Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಲ್ಲು ನನಗೇನೂ ಮಾಡ್ಲಿಲ್ಲ-ಅನುಪ್ರಭಾಕರ್
*ದಟ್ಸ್ಕನ್ನಡ ಬ್ಯೂರೋ
‘ಓಕೆ ಸಾರ್ ಓಕೆ’ ಚಿತ್ರದ ನಾಯಕಿಯರಾದ ರಶ್ಮಿ ಹಾಗೂ ಮೋನಿಕಾ ಎನ್ನುವ ನಟಿಯರ ಮುಖಕ್ಕೆ ಆಸಿಡ್ ಎರಚುವುದಾಗಿ ಮದನ್ ಪಟೇಲ್ ಅಲಿಯಾಸ್ ಮದನ್ ಮಲ್ಲು ಎನ್ನುವ ಸುರ ಸುಂದರಾಂಗ ಹಾಗೂ ನಾಯಕ- ನಿರ್ಮಾಪಕ ಗುಟುರು ಹಾಕಿದ್ದು ಊರುಕೇರಿಗೆಲ್ಲಾ ಹಳೆಯ ಸುದ್ದಿ. ಆದರೆ ‘ಓಕೆ ಸಾರ್ ಓಕೆ’ ಚಿತ್ರದ ಇನ್ನೊಬ್ಬ ನಾಯಕಿ ಅನು ಪ್ರಭಾಕರ್ಗೆ ಮಾತ್ರ ವಿಷಯದ ಬಗ್ಗೆ ಒಂಚೂರೂ ಗೊತ್ತಿಲ್ಲ . ನಂಬಿದ್ರೆ ನಂಬಿ ಬಿಟ್ರೆ ಬಿಡಿ !
ಮೊನ್ನೆ ಚನ್ನಪಟ್ಟಣ ಸಮೀಪದ ಮಾಲೂರಿನಲ್ಲಿ ‘ಅರ್ಧಾಂಗಿ’ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಮಾತಿಗೆ ಸಿಕ್ಕಿದ ಅನು ಪ್ರಭಾಕರ್- ಮದನ್ ಅವಾಂತರಗಳ ಬಗ್ಗೆ ತಮಗೆ ಏನೇನೂ ಗೊತ್ತಿಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಮಲ್ಲು ನನ್ನ ಹತ್ತಿರ ಚೆನ್ನಾಗಿಯೇ ನಡೆದುಕೊಂಡಿದ್ದರು. 22 ದಿನ ಶೂಟಿಂಗ್ನಲ್ಲಿ ಭಾಗವಹಿಸಿದ್ದೇನೆ. ನನಗೇನೂ ತೊಂದರೆಯಾಗಿಲ್ಲ . ‘ಓಕೆ ಸಾರ್ ಓಕೆ’ ಚಿತ್ರೀಕರಣದ ದಿನಗಳನ್ನು ಖುಷಿಯಾಗಿಯೇ ಕಳೆದಿರುವೆ ಎಂದು ಅನು ನಗುನಗುತ್ತಲೇ ಹೇಳಿದರು.ಒಂದು ವೇಳೆ, ಮೋನಿಕಾ ಹಾಗೂ ರಶ್ಮಿ ಎನ್ನುವ ನಾಯಕಿಯರಿಗೆ ಮದನ್ ಮಲ್ಲು ಬೆದರಿಕೆ ಒಡ್ಡಿದ್ದರೆ ಅದು ತಪ್ಪು , ಖಂಡನಾರ್ಹ ಎಂದು ಹೇಳಲು ಅನು ಮರೆಯಲಿಲ್ಲ . ಚಿತ್ರರಂಗದಲ್ಲಿ ಶಾಂತಿ ಎನ್ನುವುದು ಬಹಳ ಮುಖ್ಯ ಎಂದು ಈ ಶಾಂತಿದೂತೆ ಹೇಳಿದರು.
ಅಂದಹಾಗೆ, ಅನು ಪ್ರಭಾಕರ್ ಇತ್ತೀಚೆಗೆ ಸ್ವಲ್ಪ ದಪ್ಪಗಾಗಿದ್ದಾರೆ.
ಮುಖಪುಟ / ಸ್ಯಾಂಡಲ್ವುಡ್