಾದರೂ ಮೂರ್ತಿ ಅದನ್ನು ಮೆಚ್ಚಿಯೇ ಇಟ್ಟಿದ್ದಾರೆ.
ಸುಮ್ಮನೆ ವಿವಾದವಾಗಿ ಈ ಸಂಗತಿಯನ್ನು ಜಗ್ಗುವುದು ಅವರಿಗೆ ಇಷ್ಟವಿರಲಿಲ್ಲವಂತೆ. ಹೆಸರು ಬದಲಿಸಿದರೇನು, ಸಿನಿಮಾ ಉದ್ದೇಶ ಹಾಗೇ ಇರುತ್ತದಲ್ಲ ಎಂಬ ಸಮಾಧಾನ ಮೂರ್ತಿಯವರಿಗೆ. ಮೇಲಾಗಿ ಈ ಹೆಸರು ಚಿತ್ರಕ್ಕೆ ಇನ್ನೂ ಚೆನ್ನಾಗಿ ಒಪ್ಪುತ್ತದೆ ಎಂದು ನಾಯಕ ಶರತ್ಬಾಬು ಸಮರ್ಥನೆಯ ಮುದ್ರೆ ಒತ್ತಿದರು. ಈಗಾಗಲೇ ಚಿತ್ರೀಕರಣ ಮುಗಿಸಿರುವ ಶಂಕರ ಪುಣ್ಯಕೋಟಿ ಡಬಿಂಗ್ ಕೆಲಸವನ್ನೂ ಮುಗಿಸುವ ಹಂತದಲ್ಲಿದೆ. ಎಲ್ಲಾ ಅಂದುಕೊಂಡಂತೆ ಆದರೆ, ಮುಂದಿನ ತಿಂಗಳ ಹೊತ್ತಿಗೆ ಮೊದಲ ಪ್ರತಿ ಕೈಗೆ ಸಿಗಲಿದೆ. ಅರ್ಚಕನೊಬ್ಬನ ಗೋಪ್ರೀತಿಯನ್ನು ಸಿನಿಮಾ ಸಾರುತ್ತದೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











