Don't Miss!
- Automobiles Elevate: ಶ್ರೀಸಾಮಾನ್ಯನ ಬಿಎಂಡಬ್ಲ್ಯೂ.. ಹೋಂಡಾ ಎಲಿವೇಟ್ ಖರೀದಿಸಬೇಕೇ? ಆನ್-ರೋಡ್ ಬೆಲೆ ಎಷ್ಟು, EMI ಏನು?
- Finance ಆಪ್ ಸ್ಟೋರ್ನಿಂದ ವಾಟ್ಸಾಪ್, ಥ್ರೆಡ್ ತೆಗೆದುಹಾಕಿದ ಆಪಲ್!
- Sports IPL 2024: ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದರೂ ಹಾರ್ದಿಕ್ ಪಾಂಡ್ಯಗೆ ಭಾರೀ ಮೊತ್ತದ ದಂಡ!
- Technology Google Maps: ಗೂಗಲ್ ಮ್ಯಾಪ್ಸ್ ನಲ್ಲಿ ಹೊಸ ಸೌಲಭ್ಯ! ಹತ್ತಿರದ EV ಚಾರ್ಜಿಂಗ್ ಸ್ಟೇಷನ್ ಸರ್ಚ್ ಬಲು ಸುಲಭ
- News BMRCL: ಚಲ್ಲಘಟ್ಟ ಮೆಟ್ರೋ ನಿಲ್ದಾಣದ ಬಳಿ ಪಾದಚಾರಿ ಸೇತುವೆ ನಿರ್ಮಾಣ-ಪ್ರಯೋಜನೆಗಳೇನು ಹಾಗೂ ವೆಚ್ಚ ಎಷ್ಟು?
- Lifestyle ಶಾಲೆಯನ್ನೇ ಬ್ಯೂಟಿ ಪಾರ್ಲರ್ ಮಾಡಿಕೊಂಡ ಪ್ರಿನ್ಸಿಪಾಲ್..! ಕೇಳಿದ ಶಿಕ್ಷಕಿ ಕೈ ಕಚ್ಚಿ ಹಲ್ಲೆ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗಣೇಶ್ ತಮ್ಮ ಮಹೇಶ್ ನಾಪತ್ತೆಯಾಗಿದ್ದಾರೆಯೇ?
ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಮಹೇಶ್ ನಾಪತ್ತೆಯಾಗಿದ್ದಾರೆ. ಹೀಗೊಂದು ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಎಂಟು ವರ್ಷದಿಂದ ಪ್ರೀತಿಸುತ್ತಿದ್ದ ಹುಡುಗಿ ವನಜಾಳೊಂದಿಗೆ ನಾಳೆ, ಮಾರ್ಚ್ 2, 2012ರಂದು ನಿಗದಿಯಾಗಿದ್ದ ಮದುವೆಯನ್ನು ತಪ್ಪಿಸಿಕೊಂಡು, ಹೊಸ ಹುಡುಗಿ ಸೌಮ್ಯಳೊಂದಿಗೆ ಮದುವೆ ಮಾಡಿಕೊಂಡು ನಾಪತ್ತೆಯಾಗಿದ್ದಾರೆಂಬ ಸುದ್ದಿ ನಿನ್ನೆಯಿಂದ ಕೇಳಿಬರುತ್ತಿದೆ.
ಮಹೇಶ್ ಅಪ್ಪ-ಅಮ್ಮ ಕೂಡ ನಾಪತ್ತೆಯಾಗಿದ್ದಾರೆ ಎಂಬ ಮಾತೂ ಕೇಳಿಬರುತ್ತಿದೆ. ಆದರೆ ಅವರು ನಾಪತ್ತೆಯಾಗಿಲ್ಲ, ಬದಲಿಗೆ ಶಿರಡಿಗೆ ಹೋಗಿದ್ದಾರೆ, ಇನ್ನೊಂದು ದಿನದಲ್ಲಿ ವಾಪಸ್ಸಾಗಲಿದ್ದಾರೆ ಎಂಬ ಮಾಹಿತಿ ಕೂಡ ಬಂದಿದೆ. ಮದುವೆಯಾಗಿ ಬರಲು ಅಪ್ಪ-ಅಮ್ಮನೊಂದಿಗೇ ಮಹೇಶ್ ಕೂಡ ಶಿರಡಿಗೆ ಹೋಗಿದ್ದಾರೆ ಎಂಬ ವರದಿ ಕೂಡ ಜಾರಿಯಲ್ಲಿದೆ.
ಯಡಿಯೂರು ಸಿದ್ಧಲಿಂಗೇಶ್ವರ ದೇವಸ್ಥಾನದಲ್ಲಿ ಹಾರ ಬದಲಾವಣೆ ಮೂಲಕ ಸರಳ ವಿವಾಹ ಮಾಡಿಕೊಂಡು ಎಲ್ಲಿಗೋ ಹೋಗಿದ್ದಾರಂತೆ ಮಹೇಶ್ ಮತ್ತು ಸೌಮ್ಯ. ಅದೇ ದೇವಸ್ಥಾನದಲ್ಲಿ ನಾಳೆ ಪ್ರೀತಿಸಿದ ಹುಡುಗಿ ಸೌಮ್ಯಳೊಂದಿಗೆ ನಿಶ್ಚಯವಾಗಿದ್ದ ಮದುವೆ ಮಹೇಶ್ ಗೆ ಇಷ್ಟವಿರಲಿಲ್ಲವಂತೆ. ಹಾಗಾಗಿ ಹೀಗಾಗಿದೆಯೆಂಬ ವದಂತಿ ಹಬ್ಬಿದೆ.
ಗಣೇಶ್ ತಮ್ಮ ಮಹೇಶ್ ಇದೀಗ ಬಿಡುಗಡೆಗೆ ಸಿದ್ಧವಾಗಿರುವ 'ಅಲೆಮಾರಿ' ಚಿತ್ರದಲ್ಲಿ ನಟಿಸಬೇಕಾಗಿತ್ತು. ಗಜೇಂದ್ರ ಎನ್ನುವವರು ಅದನ್ನು ನಿರ್ಮಾಣ ಮಾಡಬೇಕಾಗಿತ್ತು. ಮುಹೂರ್ತದ ನಂತರ ಅದೇನೇನೋ ಬೆಳವಣಿಗೆಗಳಾಗಿ ಮಹೇಶ್ ಆ ಚಿತ್ರದಿಂದ ಹೊರಬಂದರು. ಆ ಚಿತ್ರ ಲೂಸ್ ಮಾದ ಯೋಗೇಶ್ ಪಾಲಾಗಿದೆ. ಒಟ್ಟಿನಲ್ಲಿ ಗಣೇಶ್ ತಮ್ಮ ಮಹೇಶ್ ಕಥೆ ಏನಾಗಿದೆ ಎಂಬ ಸತ್ಯ ಸಂಗತಿ ಇನ್ನಷ್ಟೇ ಬೆಳಕಿಗೆ ಬರಬೇಕಾಗಿದೆ. (ಒನ್ ಇಂಡಿಯಾ ಕನ್ನಡ)