Don't Miss!
- Technology Earbuds: 2000 ರೂ. ಒಳಗೆ ಲಭ್ಯ ಇರುವ ಅತ್ಯುತ್ತಮ ಇಯರ್ಬಡ್ಸ್! ಸಖತ್ ಫೀಚರ್ಸ್...
- Finance mukesh ambaniಗೆ 67 ವರ್ಷ, ಅವರು ಹೊಂದಿರುವ ದುಬಾರಿ ವಸ್ತುಗಳು ಏನೇನು ಗೊತ್ತಾ?
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪತ್ರಕರ್ತರ ಮೇಲೆ ಪ್ರಜ್ವಲ್ ದೇವರಾಜ್ ಪ್ರತಾಪ!
ಆತನನ್ನು ಮಾತಾಡಿಸಿರುವ ಇಂಗ್ಲಿಷ್ ಪತ್ರಕರ್ತೆ ಕೂಡ ಈ ಸಿನಿಮಾ ನೋಡಿದ್ದರು. ತಮಗೂ ಅನ್ವಯಿಸಿ ಪ್ರಜ್ವಲ್ ಈ ಮಾತು ಹೇಳುತ್ತಿದ್ದಾನೆ ಅನ್ನುವ ಪ್ರಜ್ಞೆಯೂ ಇಲ್ಲದೆ ಅವರು ಅವನು ಹೇಳಿದ್ದನ್ನೆಲ್ಲ ಗಿಳಿಪಾಠದಂತೆ ಬರೆದಿದ್ದಾರೆ. ಪತ್ರಿಕೆಯ ಸಂಪಾದಕರು ಸಣ್ಣ ಯೋಚನೆಯನ್ನೂ ಮಾಡದೆ ಅದನ್ನು ಅಚ್ಚುಮಾಡಿದ್ದಾರೆ. ಇದು ಇಂದಿನ ಪತ್ರಿಕೋದ್ಯಮದ ಧೋರಣೆ ಹಾಗೂ ಸಿನಿಮಾ ನಾಯಕರ ದುರಹಂಕಾರಕ್ಕೆ ಉದಾಹರಣೆ.
ಪ್ರಜ್ವಲ್ ಈ ಮಾತನ್ನು ಹೇಳಿದ್ದು 'ಗುಲಾಮ" ಚಿತ್ರದ ಕುರಿತು. ಲಾಂಗು, ಮಚ್ಚು ಹಿಡಿಯುವ ಪಾತ್ರ ಪ್ರಜ್ವಲ್ಗೆ ಒಗ್ಗುವುದಿಲ್ಲ ಎಂದು ಅನೇಕ ಪತ್ರಿಕೆಗಳು ವಿಮರ್ಶೆ ಮಾಡಿದ್ದವು. ಅದನ್ನು ನೋಡಿ ಬುದ್ಧಿ ಮಾಗದ ಪ್ರಜ್ವಲ್ಗೆ ಸಿಟ್ಟು ಬಂದಿರಲಿಕ್ಕೆ ಸಾಕು. ಅದನ್ನು ಕಾರಿಕೊಳ್ಳಲು ಅವರಿಗೆ ಇನ್ನೊಂದು ಪತ್ರಿಕೆಯಲ್ಲೇ ಜಾಗ ಸಿಗುತ್ತದೆ. ಇದು ಪರಿಸ್ಥಿತಿಯ ವ್ಯಂಗ್ಯ.
'ಗುಲಾಮ" ಚಿತ್ರ ಬೆಂಗಳೂರಿನ ಕಪಾಲಿ ಚಿತ್ರಮಂದಿರದಲ್ಲಿ ತೆವಳುತ್ತಿದೆ. ಶುಕ್ರವಾರ (ಜ.9) ಬೆಳಗಿನ ಆಟಕ್ಕೆ ಬಾಲ್ಕನಿಗೆ ಬಿಕರಿಯಾದ ಟಿಕೆಟ್ಗಳು ಬರೀ 23! ಸಿನಿಮಾ ಉದ್ದವಾಯಿತು ಅನ್ನುವ ಕಾರಣಕ್ಕೆ ಇಪ್ಪತ್ತು ನಿಮಿಷ ಕತ್ತರಿಸಿ, ಆಲ್ಟರ್ ಮಾಡಲಾಗಿದೆ. ಹಾಗಿದ್ದೂ ಯಾರೊಬ್ಬರೂ ಸಿನಿಮಾ ಮೂಸುತ್ತಿಲ್ಲ.
ವಿಮರ್ಶೆ: ಮಚ್ಚು ಲಾಂಗು ಸಂಗಮ ಗುಲಾಮ!
ಬಿಯಾಂಕ ದೇಸಾಯಿ ಚಿತ್ರಪಟ