twitter
    For Quick Alerts
    ALLOW NOTIFICATIONS  
    For Daily Alerts

    ಜಯಮಾಲಾ ಬಂಧನ : ಕೇರಳ ವಿಧಾನಸಭೆ ನಿರ್ಣಯ

    By Staff
    |


    ವಿಚಾರಣೆಗೆ ಕ್ಷಣಗಣನೆ, ಕರ್ನಾಟಕದಲ್ಲಿ ಪ್ರಗತಿಪರ ಸಂಘಟನೆಗಳಿಂದ ವ್ಯಾಪಕ ವಿರೋಧ.

    ತಿರುವನಂತಪುರಂ : ಶಬರಿಮಲೆ ಅಯ್ಯಪ್ಪ ಸ್ವಾಮಿಯ ಪಾದಸ್ಪರ್ಶ ಮಾಡಿರುವುದಾಗಿ ಹೇಳಿದ್ದ ಕನ್ನಡ ಚಿತ್ರನಟಿ ಜಯಮಾಲಾರನ್ನು ಬಂಧಿಸಿ, ವಿಚಾರಣೆಗೊಳಪಡಿಸಬೇಕೆಂದು ಕೇರಳ ವಿಧಾನಸಭೆ ನಿರ್ಧರಿಸಿದೆ.

    ವಿಧಾನಸಭೆಯಲ್ಲಿ ಈ ಕುರಿತು ವಿಷಯ ಪ್ರಸ್ತಾಪಗೊಂಡಿತು. ಜಯಮಾಲಾ ಬಂಧನಕ್ಕೆ ಸರ್ವಸಮ್ಮತ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ನಿರ್ಣಯವೊಂದನ್ನು ಅಂಗೀಕರಿಸಲಾಯಿತು.

    ಕರ್ನಾಟಕದಲ್ಲಿ ತಳಮಳ : ಜಯಮಾಲಾರನ್ನು ಬಂಧಿಸಿ ವಿಚಾರಣೆಗೊಳಪಡಿಸಲು, ಕೇರಳ ಪೊಲೀಸರು ಯಾವುದೇ ಕ್ಷಣ ಬೆಂಗಳೂರಿಗೆ ಆಗಮಿಸುವ ನಿರೀಕ್ಷೆ ಇದೆ. ಈ ಮೊದಲು ಜಯಮಾಲಾರಿಂದ ಮಾಹಿತಿ ಪಡೆಯಲು ಬಂದಿದ್ದ ಕೇರಳ ಪೊಲೀಸರ ತಂಡ ಬರಿಗೈಯಿಂದ ತೆರಳಿದ್ದನ್ನು ಇಲ್ಲಿ ಸ್ಮರಿಸಬಹುದು.

    ಜಯಮಾಲಾ ಪಾದಸ್ಪರ್ಶ ಮಾಡಿದ್ದಾರೋ, ಬಿಟ್ಟಿದ್ದಾರೋ ಎನ್ನುವುದನ್ನು ಅವರ ಆತ್ಮಸಾಕ್ಷಿಗೆ ಬಿಡೋಣ. ಆದರೆ ಈ ಪ್ರಕರಣದಿಂದ ಧಾರ್ಮಿಕ ಸಮಾನತೆ, ಲಿಂಗಸಮಾನತೆ, ಅಭಿವ್ಯಕ್ತಿ ಸ್ವಾತಂತ್ರ್ಯ ಸೇರಿದಂತೆ ಪ್ರಜಾಪ್ರಭುತ್ವಕ್ಕೇ ಸಂಚಕಾರ ಬಂದಂತಾಗಿದೆ ಎಂದು ಪ್ರಗತಿಪರ ಸಂಘಟನೆಗಳು ಹೇಳಿವೆ.

    (ಏಜನ್ಸೀಸ್‌)

    Post your views

    ಪಾದಸ್ಪರ್ಶ ಪ್ರಕರಣದ ಸುತ್ತ :
    ಅಯ್ಯಪ್ಪ ಕ್ಷಮಿಸಪ್ಪ.. ಜಯಮಾಲಾರ ಪ್ರಾಯಶ್ಚಿತ್ತ ಪೂಜೆ
    ಜಯಮಾಲಾ ಸುಳ್ಳಿಯಾ? : ಕೇರಳ ಪೊಲೀಸರಿಂದ ವಿಚಾರಣೆ
    ಬ್ರಹ್ಮಚಾರಿ ದೇವರು ಅಯ್ಯಪ್ಪನಿಗೆ ಜಯಮಾಲಾರಿಂದ ಅಪಚಾರ?

    Thursday, March 28, 2024, 18:20
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X