Don't Miss!
- Automobiles KTM Duke 125 ಬೆಲೆಗೆ ಯಾವೆಲ್ಲಾ ಬೈಕ್ಗಳು ಸಿಗುತ್ತೆ ಗೊತ್ತಾ?: ಪಲ್ಸರ್ನಿಂದ ಹಿಡಿದು MT 15 ವರೆಗೆ
- News ಸಿನಿಮಾದಲ್ಲಿ ರೀಲ್ ಬಿಟ್ಟಂತೆ ರಾಜಕೀಯದಲ್ಲೂ ರೀಲ್ ಬಿಟ್ಟರೆ ಜನ ಒಪ್ಪಲ್ಲ: ಡಿ ಕೆ ಸುರೇಶ್ ಹೀಗೆ ಹೇಳಿದ್ದು ಯಾರಿಗೆ?
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Lifestyle ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- Sports IPL 2024: ಕೆಕೆಆರ್ ವಿರುದ್ಧದ ಪಂದ್ಯಕ್ಕೂ ಮುನ್ನ ಕ್ರಿಕೆಟ್ ಬಿಟ್ಟು ಆರ್ಸಿಬಿ ಆಟಗಾರರು ಮಾಡಿದ್ದೇನು?
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಯ್ಯಪ್ಪನ ಪಾದಸ್ಪರ್ಶ ಪ್ರಕರಣಕ್ಕೆ ಹೈಕೋರ್ಟ್ ತೆರೆ!
ವಿವಾದದಿಂದ
ಕಂಗೆಟ್ಟಿದ
ನಟಿ
ಜಯಮಾಲಾಗೀಗ
ಸಮಾಧಾನ
ಈ ಹಿನ್ನೆಲೆಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ನ್ಯಾಯಾಲಯ ಕಡೆಗೂ ನನಗೆ ನ್ಯಾಯ ನೀಡಿದೆ. ನನ್ನನ್ನು ಕೆಲವರು ಈ ಪ್ರಕರಣದಲ್ಲಿ ಬಲಿಪಶು ಮಾಡಲು ಹುನ್ನಾರ ನಡೆಸಿದ್ದರು. ಸತ್ಯ ಹೇಳಿದ್ದೇ ತಪ್ಪೇ ಎಂದು ಅವರು ಈ ಸಂದರ್ಭದಲ್ಲಿ ಪ್ರಶ್ನಿಸಿದರು.
ದೇವಸ್ಥಾನ ಸಮಿತಿ ಮತ್ತು ತಮ್ಮ ನಡುವಿನ ಪತ್ರ ವ್ಯವಹಾರದ ದಾಖಲೆಗಳನ್ನು ಸುದ್ದಿಗಾರರ ಮುಂದಿಟ್ಟ ಜಯಮಾಲಾ, ನಾನು ಸುಳ್ಳಿಯಲ್ಲ ಎಂದು ಒತ್ತಿಒತ್ತಿ ಹೇಳಿದರು.
ಕೇರಳ ಕೋರ್ಟ್ನಲ್ಲಿ ನೆಮ್ಮದಿ : ಅಯ್ಯಪ್ಪ ದೇವಸ್ಥಾನವನ್ನು ಜಯಮಾಲಾ ಪ್ರವೇಶ ಮಾಡಿದ್ದರ ಬಗ್ಗೆ ಜಾಗೃತದಳದಿಂದ ತನಿಖೆ ನಡೆಸಬೇಕು. ಹೊಸದಾಗಿ ದೇವಪ್ರಶ್ನೆ ನಡೆಸಬೇಕು ಎಂದು ಸಲ್ಲಿಸಲಾಗಿದ್ದ ಆರು ಅರ್ಜಿಗಳನ್ನು , ಹೈಕೋರ್ಟ್ ತಳ್ಳಿಹಾಕಿದೆ. ದೇವಪ್ರಶ್ನೆ ಕಾನೂನು ಬದ್ಧವಾಗಿಯೇ ನಡೆದಿದೆ ಎಂದು ಅದು ಅಭಿಪ್ರಾಯಪಟ್ಟಿದೆ.
‘ನಟಿ ಜಯಮಾಲಾ ಅವರನ್ನು ಬಂಧಿಸಬೇಕು. ಅವರು ದೈವದ್ರೋಹಿ’ ಎಂಬ ಹೇಳಿಕೆಗಳು ಭಕ್ತರ ಸಮುದಾಯದಲ್ಲಿ ಮತ್ತು ಕೇರಳ ಸರ್ಕಾರದ ಪ್ರಮುಖರಿಂದ ಕೇಳಿಬಂದಿದ್ದವು. ಅವರ ಬಂಧನಕ್ಕೆ ಪ್ರಯತ್ನಗಳು ನಡೆದಿದ್ದವು. ಹೈಕೋರ್ಟ್ ನಿರ್ಧಾರ, ಈ ಪ್ರಕರಣಕ್ಕೆ ಸದ್ಯಕ್ಕೆ ತೆರೆ ಎಳೆದಿದೆ.
(ಏಜನ್ಸೀಸ್)