Don't Miss!
- News ಎಸ್ಸಿ, ಎಸ್ಟಿ ಮೀಸಲಾತಿ ಮುಸ್ಲಿಮರಿಗೆ ಹಂಚಿಕೆ: ಸ್ಪಷ್ಟನೆ ನೀಡಿದ ಸಿಎಂ ಸಿದ್ದರಾಮಯ್ಯ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Sports DC vs GT IPL 2024: ಡೆಲ್ಲಿ ಕೋಟೆಯಲ್ಲಿ ವಿಜಯದ ಪತಾಕೆ ಹಾರಿಸುತ್ತಾ ಗುಜರಾತ್?; ಟಾಸ್ ವರದಿ, ಆಡುವ ಬಳಗ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತಡರಾತ್ರಿ 'ರಕ್ತಚರಿತ್ರ' ನೋಡಿದ ಗೃಹಸಚಿವ, ಮೇಯರ್!
ಕೋರಮಂಗಲದ ಪಿವಿಆರ್ ಸಿನಿಮಾ ಹಾಲ್ ನಲ್ಲಿ ಗೃಹ ಸಚಿವ ಆರ್ ಅಶೋಕ್ ಮತ್ತು ಬೆಂಗಳೂರು ಮೇಯರ್ ಎಸ್ ಕೆ ನಟರಾಜ್ ತೆಲುಗಿನ 'ರಕ್ತ ಚರಿತ್ರ' ಚಿತ್ರ ವೀಕ್ಷಿಸಿರುವ ಬಗ್ಗೆ ಅಪಸ್ವರಗಳು ಮಿಡಿದಿವೆ. ಚಿತ್ರಮಂದಿರಕ್ಕೆ ಗೃಹಸಚಿವರು ಹಾಗೂ ಮೇಯರ್ ಅರ್ಧ ಗಂಟೆ ತಡವಾಗಿ(ಎರಡನೇ ಶೋಗೆ) ಬಂದರೂ ಅದಾಗಲೇ ಆರಂಭವಾಗಿದ್ದ ಚಿತ್ರವನ್ನು ಪುನಃ ಪ್ರಸಾರ ಮಾಡಿದ್ದಾರೆ ಎಂಬ ವಿಷಯ ಬೆಂಗಳೂರಿನ ಆಂಗ್ಲ ದೈನಿಕದಲ್ಲಿ ಪ್ರಮುಖ ಸುದ್ದಿಯಾಗಿದೆ.
"ಸಚಿವರು ಅರ್ಧ ಗಂಟೆ ತಡವಾಗಿ ಬಂದ ಕಾರಣ 'ರಕ್ತ ಚರಿತ್ರ' ಚಿತ್ರವನ್ನು ಪುನಃ ಮೊದಲಿನಿಂದ ಪ್ರಸಾರ ಮಾಡಲಾಯಿತು. ಇದರಿಂದ ಪ್ರೇಕ್ಷಕರು ಕಿರಿಕಿರಿ ಅನುಭವಿಸಿದರು. ಪ್ರೇಕ್ಷಕರ ಮನರಂಜನೆಗೂ ಕಲ್ಲು ಹಾಕಿದ್ದೀರಲ್ಲಾ ಸಚಿವರೇ?" ಎಂಬ ಮಾತುಗಳು ಕೇಳಿಬಂದಿವೆ. ಈ ಬಗ್ಗೆ ಗೃಹ ಸಚಿವ ಆರ್ ಅಶೋಕ್ ಮೌನಕ್ಕೆ ಶರಣಾಗಿದ್ದಾರೆ.
ಆದರೆ ಮೇಯರ್ ನಟರಾಜ್ ಅವರು ಮಾತನಾಡುತ್ತಾ, ನಾವು ಸರಿಯಾದ ಸಮಯಕ್ಕೆ ಚಿತ್ರಮಂದಿರಕ್ಕೆ ಹೋಗಿದ್ದೆವು ಎಂದಿದ್ದಾರೆ. ಸಚಿವರು ಹಾಗೂ ಮೇಯರ್ ಜೊತೆ ಚಿತ್ರ ವೀಕ್ಷಿಸಿದ ಪ್ರೇಕ್ಷಕರು ಮಾತ್ರ ನಮಗೆ ಸಿಕ್ಕಾಪಟ್ಟೆ ತೊಂದರೆಯಾಯಿತು. ಪಿವಿಆರ್ ಸಿಬ್ಬಂದಿ ಪದೇ ಪದೇ ಸಚಿವರು ಹಾಗೂ ಮೇಯರ್ ಅವರಿಗೆ ಪಾನೀಯ ಹಾಗೂ ಕುರುಕಲು ತಿಂಡಿಯನ್ನು ಸರಬರಾಜು ಮಾಡುತ್ತಿದ್ದದ್ದು ಕಿರಿಕಿರಿ ಉಂಟು ಮಾಡಿತು ಎಂದು ದೂರಿದ್ದಾರೆ.