twitter
    For Quick Alerts
    ALLOW NOTIFICATIONS  
    For Daily Alerts

    ಅಯ್ಯಪ್ಪನ ಪಾದಸ್ಪರ್ಶ ಪ್ರಕರಣಕ್ಕೆ ಹೈಕೋರ್ಟ್‌ ತೆರೆ!

    By Staff
    |


    ವಿವಾದದಿಂದ ಕಂಗೆಟ್ಟಿದ ನಟಿ ಜಯಮಾಲಾಗೀಗ ಸಮಾಧಾನ

    ಬೆಂಗಳೂರು : ಅಯ್ಯಪ್ಪ ಸ್ವಾಮಿ ಪಾದಸ್ಪರ್ಶ ಪ್ರಕರಣದ ತನಿಖೆ ಪ್ರಸ್ತಾಪವನ್ನು, ಕೇರಳ ಹೈಕೋರ್ಟ್‌ ತಳ್ಳಿಹಾಕಿದೆ. ಈ ವಿಚಾರ ಕೇಳಿ; ವಿವಾದದ ಕೇಂದ್ರಬಿಂದುವಾಗಿದ್ದ ನಟಿ ಜಯಮಾಲಾ ಸಮಾಧಾನದ ನಿಟ್ಟುಸಿರುಬಿಟ್ಟಿದ್ದಾರೆ.

    ಈ ಹಿನ್ನೆಲೆಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ನ್ಯಾಯಾಲಯ ಕಡೆಗೂ ನನಗೆ ನ್ಯಾಯ ನೀಡಿದೆ. ನನ್ನನ್ನು ಕೆಲವರು ಈ ಪ್ರಕರಣದಲ್ಲಿ ಬಲಿಪಶು ಮಾಡಲು ಹುನ್ನಾರ ನಡೆಸಿದ್ದರು. ಸತ್ಯ ಹೇಳಿದ್ದೇ ತಪ್ಪೇ ಎಂದು ಅವರು ಈ ಸಂದರ್ಭದಲ್ಲಿ ಪ್ರಶ್ನಿಸಿದರು.

    ದೇವಸ್ಥಾನ ಸಮಿತಿ ಮತ್ತು ತಮ್ಮ ನಡುವಿನ ಪತ್ರ ವ್ಯವಹಾರದ ದಾಖಲೆಗಳನ್ನು ಸುದ್ದಿಗಾರರ ಮುಂದಿಟ್ಟ ಜಯಮಾಲಾ, ನಾನು ಸುಳ್ಳಿಯಲ್ಲ ಎಂದು ಒತ್ತಿಒತ್ತಿ ಹೇಳಿದರು.

    ಕೇರಳ ಕೋರ್ಟ್‌ನಲ್ಲಿ ನೆಮ್ಮದಿ : ಅಯ್ಯಪ್ಪ ದೇವಸ್ಥಾನವನ್ನು ಜಯಮಾಲಾ ಪ್ರವೇಶ ಮಾಡಿದ್ದರ ಬಗ್ಗೆ ಜಾಗೃತದಳದಿಂದ ತನಿಖೆ ನಡೆಸಬೇಕು. ಹೊಸದಾಗಿ ದೇವಪ್ರಶ್ನೆ ನಡೆಸಬೇಕು ಎಂದು ಸಲ್ಲಿಸಲಾಗಿದ್ದ ಆರು ಅರ್ಜಿಗಳನ್ನು , ಹೈಕೋರ್ಟ್‌ ತಳ್ಳಿಹಾಕಿದೆ. ದೇವಪ್ರಶ್ನೆ ಕಾನೂನು ಬದ್ಧವಾಗಿಯೇ ನಡೆದಿದೆ ಎಂದು ಅದು ಅಭಿಪ್ರಾಯಪಟ್ಟಿದೆ.

    ‘ನಟಿ ಜಯಮಾಲಾ ಅವರನ್ನು ಬಂಧಿಸಬೇಕು. ಅವರು ದೈವದ್ರೋಹಿ’ ಎಂಬ ಹೇಳಿಕೆಗಳು ಭಕ್ತರ ಸಮುದಾಯದಲ್ಲಿ ಮತ್ತು ಕೇರಳ ಸರ್ಕಾರದ ಪ್ರಮುಖರಿಂದ ಕೇಳಿಬಂದಿದ್ದವು. ಅವರ ಬಂಧನಕ್ಕೆ ಪ್ರಯತ್ನಗಳು ನಡೆದಿದ್ದವು. ಹೈಕೋರ್ಟ್‌ ನಿರ್ಧಾರ, ಈ ಪ್ರಕರಣಕ್ಕೆ ಸದ್ಯಕ್ಕೆ ತೆರೆ ಎಳೆದಿದೆ.

    (ಏಜನ್ಸೀಸ್‌)

    Post your views

    Thursday, March 28, 2024, 18:49
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X