Don't Miss!
- Technology ಇಂದು ಮತ್ತೆ ಮೊಟೊರೊಲಾ ಎಡ್ಜ್ 50 ಪ್ರೊ ಫೋನಿನ ಸ್ಪೆಷಲ್ ಸೇಲ್!..ಡಿಸ್ಕೌಂಟ್ ಎಷ್ಟು?
- News ಐತಿಹಾಸಿಕ ಪ್ರಸಿದ್ಧ ವದ್ದಿಕೆರೆ ಸಿದ್ದಪ್ಪನ ಬಗ್ಗೆ ನಿಮಗೆಷ್ಟು ಗೊತ್ತು?-ಇಲ್ಲಿದೆ ಸಂಪೂರ್ಣ ವಿವರ
- Sports PBKS vs MI IPL 2024: ಮತ್ತೊಮ್ಮೆ ಕೊನೆಯ ಓವರ್ನಲ್ಲಿ ಮುಗ್ಗರಿಸಿದ ಪಂಜಾಬ್ ಕಿಂಗ್ಸ್ ಪ್ಲೇಆಫ್ ಸನ್ನಿವೇಶ ಹೇಗಿದೆ?
- Finance ಕಚ್ಚಾ ತೈಲ ಆಮದು ಗಣನೀಯ ಇಳಿಕೆ, ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚಾಗುತ್ತಾ?
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪತ್ರಕರ್ತರ ಮೇಲೆ ಪ್ರಜ್ವಲ್ ದೇವರಾಜ್ ಪ್ರತಾಪ!
ಆತನನ್ನು ಮಾತಾಡಿಸಿರುವ ಇಂಗ್ಲಿಷ್ ಪತ್ರಕರ್ತೆ ಕೂಡ ಈ ಸಿನಿಮಾ ನೋಡಿದ್ದರು. ತಮಗೂ ಅನ್ವಯಿಸಿ ಪ್ರಜ್ವಲ್ ಈ ಮಾತು ಹೇಳುತ್ತಿದ್ದಾನೆ ಅನ್ನುವ ಪ್ರಜ್ಞೆಯೂ ಇಲ್ಲದೆ ಅವರು ಅವನು ಹೇಳಿದ್ದನ್ನೆಲ್ಲ ಗಿಳಿಪಾಠದಂತೆ ಬರೆದಿದ್ದಾರೆ. ಪತ್ರಿಕೆಯ ಸಂಪಾದಕರು ಸಣ್ಣ ಯೋಚನೆಯನ್ನೂ ಮಾಡದೆ ಅದನ್ನು ಅಚ್ಚುಮಾಡಿದ್ದಾರೆ. ಇದು ಇಂದಿನ ಪತ್ರಿಕೋದ್ಯಮದ ಧೋರಣೆ ಹಾಗೂ ಸಿನಿಮಾ ನಾಯಕರ ದುರಹಂಕಾರಕ್ಕೆ ಉದಾಹರಣೆ.
ಪ್ರಜ್ವಲ್ ಈ ಮಾತನ್ನು ಹೇಳಿದ್ದು 'ಗುಲಾಮ" ಚಿತ್ರದ ಕುರಿತು. ಲಾಂಗು, ಮಚ್ಚು ಹಿಡಿಯುವ ಪಾತ್ರ ಪ್ರಜ್ವಲ್ಗೆ ಒಗ್ಗುವುದಿಲ್ಲ ಎಂದು ಅನೇಕ ಪತ್ರಿಕೆಗಳು ವಿಮರ್ಶೆ ಮಾಡಿದ್ದವು. ಅದನ್ನು ನೋಡಿ ಬುದ್ಧಿ ಮಾಗದ ಪ್ರಜ್ವಲ್ಗೆ ಸಿಟ್ಟು ಬಂದಿರಲಿಕ್ಕೆ ಸಾಕು. ಅದನ್ನು ಕಾರಿಕೊಳ್ಳಲು ಅವರಿಗೆ ಇನ್ನೊಂದು ಪತ್ರಿಕೆಯಲ್ಲೇ ಜಾಗ ಸಿಗುತ್ತದೆ. ಇದು ಪರಿಸ್ಥಿತಿಯ ವ್ಯಂಗ್ಯ.
'ಗುಲಾಮ" ಚಿತ್ರ ಬೆಂಗಳೂರಿನ ಕಪಾಲಿ ಚಿತ್ರಮಂದಿರದಲ್ಲಿ ತೆವಳುತ್ತಿದೆ. ಶುಕ್ರವಾರ (ಜ.9) ಬೆಳಗಿನ ಆಟಕ್ಕೆ ಬಾಲ್ಕನಿಗೆ ಬಿಕರಿಯಾದ ಟಿಕೆಟ್ಗಳು ಬರೀ 23! ಸಿನಿಮಾ ಉದ್ದವಾಯಿತು ಅನ್ನುವ ಕಾರಣಕ್ಕೆ ಇಪ್ಪತ್ತು ನಿಮಿಷ ಕತ್ತರಿಸಿ, ಆಲ್ಟರ್ ಮಾಡಲಾಗಿದೆ. ಹಾಗಿದ್ದೂ ಯಾರೊಬ್ಬರೂ ಸಿನಿಮಾ ಮೂಸುತ್ತಿಲ್ಲ.
ವಿಮರ್ಶೆ: ಮಚ್ಚು ಲಾಂಗು ಸಂಗಮ ಗುಲಾಮ!
ಬಿಯಾಂಕ ದೇಸಾಯಿ ಚಿತ್ರಪಟ