Don't Miss!
- News RCB: ಆರ್ಸಿಬಿ ಫ್ರಾಂಚೈಸ್ನಿಂದ ಬೆಂಗಳೂರಿನ ಮೂರು ಕೆರೆಗಳ ಪುನಶ್ಚೇತನ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Lifestyle ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದರ್ಶನ್ ಜೀವನದ ಕಥೆಗೆ ಹೊಸ ಕ್ಯಾರೆಕ್ಟರ್ ಎಂಟ್ರಿ
ಇಷ್ಟು ವರ್ಷಗಳ ಕಾಲ ಸುದ್ದಿಯಲ್ಲಿಯೇ ಇಲ್ಲದಿದ್ದ ವಿಜಯಲಕ್ಷ್ಮಿ ಅವರ ಅಣ್ಣನ ಹೆಂಡತಿ ಶ್ರೀಲಕ್ಷ್ಮಿ ಮಾತಿನ ಲಾಂಗ್ ಝಳಪಿಸುತ್ತ ವಿಜಯಲಕ್ಷ್ಮಿ ಮತ್ತು ಮನೆಯವರ ವಿರುದ್ಧ ಕಾದಾಟಕ್ಕಿಳಿದಿದ್ದಾರೆ. ದರ್ಶನ್ ರಿಂದ ಸಖತ್ತು ಹೊಡೆತ ತಿಂದು ಏನೂ ಆಗೇ ಇಲ್ಲ ಎಂದು ಹೇಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಜಯಲಕ್ಷ್ಮಿ ಗಾಯದ ಮೇಲೆ ಬರೆ ಎಳೆದಿದ್ದಾರೆ ಶ್ರೀಲಕ್ಷ್ಮಿ.
ಈ ಶ್ರೀಲಕ್ಷ್ಮಿ ಯಾರೆಂದರೆ, ವಿಜಯಲಕ್ಷ್ಮಿ ಅವರ ಅಣ್ಣ ವಾಸುದೇವ ಅವರ ಹೆಂಡತಿ. ಇವರಿಬ್ಬರಿಗೂ 10 ವರ್ಷಗಳ ಹಿಂದೆ ಮದುವೆಯಾಗಿತ್ತು. ಮದುವೆಯಾದ ಒಂದೇ ವರ್ಷದಲ್ಲಿ ಗಂಡ ಹೆಂಡತಿ ಬೇರೇಬೇರೆಯಾದರು. ಇದಕ್ಕೆ ಕಾರಣ ವಿಲಕ್ಷಣ ಮನಸ್ಸಿನ ವಾಸುದೇವ, ಅವರ ತಾಯಿ ಮತ್ತು ವಿಜಯಲಕ್ಷ್ಮಿ ಎಂಬುದು ಶ್ರೀಲಕ್ಷ್ಮಿಯ ಆರೋಪ.
9 ವರ್ಷಗಳ ಕಾಲ ಸುಮ್ಮನಿದ್ದ ಶ್ರೀಲಕ್ಷ್ಮಿ ಅವರು ದರ್ಶನ್ ಮತ್ತು ವಿಜಯಲಕ್ಷ್ಮಿ ಕಥೆ ಬೀದಿಗೆ ಬೀಳುತ್ತಿದ್ದಂತೆ, ಮಹಿಳಾ ಸಂಘಟನೆಗಳ ಸಹಾಯದೊಂದಿಗೆ ರಣರಂಗಕ್ಕಿಳಿದಿದ್ದಾರೆ. ನನಗೂ ವಿಜಯಲಕ್ಷ್ಮಿ ಕುಟುಂಬದಿಂದ ಅನ್ಯಾಯವಾಗಿದೆ. ನನಗೂ ನ್ಯಾಯ ದೊರಕಿಸಿಕೊಡಿ ಎಂದು ಟಿವಿಗಳೆದಿರು ಬೊಂಬಡಾ ಬಜಾಯಿಸುತ್ತಿದ್ದಾರೆ. ಎಂಥ ನ್ಯಾಯ ಬೇಕೆಂಬುದನ್ನು ಮಾತ್ರ ಸ್ಪಷ್ಟವಾಗಿ ಹೇಳುತ್ತಿಲ್ಲ.
ದರ್ಶನ್ ಅವರು ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಕಾಮಾಲೆ ರೋಗದ ಚಿಕಿತ್ಸೆಗಾಗಿ ಐಸಿಯು ಸೇರಿದ್ದರೆ, ವಿಜಯಲಕ್ಷ್ಮಿ ಬಿಜಿಎಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಗಂಡ ಹೆಂಡತಿಯ ಮಧ್ಯೆ ಏನೇ ಇರಲಿ ನಮಗೆ ಮಾತ್ರ ದರ್ಶನ್ ಮುಖ ನಮಗೆ ತೋರಿಸಿ, ಅವರು ಜೈಲಿಂದ ಹೊರಬರಲಿ ಎಂದು ಅಭಿಮಾನಿಗಳು ಆಸ್ಪತ್ರೆಯ ಹೊರಗಡೆ ಆಗ್ರಹಿಸುತ್ತಿದ್ದಾರೆ.