Don't Miss!
- News Soumya Reddy in Tirupati:ಸೌಮ್ಯ ರೆಡ್ಡಿ ಫೋಟೋ ಹಿಡಿದು ತಿರುಪತಿ ದೇವಸ್ಥಾನದ ಮುಂದೆ ಫೋಸ್ ಕೊಟ್ಟ ಭಕ್ತ!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Automobiles ಬೈಕಿನಂತೆ ಮೈಲೇಜ್ ಕೊಡೋದ್ರಿಂದ ಈ ಹ್ಯುಂಡೈ ಕಾರಿನ ಮಾಲೀಕರು ಫುಲ್ ಖುಷ್
- Sports LSG vs CSK IPL 2024: ಐಪಿಎಲ್ನಲ್ಲಿ ಇತಿಹಾಸ ಸೃಷ್ಟಿಸಿದ ಎಂಎಸ್ ಧೋನಿ
- Technology Samsung: ಭಾರತದಲ್ಲಿ ಹೊಸ ವೇರಿಯಂಟ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ F15 5G! ಬೆಲೆ ಎಷ್ಟು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
‘ಕ್ರೆೃಂಸ್ಟೋರಿ-ಕ್ರೆೃಂಡೈರಿ ನಿಲ್ಲಿಸಿ, ನಿಷೇಧಿಸಿ’
- ಪ್ರಕಾಶ್, ಮೈಸೂರು
ಹಾಗೆಂದವರು ಎಸ್.ಗುರುಸ್ವಾಮಿ, ರಾಜ್ಯ ಪೊಲೀಸ್ ಸಂಘದ ಉಪಾಧ್ಯಕ್ಷ . ಮೈಸೂರಿನಲ್ಲಿ ಜುಲೈ 8ರ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಗುರುಸ್ವಾಮಿ ಅಪರಾಧ ಆಧಾರಿತ ಧಾರಾವಾಹಿಗಳ ಬಗ್ಗೆ ಕೆಂಡಾಮಂಡಲ ಕೋಪ ಪ್ರದರ್ಶಿಸಿದರು. ಈಟೀವಿಯಲ್ಲಿ ಪ್ರಸಾರವಾಗುವ ರವಿ ಬೆಳಗೆರೆ ನೇತೃತ್ವದ ‘ಕ್ರೆೃಂಡೈರಿ’ ಹಾಗೂ ಉದಯ ಟೀವಿಯಲ್ಲಿನ ಬಾಲಕೃಷ್ಣ ಕಾಕತ್ಕರ್ ಸಾರಥ್ಯದ ‘ಕ್ರೆೃಂಸ್ಟೋರಿ’ ಧಾರಾವಾಹಿಗಳನ್ನು ತಕ್ಷಣ ನಿಲ್ಲಿಸಬೇಕು, ನಿಷೇಧಿಸಬೇಕು ಎನ್ನುವುದು ಅವರ ಆಗ್ರಹ.
ಅಂದಹಾಗೆ, ಕ್ರೆೃಂ ಆಧಾರಿತ ಧಾರಾವಾಹಿಗಳು ಮಾಡಿದ ಪಾಪವಾದರೂ ಏನು ? ಗುರುಸ್ವಾಮಿ ಅವರ ಸಿಟ್ಟಿಗೆ ಮೂಲವಾದರೂ ಯಾವುದು ?
ಗುರುಸ್ವಾಮಿ ಹೇಳುತ್ತಾರೆ ಕೇಳಿ :
ಅಪರಾಧದ ಘಟನೆಗಳ ಬಗೆಗಿನ ಮಾಹಿತಿಗಳನ್ನು ಪೊಲೀಸರಿಂದಲೇ ಧಾರಾವಾಹಿ ತಂಡ ಪಡೆಯುತ್ತದೆ. ಆದರೆ ಆನಂತರದ ಕಥೆಯೇ ಬೇರೆ. ಘಟನೆಗಳಿಗೆ ಪೊಲೀಸರನ್ನೇ ಹೊಣೆ ಮಾಡಲಾಗಿರುತ್ತದೆ. ಪೊಲೀಸ್ ಇಲಾಖೆಯ ವಿರುದ್ಧ ಆರೋಪಗಳ ಸರಮಾಲೆಯನ್ನೇ ಹೊರಿಸಲಾಗಿರುತ್ತದೆ. ಪೊಲೀಸ್ ಇಲಾಖೆಯ ನೆರವು ಪಡೆವ ಕ್ರೆೃಂಡೈರಿ-ಸ್ಟೋರಿ ಧಾರಾವಾಹಿಗಳು, ಇಲಾಖೆಯನ್ನೇ ಅವಮಾನಿಸುತ್ತವೆ.
ಇಷ್ಟೇ ಅಲ್ಲ . ಯುವಜನತೆಯ ಮೇಲೆ ಈ ಧಾರಾವಾಹಿಗಳು ಋಣಾತ್ಮಕ ಪರಿಣಾಮ ಬೀರುತ್ತವೆ. ಅಪರಾಧಗಳ ಬಗ್ಗೆ ಸಮಾಜಘಾತಕರಿಗೆ ಹೊಸ ಐಡಿಯಾಗಳನ್ನು ನೀಡಿ, ದುಷ್ಕೃತ್ಯಗಳಿಗೆ ಪ್ರಚೋದಿಸುತ್ತವೆ. ಈ ಟ್ರೆಂಡ್ ಸಾಮಾಜಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡುವಂತಿದೆ ಎಂದು ಗುರುಸ್ವಾಮಿ ಆರೋಪಿಸಿದರು.
ಗುರುಸ್ವಾಮಿ ಹೇಳೋದು ಇಷ್ಟೇ- ಈ ಧಾರಾವಾಹಿಗಳ ನೋಡಿ ಉದ್ಧಾರವಾದವರಿಲ್ಲ ! ಆದರೆ ತಮಾಷೆ ನೋಡಿ- ಕ್ರೆೃಂಡೈರಿ ಹಾಗೂ ಕ್ರೆೃಂ ಸ್ಟೋರಿ ಟಿಆರ್ಪಿ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಜನರ ಅಭಿರುಚಿ ಎತ್ತ ಸಾಗುತ್ತಿದೆ ನೋಡಿದಿರಾ ?
ಮುಖಪುಟ / ಸ್ಯಾಂಡಲ್ವುಡ್