Don't Miss!
- News Hevay Rain: ಬಿರುಗಾಳಿ ಮಳೆಗೆ ನೆಲ ಕಚ್ಚಿದ ಬಾಳೆ, ಟೊಮೆಟೊ
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Sports PBKS vs MI IPL 2024: ಪಂಜಾಬ್ ರಾಜರಿಗೆ ಮುಂಬೈ ಇಂಡಿಯನ್ಸ್ ಸವಾಲು; ಟಾಸ್ ವರದಿ, ಆಡುವ 11ರ ಬಳಗ
- Lifestyle ಊಟದ ರುಚಿ ಹೆಚ್ಚಿಸುತ್ತೆ ಚೌಳಿಕಾಯಿ ಪಲ್ಯ..! ಹೀಗೆ ಮಾಡಿ
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಲಕ್ಷ್ನಿರೈ,ಧೋನಿ ನಡುವೆ ಆ ರೀತಿಯ ಸಂಬಂಧ ಇಲ್ಲವಂತೆ!
ನನ್ನ ಮತ್ತು ಕ್ರಿಕೆಟಿಗ ಮಹೇಂದ್ರ ಸಿಂಗ್ ಧೊನಿ ನಡುವೆ ನೀವು ತಿಳಿದುಕೊಂಡಂತೆ ಯಾವುದೇ ವಿಧವಾದ ಸಂಬಂಧ ಇಲ್ಲ ಎಂದು ಬೆಳಗಾವಿ ಸುಂದರಿ ಲಕ್ಷ್ಮಿ ರೈ ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ.
ಲಕ್ಷ್ಮಿ ರೈ ಹಾಗೂ ಧೋನಿ ನಡುವೆ ಎಂಥದೋ ಅನ್ಯೋನ್ಯ ಸಂಬಂಧ ಇದೆ ಹಾಗೂ ವಾರದ ಹಿಂದೆ ಅವರಿಬ್ಬರೂ ಯಾವುದೋ ಸಮುದ್ರ ತೀರದ ಪಂಚತಾರಾ ಹೋಟೆಲ್ನಲ್ಲಿ ಕೆಲಕಾಲ ವಿಶ್ರಾಂತಿ ಸಹ ಪಡೆದಿದ್ದರು ಎಂದು ಮಾಧ್ಯಮಗಳು ಗುಸುಗುಸು ಸುದ್ದಿಗಳನ್ನು ಬಿತ್ತರಿಸಿದ್ದವು. ಹಾಗೆಯೇ ಲಕ್ಷ್ಮಿ ರೈ ಹುಟ್ಟುಹಬ್ಬಕ್ಕೆ ಧೋನಿ ಆಕೆಯ ಮನೆ ತನಕ ಹೋಗಿ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿ ಹೊತ್ತು ಮುಳುಗುವರೆಗೂ ಅವರ ಮನೆಯಲ್ಲೇ ಇದ್ದರೆಂದು ಬಂದ ಬಿಸಿಬಿಸಿ ಸುದ್ದಿ ಬಗ್ಗೆ ಲಕ್ಷ್ಮಿ ರೈ ಹೀಗೆ ಪ್ರತಿಕ್ರಿಯಿಸಿ ತಣ್ಣೀರೆರಚಿದ್ದಾರೆ.
ಚೆನ್ನೈನ ಎಂಎಸಿ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ನ ಸಾರಥಿ ಧೋನಿ ಆಡಿದ ಅಷ್ಟೂ ಆಟಗಳನ್ನು ಲಕ್ಷ್ಮಿರೈಖುದ್ದು ಬಂದು ನೋಡಿ ಧೋನಿ ಮತ್ತು ಆತನ ತಂಡವನ್ನ್ನು ಹುರಿದುಂಬಿಸಿದ್ದಾರೆ. ಕದ್ದೂ ಮುಚ್ಚಿಯಲ್ಲದಿದ್ದರೂ ಬಹಿರಂಗವಾಗಿ ಹೀಗೆ ಇವರಿಬ್ಬರನ್ನೂ ನೋಡಿದ ಮಾಧ್ಯಮಗಳ ಪಂಚೇಂದ್ರಿಯಗಳು ಸುಮ್ಮನಿರಲು ಸಾಧ್ಯವೆ? ಹಾಗಾಗಿ ಇವರಿಬ್ಬರ ನಡುವಿನ ಅನ್ಯೋನ್ಯ ಸಂಬಂಧವನ್ನು ಆಗಿಂದಾಗ್ಗೆ ವರದಿ ಮಾಡಿದವು.
ಮಾಧ್ಯಮಗಳು ಸದಾ ನನ್ನ ಬಗ್ಗೆ ಪಕ್ಷಪಾತದ ಧೋರಣೆ ತಾಳುತ್ತಿವೆ. ಮೊದಲೆಲ್ಲಾ ನನ್ನ ಹಾಗೂ ನನ್ನ ಸಹ ನಟರ ಬಗ್ಗೆ ವಿಶೇಷ ಲೇಖನಗಳನ್ನು ಪ್ರಕಟಿಸಿ ಏನೇನೋ ಸಂಬಂಧಗಳನ್ನು ಹುಟ್ಟುಹಾಕಿದ್ದವು. ಈಗ ಆ ಸ್ಥಾನದಲ್ಲಿ ಕ್ರಿಕೆಟಿಗ ಧೋನಿಯನ್ನು ತಂದು ನಿಲ್ಲಿಸಿದ್ದಾರೆ. ಈ ರೀತಿಯ ಗುಸುಗುಸು ಸುದ್ದಿಗಳು ಮಾಧ್ಯಮಗಳಿಗೆ ಹೇಗೆ ದೊರೆಯುತ್ತವೆ ಎನ್ನ್ನುವುದು ನನಗಂತೂ ಗೊತ್ತಿಲ್ಲ. ಧೋನಿಯಂತಹ ಉತ್ತಮ ಕ್ರೀಡಾಪಟುಗಳೊಂದಿಗೆ ಗೆಳೆತನ ಗಳಿಸುವುದು ತಪ್ಪಲ್ಲ. ನನ್ನಂತಹ ಕ್ರೀಡಾಭಿಮಾನಿಗೆ ಧೋನಿಯೊಂದಿಗಿನ ಗೆಳೆತನ ಹೆಮ್ಮೆಯ ವಿಚಾರ ಎಂದು ಲಕ್ಷ್ಮಿರೈ ಮಾಧ್ಯಮಗಳ ಗುಸುಗುಸು ಸುದ್ದಿಗಳಿಗೆ ಸದ್ಯಕ್ಕೆ ಬ್ರೇಕ್ ಹಾಕಿದ್ದಾರೆ.
(ದಟ್ಸ್ಕನ್ನಡ ಸಿನಿವಾರ್ತೆ)