For Quick Alerts
For Daily Alerts
Don't Miss!
- News ನಾಲ್ಕು ಗೋಡೆಗಳ ಮಧ್ಯೆ ಆಗಿರುವ ಚರ್ಚೆ ಬಹಿರಂಗವಾಗಿ ಹೇಳೋದಕ್ಕೆ ಆಗಲ್ಲ: ಎಂ.ಪಿ.ರೇಣುಕಾಚಾರ್ಯ ಹೀಗೆ ಹೇಳಿದ್ಯಾಕೆ?
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Lifestyle ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- Sports IPL 2024: ಕೆಕೆಆರ್ ವಿರುದ್ಧದ ಪಂದ್ಯಕ್ಕೂ ಮುನ್ನ ಕ್ರಿಕೆಟ್ ಬಿಟ್ಟು ಆರ್ಸಿಬಿ ಆಟಗಾರರು ಮಾಡಿದ್ದೇನು?
- Automobiles Hyundai Creta: ಜನಪ್ರಿಯ ಹ್ಯುಂಡೈ ಕ್ರೆಟಾ ಕಾರನ್ನು ಮನೆಗೆ ತರಬೇಕೇ.. ಆನ್-ರೋಡ್ ಬೆಲೆ ಎಷ್ಟು? EMI ಏನು?
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಭಟ್ಟರ ಮೇಲೆ ರಾಕ್ಲೈನ್ ಮುನಿಸು ಹೊಸದಲ್ಲ
Gossips
oi-Staff
By Staff
|
ಮುಂಗಾರುಮಳೆ ನಂತರ ಭಟ್ಟರು ರಾಕ್ಲೈನ್ಗೆ ಸಿನಿಮಾ ಮಾಡಿಕೊಡಬೇಕಿತ್ತು. ಆದರೆ ಅವರು ಹಾರಿಸಿದ್ದು ಗಾಳಿಪಟ. ಆಡಿದ ಮಾತಿನಂತೆ ತಮ್ಮ ಸಿನಿಮಾ ಮುಗಿಸದೆ ಗಾಳಿಪಟ ಮಾಡಕೂಡದು ಎಂದು ರಾಕ್ಲೈನ್ ಆಗ ಪಟ್ಟು ಹಿಡಿದಿದ್ದರು. ನಿರ್ದೇಶಕರ ಸಂಘ ಇಬ್ಬರನ್ನೂ ಕೂರಿಸಿಕೊಂಡು ಮಾತನಾಡಿ ತಾತ್ಕಾಲಿಕ ಪರಿಹಾರ ಹೇಳಿತ್ತು. ಅದರಂತೆ ಗಾಳಿಪಟ ಮುಗಿಸಿದ ಮೇಲೆ ರಾಕ್ಲೈನ್ ಸಿನಿಮಾ ಮಾಡಿಕೊಡಬೇಕು ಎಂದು ಮಾತಾಗಿತ್ತು.
ತಿಂಗಳುಗಟ್ಟಲೆ ಕೂತು ಸ್ಕ್ರಿಪ್ಟ್ ಮಾಡಿದ ಮೇಲೆ ಈಗ ಯೋಗರಾಜ ಭಟ್ಟರಿಗೆ ರಾಕ್ಲೈನ್ ತಾರತಮ್ಯ ಮಾಡಿದ್ದಾರೆ. ಬಜೆಟ್ ಎಂಟ್ಹತ್ತು ಕೋಟಿ ಜಾಸ್ತಿಯಾಯಿತು ಅನ್ನೋದು ಅವರ ಸಬೂಬು. ಮೇಲುನೋಟಕ್ಕೆ ಈ ಕಾರಣ ಎದ್ದುಕಾಣುತ್ತಿದ್ದರೂ ರಾಕ್ಲೈನ್ ಬೇಕೆಂದೇ ಭಟ್ಟರ ವಿರುದ್ಧ ಸೇಡುತೀರಿಸಿಕೊಳ್ಳಲೇ ಹೀಗೆ ಮಾಡಿದ್ದಾರೆ. ಗಾಂಧಿನಗರದ ಮಂದಿ ದ್ವೇಷಕ್ಕಾಗಿ ಒಂದಷ್ಟು ದುಡ್ಡು ಕಳೆದುಕೊಳ್ಳಲೂ ಸಿದ್ಧ ಎಂದೂ ಕೆಲವರು ಪಿಸುನುಡಿಯುತ್ತಿದ್ದಾರೆ. ಒಂದು ಅತಿ ನಿರೀಕ್ಷಿತ ಚಿತ್ರಕ್ಕೆ ಕನ್ನಡದಲ್ಲಿ ಇತ್ತೀಚೆಗೆ ಈ ಗತಿಯಂತೂ ಬಂದಿರಲಿಲ್ಲ.
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Story first published: Sunday, December 7, 2008, 15:23 [IST]
Other articles published on Dec 7, 2008